nil
ಬದಲಾವಣೆ ಜಗದ ನಿಯಮ ಎಂದುಕೊಂಡರೂ ಕುಟುಂಬ ವ್ಯವಸ್ಥೆಯನ್ನು ಹಿಡಿದಿಡುವ ಭಾವನಾತ್ಮಕ ಸಂಬಂಧಗಳು ಇರದೆ ಹೋಗುವುದು ಇತ್ತೀಚಿನ ದುರಂತ ಕಾದಂಬರಿಯ ಶೀರ್ಷಿಕೆಯೇ ಹೇಳುವಂತೆ ಕೌಟುಂಬಿಕ ವ್ಯವಸ್ಥೆ ಮತ್ತು ಅದರೊಳಗಿರುವವರ ಭಾವನೆಗಳನ್ನೇ ಕೇಂದ್ರೀಕರಿಸಿ ಬರೆದಿರುವ ಕಾದಂಬರಿ 'ಭಾವನೆ' ಇಂತಹ ಸೂಕ್ತ ಎಳೆಗಳನ್ನೇ ಹೆಣೆದು ಕತೆಯಾಗಿಸುವುದರಲ್ಲಿ ಸಿರಿಮೂರ್ತಿಯವರು ನಿಪುಣರು. ದೇಶದ ಸಂಸ್ಕೃತಿಯು ಆಧುನಿಕತೆಯ ಹೆಸರಿನಲ್ಲಿ ಸವಕಲಾಗುತ್ತಿರುವುದು, ಹೊಸ ಪೀಳಿಗೆಯ ಸಾಗರದಾಚೆಗಿನ ಸೀಮೋಲ್ಲಂಘನ, ವಿದೇಶಿ ಸಂಸ್ಕೃತಿಯ ಪರಿಚಯ, ಭಾರತೀಯ ಸಂಸ್ಕೃತಿಯ ಪರಂಪರೆ, ಹಿರಿಮೆಯ ಪರಳ ವಿವರಣೆ, ಮನ ಮುಟ್ಟುವ ಪ್ರಸ್ತುತಿ ಕಾದಂಬರಿಯ ಭಾಗವಾಗುತ್ತಾ ಹೋಗುತ್ತದೆ. ಅಂತ್ಯದ ಬಗ್ಗೆ ಕುತೂಹಲ ಕಾಳಿಸಿಕೊಂಡೇ ಸಾಗುವ ಕತೆ ಎಲ್ಲವೂ ಕಾದಂಬರಿಯನ್ನು ಆಪ್ತವಾಗಿಸುತ್ತದೆ. ಎಲ್ಲರೂ ಓದಬೇಕಾದ ಕಾದಂಬರಿ. - ಗೀತಾ ಕುಂದಾಪುರ
Showing 541 to 570 of 814 results