nil
ಲೇಖಕಿ ಅಕ್ಷಥಾ ಪಾಂಡವಪುರ ಅವರ ಕತಾಸಂಕಲನ ಲೀಕ್ಔಟ್. ಈ ಸಂಕಲನದಲ್ಲಿ 11 ಕತೆಗಳಿವೆ. 2010 ರಿಂದ ಬರೆದಂತದ ಕಥೆಗಳು ಈ ಪುಸ್ತಕದಲ್ಲಿದ್ದು ಹೆಣ್ಣಿನ ಆಸೆ ಅಕಂಶೆ, ತಳಮಳ, ಬದುಕಿನ ಸಂಘರ್ಷ. ಸಂಬಂಧಗಳ ಏಣಿಗೆ ಎಷ್ಟು ಕಾಲಿಗಳು ಎಂಬ ಲೆಕ್ಕಾಚಾರದಲ್ಲಿರುವ ಈ ಕಥೆಗಳು ಕೆಲವು ವಾಸ್ತವಕ್ಕೆ ಹತ್ತಿರವಿದೆ ಎನ್ನಿಸಿದರೆ ಕೆಲವ ರಂಜನಿಯವಾಗಿವೆ. ಮುಖವಾಡಗಳ್ಳನ್ನು ಧರಿಸಿ ತುಂಬಾ ಸೀರಿಯಸ್ ಆಗಿ ಬದುಕು ನಡೆಸುವ, ಸದಾ ನಗುಮುಖವನ್ನು ಸಮಾಜಕ್ಕೆ ತೋರಬಯಸುವ ಎಲ್ಲರೂ ಕಾಣುವ ಕನಸುಗಳ ಸಂಖ್ಯೆಯಲ್ಲಿ fantasy ಯೇ ಹೆಚ್ಚು.... ಹಾಗೆ ಇಲ್ಲಿಯೂ ಸಹಾ ಜೀವನ & ಕನಸುಗಳ ಸಂಘರ್ಷದಲ್ಲಿ ಪಾತ್ರಗಳು ಹೇಗೆ ಕಾಣುತ್ತವೆ ಎಂಬುದನ್ನು ಹೆಚ್ಚು ಕಥೆಗಳಲ್ಲಿ ಕಾಣಬಹುದು..
#
ಹಾನರ್ ಕತೆಗಳೆಂದರೆ ನಮಗೆಲ್ಲರಿಗೂ ಕೇಳಲು, ಓದಲು ಭಯ. ಆದರೂ ಕೇಳಲು ಓದಲು ಕಾತರ. ಯಾಕೆಂದರೆ ಅವು ಕೊಡುವ ರೋಮಾಂಚನದ ಎದುರು ಅವು ಹುಟ್ಟಿಸುವ ಭಯ ಗೌಣ. ಗುರುರಾಜರು ಇಲ್ಲಿ ಪುಟ್ಟ ಪುಟ್ಟ ಕತೆಗಳ ಮೂಲಕ ಭಯ ಹುಟ್ಟಿಸುತ್ತಾರೆ. ಇವನ್ನು ಓದಿ ಮಧ್ಯರಾತ್ರಿ ಎಚ್ಚರವಾದರೆ ನೀರು ಕುಡಿಯ ಹೋಗಲೂ, ಒಬ್ಬನೇ ರಾತ್ರಿ ನಡೆದು ಹೋಗಲೂ ಭಯಪಡುವ ಪರಿಸ್ಥಿತಿಯಾಗಿದೆ. ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿದ ಈ ಕಥೆಗಳು ಇದೀಗ ಸಂಕಲನವಾಗಿದೆ. ಪ್ರಶಾಂತ್ ಭಟ್
ಈ ಪುಸ್ತಕವನ್ನು ಬರೆದ ಡಾ. ಸತ್ಯವತಿ ಮೂರ್ತಿಯವರ ಕನ್ನಡ ಪ್ರೇಮ ಮತ್ತು ಸಾಧನೆಯೂ ಗಮನಾರ್ಹ. ವಿವಿಧ ಪ್ರಕಾರಗಳ ಹಲವು ಪುಸ್ತಕಗಳನ್ನು ರಚಿಸಿರುವ ಇವರು, ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಲ್ಲಿ (ರಾಯಲ್ ಕಾಲೇಜ್ ಆಫ್ ಮ್ಯೂಸಿಕ್) ನಡೆದ ಅಖಿಲ ಭಾರತೀಯ ಕವಿಗೋಷ್ಠಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿ, ಸಾಹಿತ್ಯ ರಚನೆ, ಸಂಶೋಧನೆ ಮತ್ತು ಉಪನ್ಯಾಸಗಳನ್ನು ನೀಡುತ್ತಾ ಬಂದಿರುವ ಇಂಗ್ಲೆಂಡಿನ ಸರ್ಕಾರದ ವತಿಯಿಂದ 'ಪ್ರಿಸನ್ ಮಿನಿಸ್ಟರ್' ಆಗಿ ನೇಮಕಾತಿಯಾಗಿರುವುದು ಹೆಮ್ಮೆಯ ವಿಚಾರ. ವಿದೇಶದಲ್ಲಿ ನೆಲೆಸಿದ್ದು, ಇಷ್ಟೆಲ್ಲಾ ಬಿಡುವಿಲ್ಲದ ಕೆಲಸದ ನಡುವೆಯೂ, ಕನ್ನಡದ ಕುರಿತು, ಕನ್ನಡದ ಸಣ್ಣ ಕಥೆಗಳ ಕುರಿತು ಅಪಾರ ಅಭಿಮಾನವಿಟ್ಟುಕೊಂಡು, ಈ ಕೃತಿಯನ್ನು ಬರೆದಿರುವುದು ಸಹ ಎಲ್ಲರೂ ಹೆಮ್ಮೆ ಪಡುವ ವಿಚಾರ. "ಸಣ್ಣ ಕಥೆಗಳಲ್ಲಿ ಜೀವನ ತತ್ವ"ದಂತಹ ಅಪರೂಪದ ಕೃತಿಯನ್ನು ಕನ್ನಡದ ಓದುಗರಿಗೆ ನೀಡಿರುವ ಡಾ. ಸತ್ಯವತಿ ಮೂರ್ತಿಯವರನ್ನು ಮನಸಾರೆ ಅಭಿನಂದಿಸುತ್ತೇನೆ. -ಶಶಿಧರ ಹಾಲಾಡಿ
Showing 391 to 420 of 470 results