ಜೀವನೋತ್ಸಾಹ ಮತ್ತು ವಿಷಾದ ಹಾಸುಹೊಕ್ಕಾಗಿರುವ ಸಂಗತಿಗಳನ್ನು ಬಿ.ಯು. ಗೀತಾ ಸೊಗಸಾಗಿ ಹಿಡಿದಿಡಬಲ್ಲ ಕಾದಂಬರಿಕಾರರು ಗೀತಾ ಸಂಭಾಷಣೆಯಲ್ಲೇ ಕತೆ ಕಟ್ಟುತ್ತಾ ಹೋಗುತ್ತಾರೆ. ಜೀವನಾನುಭವ, ಕಲ್ಪನೆ ಮತ್ತು ಬಾಲ್ಯದ ನೆನಪುಗಳೊಂದಿಗೆ ಬರೆಯುವ ಗೀತಾ ಸೃಷ್ಟಿಸುವ ಪಾತ್ರಗಳು ಕೂಡ ಬದುಕಿಗೆ ಅಂಟಿಕೊಂಡಂತೆ ಇರುತ್ತವೆ. ಹಾಲಲ್ಲಿ ಕೆನೆಯಾಗಿ ಕಾದಂಬರಿಯ ಶೀರ್ಷಿಕೆಯಲ್ಲೇ ಗೀತಾ ಅವರಿಗೆ ವಿಶಿಷ್ಟವಾದ ಸಂವೇದನೆ ಮತ್ತು ಕೌಟುಂಬಿಕ ಒಳನೋಟ ಕಾಣಿಸುತ್ತದೆ ಹಾಲಿನ ಕೆನೆಯಾಗಬೇಕಾದರೆ ಹಾಲು ಕುದಿಯಬೇಕು ನಂತರ ತಣಿಯಬೇಕು. ಹೆಣ್ಣಿನ ಬದುಕು ಕೂಡ ಇಂಥದ್ದೇ ಚಕ್ರದಲ್ಲಿ ಸಿಲುಕಿ ಅನುಭವಿಸುವ ಉದ್ದೇಗದ ಅಳಲು, ನಿರಾತಂಕದ ಹುಯಿಲು ಈ ಕತೆಯನ್ನು ಸುಪ್ತವಾಗಿ ಪೊರೆಯುತ್ತದೆ. ಕತೆ, ಕಾದಂಬರಿ, ಸಂಭಾಷಣೆ ಬರೆಯುತ್ತಾ ಬದುಕಿನ ರುಚಿ ಹೆಚ್ಚಿಸುವ ಸಂಗತಿಗಳ ಬಗ್ಗೆ ವಿಶೇಷ ಪ್ರೀತಿಯುಳ್ಳ ಗೀತಾ ಅವರ ಅನೇಕ ಕಾದಂಬರಿಗಳನ್ನು ನಾನು ಸ್ವಯಿಚ್ಛೆಯಿಂದ ಓದಿದ್ದೇವೆ. ಅವರು ಬರೆದ ಧಾರಾವಾಹಿಗಳನ್ನು ನೋಡಿದ್ದೇನೆ. ಅವರು ಅಭಿನಯ ಚತುರರೂ ಹೌದು. ಅವರ ಬಳಗ ಕೂಡ ದೊಡ್ಡದು. ಅವರ ಜೀವನಪ್ರೀತಿ, ಹುರುಪು ಮತ್ತು ಇಂಗಿತಜ್ಞತೆ ಅವರೊಳಗಿರುವ ಕಾದಂಬರಿಕಾರ್ತಿಯ ನೆರವಿಗೆ ಬಂದಿದೆ. ಹೀಗಾಗಿಯೇ ಸರಳವಾಗಿ ಸಾಗುವ ಕಾದಂಬರಿಗಳಲ್ಲೂ ಜೀವಕ್ಕೆ ಹತ್ತಿರವೆನಿಸುವ ಸನ್ನಿವೇಶ, ಮಾತು, ಅಂತರಾರ್ಥಗಳು ಮಿಂಚುವಂತೆ ಗೀತಾ ಬರೆಯುತ್ತಾರೆ. ಈ ಕಾದಂಬರಿಯಲ್ಲಿ ಅವರ ಬಾಲ್ಯ, ತಾರುಣ್ಯ ಮತ್ತು ನಡುವಯಸ್ಸಿನ ವಿವೇಕ ಬೆರೆತಿದೆ. ಹೀಗಾಗಿ ಇದು ಕೆನೆಗಟ್ಟಿದೆ. ಜೋಗಿ
ಹಣ ಯಾರಿಗೆ ತಾನೆ ಕಹಿ? ಅವನಿಗೊಂದು ದೊಡ್ಡ ಕನಸಿತ್ತು. ಸಮಾಜದಲ್ಲಿ ತಾನೂ ಒಬ್ಬ ಗಣ್ಯ ವ್ಯಕ್ತಿ ಅನಿಸಿಕೊಳ್ಳಬೇಕು, ಕೈ ತುಂಬಾ ಹಣ ಗಳಿಸಬೇಕೆನ್ನುವುದು.
ಹಾವು ಏಣಿ ಆಟ ಒಂದು ವಿಶಿಷ್ಟ ಕಥಾವಸ್ತು ಹೊಂದಿರುವ ಕಾದಂಬರಿ. ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಹೊಸ ಪ್ರಯತ್ನ. ಇದೊಂದು "ಮೆಡಿಕೋ ಲೀಗಲ್ ಡ್ರಿಲ್ಲರ್" ಔಷಧ ವಿಜ್ಞಾನದ ಪರ ಮತ್ತು ವಿರುದ್ಧದ ಕಾನೂನಿನ ಹೋರಾಟದ ಕಥೆ. ಈ ಕಾದಂಬರಿಯಲ್ಲಿ ಒಂದು ಕೊಲೆಯ ತನಿಖೆಯಿದೆ. ಅದರ ಹಿಂದಿರುವ ಭಯಾನಕ ಸತ್ಯದ ಅನಾವರಣವಿದೆ. ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಅವ್ಯಕ್ತವಾಗಿ ಪ್ರವೇಶಿಸಿ, ನಮ್ಮ ಜೀವದ ಜೀವದ ಜೊತೆ, ಜೀವನದ ಜೊತೆ ಆಟವಾಡುವ ಫಾರ್ಮಾ ಲಾಬಿಯ ದುರಾಸೆಯಿದೆ. ಇದರ ಮಧ್ಯೆ ಅರಿತೊ ಅರಿಯದೆಯೋ ನಲುಗುವ ಜನರ ನೋವಿದೆ. ಆ ನೋವನ್ನೇ ಬಂಡವಾಳ ಮಾಡಿಕೊಳ್ಳುವ ಸ್ವಾರ್ಥವಿದೆ. ಇವೆಲ್ಲದರ ವಿರುದ್ಧ ಕೋರ್ಟ್ನಲ್ಲಿ ನಡೆಸುವ ಹೋರಾಟವಿದೆ. ಸತ್ಯ ಅನ್ನುವುದು ನಮ್ಮ ನಮ್ಮ ದೃಷ್ಟಿಕೋನವಷ್ಟೇ. ನಮ್ಮ ಕಣ್ಣಿಗೆ ಕಂಡಿದ್ದು, ನಾವು ತಿಳಿದಿರುವುದು ಅಥವಾ ನಾವು ತಿಳಿಯಲೆಂದೇ ಕೊಡುವ ಮಾಹಿತಿಗಳು ಮಾತ್ರವೇ ಸತ್ಯವಲ್ಲ. ಒಮ್ಮೆ ಶೋಧಿಸಲು ಮುಂದಾದಾಗ ಆ ಸತ್ಯದ ಪರದೆಯ ಹಿಂದೆ ಅಡಗಿರುವ ಇನ್ನೊಂದು ಸತ್ಯ ನಮ್ಮ ಮುಂದೆ ಧುತ್ತನೆ ಬಂದು ನಿಂತಾಗ ಅದು ನಮ್ಮ ನಂಬಿಕೆಯ ಬುನಾದಿಯನ್ನೇ ಅಲುಗಾಡಿಸಿ ಯಾರು ಸರಿ ಯಾರು ತಪ್ಪು ಎನ್ನುವ ಪ್ರಶ್ನೆ ಹುಟ್ಟಿಹಾಕುತ್ತದೆ.
