nil
ಪ್ರಸ್ತುತ ಜಮಾನದಲ್ಲಿ ನಿಸ್ವಾರ್ಥ ಮನಸ್ಸಿನ ಯುವ ಪೀಳಿಗೆ ಕಾಣಸಿಗುವುದು ಅಪರೂಪ. ಎಲ್ಲೋ ನೋಡಿದ ಕೇಳಿದ ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವ ವ್ಯಕ್ತಿಯ ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿತ್ತು. ಅದೇ ವ್ಯಕ್ತಿತ್ವವನ್ನು ಈ ಕಾದಂಬರಿಯಲ್ಲಿ ಒಂದು ಪಾತ್ರವನ್ನಾಗಿಸಿದೆ. ಅಂತಹ ಯುವಕನ ‘ಜೊತೆಯಾಗಿ ಬೆಳೆಯೋಣ’ ಎನ್ನುವ ಧ್ಯೇಯ ನನ್ನನ್ನು ಬಹಳವಾಗಿ ಕಾಡಿತ್ತು. ಇನ್ನೂ ಅಂತಹ ಆದರ್ಶ ಧ್ಯೇಯಗಳನ್ನು ಹೊತ್ತ ಯುವಕರು ನಮ್ಮ ನಡುವೆ ಇದ್ದಾರೆ ಎನ್ನುವ ಅಚ್ಚರಿಯಿಂದ ಈ ಕಾದಂಬರಿಯನ್ನು ಬರೆದೆ. ಈ ರೀತಿಯ ಯುವ ಪೀಳಿಗೆ ಇನ್ನಷ್ಟು ಬೆಳೆದರೆ ಗಾಂಧೀಜಿ ಯವರು ಕಂಡ ರಾಮರಾಜ್ಯದ ಕನಸು ನನಸಾದೀತು. ತನ್ನ ಗುರಿ ತಲುಪಿದ ಮೇಲೆಯೇ ಬಾಕಿ ವಿಚಾರಗಳೆಂದು ಸಂಯಮದಿAದ ವರ್ತಿಸಿ ತನ್ನ ಪ್ರೀತಿಯಲ್ಲಿಯೂ ಆದರ್ಶವನ್ನು ಮೆರೆದ ಆರ್ಯನ್ನ ಪಾತ್ರ, ಎಂದೂ ಎಲ್ಲೆ ಮೀರದ ಚಿಗುರುವಿನಂತಹ ಪಾತ್ರ ಓದುಗರಿಗೆ ಮುದ ನೀಡದಿರಲಾರದು.
Showing 391 to 420 of 814 results