nil
ಕೆ ಸಿ ಶಿವರಾಮ್
#
"ನಮ್ಮ ಕಾಲ ಹಿಂಗ್ ಇರ್ಲಿಲ್ಲಪ್ಪ.." ಅನ್ನೋ ಆಪಾದನೆ ಇಂದಿನ ಜನರೇಶನ್ನಿನ ಮೇಲಿದೆ. ಅದನ್ನು ಒಪ್ಪುವಂತೆಯೇ ಇಂದಿನ ಜನರೇಶನ್ನಿನ ವರ್ತನೆ ಕೂಡ ಇದೆ. ವ್ಯವಹಾರಗಳಷ್ಟೇ ಮುಖ್ಯ, ದುಡ್ಡಿದ್ರೆ ದುನಿಯಾ ಅನ್ನೋ ಮನಸ್ಥಿತಿಯವರೇ ಹೆಚ್ಚು. ವಿಜ್ಞಾನ ತಂತ್ರಜ್ಞಾನಗಳು ಪ್ರಾಯೋಗಿಕವಾಗಿ ಎಷ್ಟೊಂದು ವಿಷಯಗಳನ್ನು ಜನರಿಗೆ ಹತ್ತಿರದಿಂದ ಅರ್ಥ ಮಾಡಿಸಿದರೂ.. ಬದುಕಿನ ಶಿಸ್ತು, ಪ್ರೀತಿ, ಸ್ನೇಹ, ಸಂಬಂಧಗಳನ್ನು ಮನುಷ್ಯನಿಗೆ ಯಾರೂ ಸಂಪಾದಿಸಿಕೊಡುವುದಿಲ್ಲ. ಉನ್ನತ ಸ್ಥಾನವನ್ನೇರಲು ಯಾರೂ ಸಹಕರಿಸುವುದಿಲ್ಲ. ನಮಗೆ ನಾವೇ ಧೈರ್ಯ ತುಂಬಿಕೊಳ್ಳಬೇಕು, ನಮಗೆ ನಾವೇ ಆತ್ಮಸ್ಥೆರ್ಯ ಹುಡುಕಿಕೊಳ್ಳಬೇಕು, ನಮಗೆ ನಾವೇ ಸಮಾಧಾನ ಹೇಳಿಕೊಳ್ಳಬೇಕು. ಸರಿ ಯಾವುದು? ತಪ್ಪು ಯಾವುದು? ಸಮಾಜದಲ್ಲಿ ನಾನು ಹೇಗಿರಬೇಕು? ನನಗೊಂದು ಅಸ್ತಿತ್ವ ಇದೆಯಾ? ನನ್ನ ಬದುಕಿಗೆ ಅರ್ಥ ಇದೆಯಾ? ಇವೆಲ್ಲಾ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ? ನಾವೇ! ಹೇಗೆ? ಗೊತ್ತಿಲ್ಲ! ಅರ್ಥಪೂರ್ಣ ಬದುಕಿಗೆ ವ್ಯಕ್ತಿತ್ವ ವಿಕಸನದ ಪಾಠಗಳು ಅತ್ಯಗತ್ಯ. ಅವುಗಳನ್ನು ಎಲ್ಲಿಂದ ಬೇಕಾದರೂ ಕಲಿಯಬಹುದು. 'ಜಾಲಿರೈಡ್' ಎಂಬಂತಹ ಪುಸ್ತಕಗಳಿಂದಲೂ ಹಿರಿಯರ ಅನುಭವಗಳನ್ನು ಓದಿ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದು. - ಅನಂತ ಕುಣಿಗಲ್
