nil
ಊರ ಉಸಾಬರಿ ಮಾತು-ರತಿ ಊರೆಂದೋ ಊರು ನಾನು ನೆಲೆಯೂರಿದ ಊರುಗಳಲ್ಲ. ನನ್ನೊಳಗೆ ನೆಲೆಯೂರಿದ ಊರುಗಳಿವು. ನನ್ನೂರು ಯಾವುದು ಅಂತ ಕೇಳಿದರೆ ನನಗೆ ಈಗಲೂ ಸ್ಪಷ್ಟವಾಗಿ ಹೇಳಲಾಗುವುದೇ ಇಲ್ಲ. ಕೆಲವು ನನ್ನನ್ನ ತಮ್ಮವಳು ಅಂತ ಅಕ್ಕೊಂಡವು. ಇನ್ನೂ ಕೆಲವು ನನ್ನೂರಾಗಬಹುದಾಗಿದ್ದವು. ನನ್ನನ್ನು ಪರಕೀಯಳಂತೆಯೇ ಕಂಡವು. ಬೀದರಿನಲ್ಲಿ ಹುಟ್ಟಿ ಬೆಳೆದರೂ ಎಲ್ಲಿಯೂ ಬೇರೂರಿಲ್ಲ, ಬಳ್ಳಿಯಂತೆ ಹಬ್ಬುತ್ತ. ಹಬ್ಬಿದೆಡೆಯೆಲ್ಲ ಕಳ್ಳುಬಳ್ಳಿಯೊಂದಿಗೆ ಅಂಟಿಕೊಳ್ಳುತ್ತ ಬದುಕಿರುವೆ. ಕಣಕಣದಲ್ಲಿರುವ ಕಾಶಿಗೆ ಹೋದಾಗಲೇ ಅರಿವಾದುದು. ನನ್ನ ಅಣುಅಣುವಿನಲ್ಲಿಯೂ ಬೀದರ್ ತುಂಬಿಕೊಂಡಿದೆ ಅಂತ. ಅಣುವಿನಲ್ಲಿಯೂ, ಕಣದಲ್ಲಿಯೂ ಒಂದಿನಿತು ಪ್ರೀತಿಗಾಗಿ ತಹತಹ ಇದ್ದದ್ದೇ. ಸಿಗದ ಪ್ರೀತಿಯ ಬೆನ್ನಟ್ಟಿದಾಗ, ಕಳೆದುಕೊಂಡ ಸುರಕ್ಷೆಯ ಭಾವವನ್ನು ನೀಡಿದ್ದು ಈ ಬರಹಗಳು. ಹೀಗೆ ಒಟ್ಟುಗೂಡಿ, ಊರ ಉಸಾಬರಿಯ ನೆಪದಲ್ಲಿ ಪುಸ್ತಕರೂಪದಲ್ಲಿ ಬಂದಿದೆ.
