nil
ಮಹಾಗದ್ಯ ಬೆಂಪೂರ ಮಾರ್ಗಂ
#
ಬೇಲೂರು ರಾಮಮೂರ್ತಿ ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.
ಅಪರಂಜಿ ಶಿವು
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.
ನಾಡಿನ ಹೆಸರಾಂತ ಸಾಹಿತಿಗಳು, ತತ್ತ್ವ ದರ್ಶನಗಳ ರಸಮಯ ವ್ಯಾಖ್ಯಾನಕಾರರೂ ಆಗಿರುವ ಜಿ. ಬಿ. ಹರೀಶರು ಬರೆದಿರುವ ಸಾ.ಕೃ. ರಾಮಚಂದ್ರ ರಾಯರ ಜೀವನ ಚರಿತ್ರೆಯನ್ನು ಓದುವಾಗ ರೋಮಾಂಚನವಾಗುವ ಜೊತೆ ಜೊತೆಗೇ ದುಃಖವೂ ಆಗುತ್ತದೆ. ಬಹುಶ: ಅವರು ಅಮೆರಿಕದಲ್ಲೋ, ಜರ್ಮನಿಯಲ್ಲೋ ಹುಟ್ಟಿ ಆ ದೇಶಗಳ ಇತಿಹಾಸ ಇಂಡಿಕ್, ಅಧ್ಯಯನ ವಿಭಾಗಗಳಲ್ಲಿ ದುಡಿದಿದ್ದರೆ ಈಗಿಗಿಂತ ಹೆಚ್ಚಿನ ಜಗದ್ವಿಖ್ಯಾತಿ, ಧನ ಸಂಪಾದನೆ ಮಾಡಿ ಮೇಲೇರಬಹುದಿತ್ತು. ಆಸ್ತಿಕ ಸಮಾಜವೇನೋ ಅವರನ್ನು ಗೌರವಿಸಿತ್ತು. ಆದರೆ ಇದ್ದಷ್ಟು ದಿನ ಅವರಿಗೆ ಒಂದು ಪದ್ಮಪ್ರಶಸ್ತಿಯೂ ಬರಲಿಲ್ಲ ಎಂಬುದೇ ನಮ್ಮ ಕಾಲದ ಮಹಿಮೆಯನ್ನು ಹೇಳುತ್ತದೆ. ರಾಯರು ತುಂಬು ಜೀವನ ನಡೆಸಿ ಕನ್ನಡ, ಇಂಗ್ಲಿಷ್, ಸಂಸ್ಕೃತ, ಪ್ರಾಕೃತ ಪಾಳಿ ಭಾಷೆಗಳ ಕಣಜವನ್ನು ತಿಳಿವಿನಿಂದ ತುಂಬಿದರು. ಸಾವಿರದ ಹೊಳೆಯುವ ಈ ಸಾಲಿಗ್ರಾಮಕ್ಕೆ ಇದು ನಮಸ್ಕಾರ ಪೂರ್ವಕ ನುಡಿ ನಮನ.
Showing 3331 to 3360 of 5440 results