nil
ಸಂಪಟೂರು ವಿಶ್ವನಾಥ್
ರಾಮಿ
#
ಈ ಜಗತ್ತಿನಲ್ಲಿ ಕ್ರೂರ ಪ್ರಾಣಿಗಳಿವೆ. ನರ ಭಕ್ಷಕ ಜೀವಿಗಳಿವೆ. ಆದರೆ ಪ್ರಕೃತಿಯ ದೃಷ್ಟಿಯಲ್ಲಿ ನೋಡಿದರೆ ಮನುಷ್ಯನಿಗಿಂತ ಕೆಟ್ಟ ಪ್ರಾಣಿ ಇನ್ನೊಂದಿಲ್ಲ ಎನ್ನುತ್ತಾರೆ. ಅಂತಹ ಕ್ರೂರ ಮನುಷ್ಯರ ಪೈಕಿ ಹಿಟ್ಲರ್ ನಂಬರ್ ಒನ್ ಸ್ಥಾನದಲ್ಲಿ ನಿಲ್ಲುತ್ತಾನೆ. ಆತ ಒಬ್ಬ ಸರ್ವಾಧಿಕಾರಿಯಾಗಿ, ರಾಜಕಾರಣಿಯಾಗಿ, ದೇಶಭಕ್ತನಾಗಿ ಮೆಚ್ಚುಗೆ ಗಳಿಸುತ್ತಾನೆ. ಆದರೆ ಆತ ಮಾಡಿದ ನರ ಮೇಧ ಇದೆಯಲ್ಲ ಕಣ್ಣಂಚಿನಲ್ಲಿ ನೀರಲ್ಲ ರಕ್ತವನ್ನು ತೊಟ್ಟಿಕ್ಕಿಸುತ್ತದೆ.
ಕರಾವಳಿಯ ಪುಟ್ಟ ಊಲಗೆ ಮಾತ್ರ ಲಗತ್ತಾಗುವ ಈ ಚಿಟಿಜ ನೋಟಗಳು, ಜೀವಗಳು ಈಗ ಅಲ್ಲಯೂ ಅಪರೂಪವಾಗುತ್ತಿರುವ ಈ ಕಾಲದಲ್ಲಿ ಈ ನೆನಪಿನ ಹೆಣಿಗೆಗಳು ಮುಂದೊಮ್ಮೆ ಹೊಸಕಾಲದ ಹೊಸಪೀಱಗೆಯ ಕುತೂಹಲದ ಹಾಗೆ ಬೆಚ್ಚನೆಯ ಹೊಏಕಯಾಗಿ ಒದಗಬಹುದು, ಕಥೆಗಾತಿಯಾಗಬೇಕೆನ್ನುವ ಹಂಬಲದ ಶುಭಶ್ರೀಯ ಅನುಭವದ ಬುತ್ತಿಯಲ್ಲಿ ಸಾಕಷ್ಟು ಕಥಾಭೀಜಗಳವೆ
ಕರಾವಳಿಯ ಪುಟ್ಟ ಊಲಗೆ ಮಾತ್ರ ಲಗತ್ತಾಗುವ ಈ ಚಿಟಿಜ ನೋಟಗಳು, ಜೀವಗಳು ಈಗ ಅಲ್ಲಯೂ ಅಪರೂಪವಾಗುತ್ತಿರುವ ಈ ಕಾಲದಲ್ಲಿ ಈ ನೆನಪಿನ ಹೆಣಿಗೆಗಳು ಮುಂದೊಮ್ಮೆ ಹೊಸಕಾಲದ ಹೊಸಪೀಱಗೆಯ ಕುತೂಹಲದ ಹಾಗೆ ಬೆಚ್ಚನೆಯ ಹೊಏಕಯಾಗಿ ಒದಗಬಹುದು, ಕಥೆಗಾತಿಯಾಗಬೇಕೆನ್ನುವ ಹಂಬಲದ ಶುಭಶ್ರೀಯ ಅನುಭವದ ಬುತ್ತಿಯಲ್ಲಿ ಸಾಕಷ್ಟು ಕಥಾಭೀಜಗಳವೆ,