#
ಬನ್ನಂಜೆ ಗೋವಿಂದಾಚಾರ್ಯ
ಲೇಖಕ ಲಕ್ಷ್ಮಣ ಕೌಂಟೆ ಅವರ ಪೌರಾಣಿಕ ಕಾದಂಬರಿ ಕೃತಿ ʻಋಷ್ಯಶೃಂಗ: ಯುವ ಮಳೆಮುನಿಯೋರ್ವನ ರಾಮಾಯಣ ಪೂರ್ವದ ಕಥೆ ಆಧಾರಿತ ಕಾದಂಬರಿʼ. ಮಹಾಭಾರತದಲ್ಲಿ ಒಂದು ಸಣ್ಣ ಉಪಕಥೆ ಆಗಿ ಬರುವ ಖಷ್ಯಶೃಂಗ ಮುನಿಯ ಕಥೆಯನ್ನು ಕುತೂಹಲಕಾರಿ ಆಗಿ ಹೇಳಿದ್ದಾರೆ. ಇವರು ಕಶ್ಯಪನ ಮೊಮ್ಮಗ ಋಷಿ ವಿಭಾಂಢಕನ ಮಗ. ತನ್ನ ಪತ್ನಿ ತನ್ನನ್ನು ತೊರೆದು ಹೋದಳೆಂಬ ಸಿಟ್ಟಿನಲ್ಲಿ ವಿಭಾಂಢಕ ಮಾನವ ದ್ವೇಷಿ ಆಗಿ ತನ್ನ ಮಗನನ್ನು ಕೌಶಿಕಿ ನದಿ ತೀರದ ಗೊಂಡಾರಣ್ಯ ಒಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಎಲ್ಲಾ ಮಂತ್ರ ತಂತ್ರ ಕಲಿಸಿ ಬೆಳೆಸುತ್ತಾನೆ. ತಂದೆಗೆ ವಿಧೇಯನಾಗಿ ಬೆಳೆದ ಋಷ್ಯಶೃಂಗ ಕಠಿಣ ಸಾಧನೆ ಮೂಲಕ ಮಳೆ ದೇವರನ್ನು ಒಲಿಸಿಕೊಳ್ಳುತ್ತಾನೆ. ಹೀಗೆ ತಾನು ಕಾಲು ಇಟ್ಟ ಕಡೆ ಮಳೆ ತರಿಸಲು ಸಾಧ್ಯ ಇರುವ ಅದ್ಬುತ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತಾನೆ. ಆದರೆ ಯೌವನದಲ್ಲಿ ತುಂಬಾ ಸ್ವೇಚ್ಛೆಯಿಂದ ವರ್ತಿಸಿದ ಕಾರಣ ಪುರುಷತ್ವ ಕಳೆದುಕೊಡಿರುತ್ತಾನೆ. ಈ ಕಾದಂಬರಿಯಲ್ಲಿ ರಾಜರ ಸ್ವಾರ್ಥ ಲಂಪಟತನವನ್ನೂ ಅನಾವರಣಗೊಳಿಸಿದ್ದಾರೆ. ಮಳೆ ನೀರಿನ ಸದುಪಯೋಗ, ಗುಡಿ ಗುಡಾರ ಮೇಲೆ ಖರ್ಚು ಮಾಡುವ ಹಣವನ್ನು ಪ್ರಜೆಗಳ ಹಿತಕ್ಕೆ ಖರ್ಚು ಮಾಡಬೇಕು ಎನ್ನುವ ನೀತಿಯನ್ನೂ ಹೇಳಿದ್ದಾರೆ.
ಪ್ರೊ ಎಲ್ ಎಸ್ ಶೇಷಗಿರಿ ರಾವ್
ನಗರವಾಸಿಗಳು ಸ್ವರ್ಗವೆಂದು ಉದ್ಘರಿಸುವ ಸಕಲೇಶಪುರ ಭಾಗದ ಹಸಿಹಸಿ ಚಿತ್ರಣ, ಅಲ್ಲಿನ ಜನಜೀವನ, ಕೆಲವೇ ವರ್ಷಗಳಲ್ಲಾದ ಭೌಗೋಳಿಕ ಬದಲಾವಣೆಗಳು, ಅಪರೂಪವಾಗುತ್ತಿರುವ ಅಪ್ಪಟ ಮಲೆನಾಡಿನ ಮರಗಳು, ಪ್ರಾಣಿಪಕ್ಷಿಗಳು, ಕ್ರಿಮಿಕೀಟಗಳು, ಮಲೆನಾಡಗಿಡ್ಡ ತಳಿಯ ದನಗಳು ಹೀಗೆ ಸಾಗುವ ಕೃತಿಯಲ್ಲಿ ಅಚ್ಚುಕಟ್ಟಾದ ಕಥಾ ಹಂದರವು ಒಂದು ಸುಂದರ ಪ್ರಾಕೃತಿಕ ಪ್ರವಾಸದಂತೆ ಸಾಗಿದೆ.
ಸುಧಾ ಆಡಕಳ
ಶ್ರೀಕೃಷ್ಣಯ್ಯ ಅನಂತಪುರ
Nil
Showing 451 to 480 of 3493 results