nil
#
ಎಸ್ ಜಯಶಂಕರ್
ನಾಗರಾಜ ದೊರೆ
ಭಾರತದಲ್ಲಿ ನಡೆಯುತ್ತಿರುವ ರಾಜಕೀಯ ಧಾರ್ಮಿಕ ಸಾಂಸ್ಕೃತಿಕ ಚರ್ಚೆಗಳಲ್ಲಿ ಅತಿಹೆಚ್ಚು ಬಳಕೆಯಾಗುತ್ತಿರುವ ಪರಿಕಲ್ಪನೆಗಳಲ್ಲಿ ಬಹುತ್ವವೂ ಒಂದು ದೇಶದಲ್ಲಿ ಕಾವಳದಂತೆ ದಟ್ಟವಾಗಿ ಹಬ್ಬಿರುವ ವಿದ್ವೇಷದ ರಾಜಕೀಯ ವಾತಾವರಣಕ್ಕೂ, ಈ ಪರಿಕಲ್ಪನೆಯ ಚರ್ಚೆಗೂ ನಂಟಿದೆ. ಬರಗಾಲದಲ್ಲಿ ಮಳೆಯನ್ನು ಆವಾಹಿಸುವಂತೆ, ಚಾರಿತ್ರಿಕವಾದ ಒತ್ತಡಗಳಲ್ಲಿ ಪರಿಕಲ್ಪನೆಗಳು ಮೈದಳೆಯುತ್ತವೆ. ಬಿಕ್ಕಟ್ಟುಗಳ ಕಾಲದಲ್ಲಿ ನೆಮ್ಮದಿಯ ನಾಡನ್ನು ಕಟ್ಟಲು ಜರೂರಾದ ಪರಿಕಲ್ಪನೆಗಳನ್ನು ತಾತ್ವಿಕವಾಗಿ ರೂಪಿಸುವುದು ತಾತ್ವಿಕ ಹೊಣೆಗಾರಿಕೆ. ಆ ಪರಿಕಲ್ಪನೆಗಳನ್ನು ನಾಡಿನ ಸಂಕಟ ಸಂತಸ ಕನಸು ಚಿಂತನೆ ಸಂಭ್ರಮಗಳನ್ನು ಒಳಗೊಳ್ಳುವಂತೆ ಮಾಡುವುದು ಸಾಂಸ್ಕೃತಿಕ ತಿಳುವಳಿಕೆ ರೂಪಿಸುವ ಕೆಲಸ. ಇದು ಒಬ್ಬರಿಂದಾಗುವುದಲ್ಲ. ಸಾಮೂಹಿಕ ತೊಡಗುವಿಕೆ. ಒಮ್ಮೆಗೆ ಮುಗಿಯುವುದಲ್ಲ. ಚರ್ಚೆ ಸಂವಾದಗಳ ಮೂಲಕ ನಿರಂತರ ಮಾಡುತ್ತಲೇ ಇರಬೇಕಾದ್ದು.
Showing 3031 to 3060 of 5051 results