##
ಎಂಟನೇ ದರ್ಜೆಯ ನಾಗರಿಕರಾಗಿಯೇ ಮುಂದುವರಿಯುತ್ತಾರೆ ಎಂಬುದನ್ನು ಪ್ರಬಲವಾಗಿ ತೋರಿಸಿದ್ದಾರೆ; ಓದುಗರ ಹೃದಯ ಮತ್ತು ಮನಸ್ಸನ್ನು ಜಾಗೃತಗೊಳಿಸುವ ಭರವಸೆ ಇದೆ. ಓದಲೇ ಬೇಕಾದ ಪುಸ್ತಕ. -ಜೆ. ಸಾಯಿ ದೀಪಕ್ ವಕೀಲರುHindu
ಸಣ್ಣ ಸಣ್ಣ ಸಂಗತಿಗಳನ್ನು ಸಾಂದ್ರವಾಗಿ ಭಾವಪೂರ್ಣವಾಗಿಸುವ ಇಲ್ಲಿನ ಕಥೆಗಳು; ಚಂದದ ಬದುಕೊಂದಕ್ಕಾಗಿ ಹಂಬಲಿಸಿದಂತಿವೆ. ಹಿನ್ನೀರದಂಡೆಯಿಂದ ಮಹಾನಗರದ ಮಧ್ಯಕ್ಕೆ ತಂದು ನಿಲ್ಲಿಸಿದ ಕಥೆಗಾರ್ತಿಯ ಜೀವನಾನುಭವಗಳೇ ಕಥೆೆಗಳ ಹೂರಣವೆನಿಸುತ್ತದೆ. ಸಮಕಾಲೀನ ಸಂದಿಗ್ಧತೆಗಳ ಸೂಕ್ಷö್ಮ ಪದರುಗಳನ್ನು ಸಾವಧಾನದಿಂದ ಕಂಡರಸುವ ಕತೆಗಳು; ವಾಸ್ತವವನ್ನು ತದೇಕಚಿತ್ತದಿಂದ ದಿಟ್ಟಿಸಿವೆ. ಹೆಣ್ಣಿನ ಒಳತೋಟಿಗಳು ಆಧುನಿಕ ಅವಸ್ಥಾಂತರದ ಗರಡಿಯಲ್ಲಿ ಪಳಗಿ ಗಟ್ಟಿಪಾತ್ರಗಳಾಗಿ ಅರಳಿ ಹೊರಳಿವೆ. ಕನ್ನಡ ಕಥಾಲೋಕಕ್ಕೆ ಸೇರ್ಪಡೆಯಾಗಲೇಬೇಕಾದ ಕಥೆಗಳಿವು ಎನಿಸುತ್ತದೆ. - ಡಾ. ರತ್ನಾಕರ ಸಿ.ಕುನುಗೋಡು ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನಪೇಟೆ
...ಬೇಟೆಯನ್ನು ಒಂದು ಕಾಯಕ ಪ್ರಜ್ಞೆಯಲ್ಲಿ ಬಾಳಿದ ಕಾರ್ಬೆಟ್ ನ ಅರಣ್ಯ ಪ್ರೀತಿ ಇರುವೆಂಭತ್ತು ಕೋಟಿ ಜೀವರಾಶಿಗಳನ್ನೂ ಅವುಗಳ ಬದುಕುವ ಹಕ್ಕನ್ನೂ ಮಾನ್ಯ ಮಾಡುವ ಗುಣಗೌರವದಿಂದ ಕೂಡಿದ್ದು.... ಪ್ರತಿಯೊಂದು ನರಭಕ್ಷಕ ಹುಲಿಯನ್ನು ಬೇಟೆಯಾಡಿದಾಗಲೂ ಆದ ಅನುಭವ ವಿವರಗಳನ್ನು ಕಟ್ಟಿಕೊಡುವಾಗ ಅವರು ವಿವರಿಸುವ ಕಾಡಿನ ಬಗೆ ವಿನ್ಯಾಸ ಅವರ ನೆನಪಿನ ತೀಕ್ಷ್ಣತೆಗೆ ಗ್ರಹಿಕೆಯ ಸೂಕ್ಷ್ಮತೆಗೆ ಕನ್ನಡಿ ಹಿಡಿದಂತಿದೆ. ಮೃತ್ಯು ಎದುರಿಗೇ ನಿಂತಾಗಲೂ ಧೃತಿಗೆಡದ ಅವರ ಆತ್ಮವಿಶ್ವಾಸದ ನಿಲುಮೆ ಅನನ್ಯವಾದುದು. ಇದೆಲ್ಲವನ್ನೂ ಅವರ ಬರಹ ತನ್ನ ಎದೆಯಲ್ಲಿ ತುಂಬಿಕೊಂಡಿದೆ. ಯಾವ ಜೀವ ವಿಜ್ಞಾನವೂ ತಿಳಿಸಲಾರದ ಎಷ್ಟೋ ಸೂಕ್ಷ್ಮಾತಿ ಸೂಕ್ಷ್ಮ ವಿಷಯಜ್ಞಾನವನ್ನು ಅನುಭವ ಮಾತ್ರದಿಂದ ಪಡೆದವರಾದ ಕಾರ್ಬೆಟ್ ಒಂದು ಅದ್ಭುತ, ಬೇಟೆಯನ್ನು ನಿಸರ್ಗಧರ್ಮಕ್ಕೆ ಎರವಾಗದ ನಡೆಯಲ್ಲಿ ಜೀವ ಸಂರಕ್ಷಕ ವಿಧಿಯಂತೆ ಪರಿಪಾಲಿಸಿದ ಮಹಾನುಭಾವ ಕಾರ್ಬೆಟ್. ...ಇಂಥ ಬೇಟೆಯ ಸಂತನ ಅನುಭವ ಕಥನವನ್ನು ಓದಿದ್ದೇ ನನ್ನ ಅಕ್ಷರಜ್ಞಾನದ ಅದೃಷ್ಟಭಾಗ್ಯವೆಂದು ನನ್ನ ತಿಳಿವು ಹೇಳುತ್ತಿದೆ. ಹಿಮಾಲಯದ ನರಭಕ್ಷಕಗಳು ...ಗೆಳೆಯ ವಿವೇಕಾನಂದನಿಗೆ ಆತ್ಮೀಯ ಕೃತಜ್ಞತೆಗಳು, ಕಾರಣ ಇಷ್ಟು ವಿಸ್ತಾರವಾದ ಈ ಬರಹವನ್ನು ಧ್ಯಾನಸ್ಥಿತಿಯ ಬದ್ಧತೆಯಲ್ಲಿ ಒಳಕ್ಕೆ ತಗೆದುಕೊಂಡು ಅದನ್ನು ಕನ್ನಡೀಕರಿಸಿದ್ದಕ್ಕೆ. ಇದನ್ನು ಕೇವಲ ಅನುವಾದ ಎಂದು ಹೇಳಿದರೆ ಅಪಚಾರವಾಗುತ್ತದೆ. ಕನ್ನಡ ಭಾಷೆಯ ಜಾಯಮಾನಕ್ಕೆ ಕಿಂಚಿತ್ತೂ ಊನವಾಗದ ಪ್ರಜ್ಞೆಯಲ್ಲಿ ಕಾರ್ಬೆಟ್ನ ಅನುಭವವನ್ನು ಕನ್ನಡಿಗರಿಗೆ ಕಟ್ಟಿಕೊಟ್ಟಿರುವ ಈ ಕಾರ್ಯ ಗುರುತರವಾದ ಹೊಣೆಗಾರಿಕೆಯಿಂದ ಮಾಡಿದ ಫಲವೇ ಸರಿ. ಈ ಜೀವಲೋಕದ ಬಗೆಗೆ ಕಾರ್ಬೆಟ್ ಪ್ರಜ್ಞೆಯನ್ನು ಬೆಳೆಸಿಕೊಂಡ ಮನಸ್ಸು ಮಾತ್ರ ಇಂಥ ಸಾಹಸಕ್ಕೆ ಶ್ರದ್ದೆ ಗೌರವಗಳಿಂದ ತೊಡಗುತ್ತದೆ.
Showing 3391 to 3420 of 3487 results