ತನ್ನ ಕಾಲದ ಹಲವು ಬಗೆಯ ಒತ್ತಡಗಳನ್ನು ಒಳಗೊಂಡು, ಅರಗಿಸಿಕೊಂಡ ನಂತರವೂ ಸೃಜನಶೀಲತೆಯ ಹೊಸ ಹಾದಿಗಳನ್ನು ಹುಡುಕುವ, 'ಸಯರ ಸಮ್ಮತ ಸಂತೆಯ ದಾರಿ'ಯನ್ನು ಅನುಸರಿಸದ ಲೇಖಕರು ಮಾತ್ರವೇ ಒಂದು ಭಾಷೆಯ ಸಾಹಿತ್ಯವನ್ನು ಕಟ್ಟಬಲ್ಲರು. ರಂಗಭೂಮಿ, ಚಲನಚಿತ್ರ, 'ಜೀವಂತ' ಜೀವನ ಮುಂತಾದ ಹತ್ತು ಹಲವು ಸಂಗತಿಗಳಲ್ಲಿ ತೀವ್ರವಾದ ಆಸಕ್ತಿಗಳನ್ನು ಹೊಂದಿರುವ ಗೆಳೆಯ ಮೌನೇಶ ಬಡಿಗೇರ್ ಅವರು ಅಂತಹ ಕೆಲವು ತರುಣ-ತರುಣಿಯರಲ್ಲಿ ಒಬ್ಬರು. ಕಥೆ, ಕವಿತೆ, ಕಾದಂಬರಿ ಮುಂತಾದ ಪುಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ ಶೋಧನೆ'ಗಳನ್ನು ಅವಲಂಬಿಸಿರುತ್ತದೆ. ಇವುಗಳ ಜೊತೆಗೆ, ಜಡವಲ್ಲದ ಕೇವಲ ಬೌದ್ಧಿಕವಲ್ಲದ ತಾತ್ವಿಕ ಕುತೂಹಲ/ಚಿಂತನೆಯೂ ಅದಕ್ಕೆ ಅಗತ್ಯವಾದ ಇನ್ನೊಂದು ಗುಣ. ಇದೆಲ್ಲದರ ಸಂಗಡ ಕತೆಸಾರನಿಗೆ ಲೋಕವನ್ನು ಅದರ ಸ್ಕೂಲನೆಲೆಯಲ್ಲಿ ಮಾತ್ರವಲ್ಲ, ವಿವರಗಳಲ್ಲಿ ಕಾಣುವ ಸುಣವೂ ಬೇಕು. ಮೂರ' ಮತ್ತು 'ಅಮೂರ' ಒಟ್ಟಿಸೆ ಗ್ರಹಿಸುವ, ಒಟ್ಟಾಗಿ ಹೆಣೆಯುವ ಕೆಲಸ ಬಹಳ ಜಟಲವಾದುದು. ಮೌನೇಶ್ ಈ ಎಲ್ಲ ಶಕ್ತಿಗಳನ್ನೂ ಬೇರೆ ಬೇರೆ ಪ್ರಮಾಣದಲ್ಲಿ ಪಡೆದಿದ್ದಾರೆ. ಆದ್ದರಿಂದ ಅವರ ಈ ಕಾದಂಬರಿ ನನಗೆ ಇಷ್ಟವಾಯಿತು. ನನ್ನನ್ನು ಬೆಳೆಸಿತು. ನಾನು ಅವರ ಕಥೆ, ಕವಿತೆಗಳನ್ನೂ ಪ್ರೀತಿಯಿಂದ ಓದಿದ್ದೇನೆ. -ಎಚ್. ಎಸ್. ರಾಘವೇಂದ್ರ ರಾವ್
ಇದು ನನ್ನ ಇಂತಹ ಬರಹಗಳ ಮೂರನೆಯ ಸಂಪುಟ. ಇದರಲ್ಲಿ ಹದಿನೇಳು ಜನರ ವ್ಯಕ್ತಿತ್ವ ಚಿತ್ರಣಗಳಿವೆ. ನಾನು ಬಾಲ್ಯದಲ್ಲಿ ನೋಡಿದವರು, ನನಗೆ ವೇದಪಾಠ ಹೇಳಿಕೊಟ್ಟವರು, ಜೊತೆಯಲ್ಲಿ ಕೆಲಸ ಮಾಡಿದ ಪತ್ರಕರ್ತರು, ಚಿತ್ರ ಕಲಾವಿದರು, ನಮ್ಮ ಕಾಲದ ರಸಿಕ ವಿದ್ವಾಂಸರು, ಪರ್ಯಾಯ ಚಿಕಿತ್ಸಕರು, ನಮ್ಮ ತಂದೆಯ ಓರಗೆಯವರು, ನಮ್ಮ ಮನೆಯ ಭಾಗವಾಗಿದ್ದವರು, ಪರಿವ್ರಾಜಕ ಮನೋಭಾವದ ಮಿತ್ರರು, ತಮ್ಮ ಸಾಹಿತ್ಯ-ಚಿಂತನೆಗಳಿಂದ ನನ್ನನ್ನು ರೂಪಿಸಿದವರು.... ಹೀಗೆ ಹಲವರಿದ್ದಾರೆ. ಇಂತಹ ಯಾರ ಲೋಪವನ್ನೂ ಎತ್ತಿ ತೋರಿಸುವುದು ಇಲ್ಲಿಯ ಆಶಯವಲ್ಲ. ಇಂಥವರ ಮೂಲಕ ನಮ್ಮ ಸಮಾಜವನ್ನು ಗ್ರಹಿಸುವುದು ಇಲ್ಲಿರುವ ಬಯಕೆ. ಇಲ್ಲಿ ಚಿತ್ರಣಗೊಂಡಿರುವವರೆಲ್ಲರೂ ನನ್ನ ಬದುಕನ್ನು ಶ್ರೀಮಂತಗೊಳಿಸಿದ್ದಾರೆ. ಇವರೆಲ್ಲರ ಚೈತನ್ಯದಿಂದ ಬದುಕಿನ ಚೆಲುವು ವರ್ಧಿಸಿದೆ; ಜಗತ್ತು ಸ್ವಾರಸ್ಯವಾಗಿ ಕಂಡಿದೆ; ಮನುಷ್ಯಸ್ವಭಾವದ ಮೇಲಿನ ಕುತೂಹಲ ಹೆಚ್ಚಾಗಿದೆ.
ವಿನಾಯಕ ನಾಯಕ್ , ರಾಜನ್ ದೇಶಪಾಂಡೆ
ರತಿಯು ಬೇಲಿ ದಾಟಿ ನಾಲ್ಲು ದಾಪು ನಡೆದು ಬಾವಿ ತಲುಪಿ ಕಟ್ಟೆಯ ಹಸಿರು ಮೆತ್ತೆ ಮೇಲೆ ಕುಳಿತಳು. ಪಾಚಿಯನ್ನು ನೇವರಿಸಿದಳು. ಸಮಾಧಾನವೆನ್ನಿಸಿತು. ನೀರಿನ ಮೇಲೈಯು ಗಾಳಿಗೆ ಕಂಪಿಸುತ್ತ ತರಂಗಗಳು ಹುಟ್ಟಿ, ಬೆಳೆದು, ಮತ್ತೆ ಹುಟ್ಟಿ ಬೆಳೆದು ಅಂತರ್ಧಾನ ಆಗುವುದನ್ನು ನೋಡತೊಡಗಿದಳು. ಅದೊಂದು ಮುಗಿಯದ ವರ್ತುಲವಾಗಿ ಯಾವುದು ಶುರು, ಎಲ್ಲಿಗೆ ಕೊನೆ ಎಂದು ಅವಳಿಗೆ ಬಗೆಹರಿಯಲಿಲ್ಲ. ಬಿಸಿಲು ಇಳಿಯುತ್ತಿತ್ತು. ಕುಳಿತಿದ್ದ ರತಿ ಎದ್ದಳು. ಅವಳು ಇನ್ನೂ ನೀರಿನ ಮೈಯನ್ನೇ ನೋಡುತ್ತಿದ್ದಳು. ತಿಳಿಬಣ್ಣದ ನೀರು ಮರದ ನೆರಳು, ಸಂಜೆಯ ಛಾಯೆಯ ಜೊತೆ ಸೇರಿಕೊಂಡು ಕಪ್ಪಾಗಿ ಕಾಣುತ್ತಿತ್ತು. ರತಿಯ ಕಣ್ಣಿಗೆ ಗಳಿಗೆ ಗಳಿಗೆಗೂ ಆ ಕಪ್ಪು ಗಾಡವಾಗುತ್ತ ಹೋದಂತೆನಿಸಿ, ಒಂದು ಹಂತದಲ್ಲಿ ಎಲ್ಲ ಕಡೆ ಕಪ್ಪು ಆವರಿಸಿಕೊಂಡುಬಿಟ್ಟಿತು. ಆ ಕ್ಷಣ ಸುತ್ತಲ ಶಬ್ದಗಳೂ ಸದ್ದಡಗಿ, ಕತ್ತಲ ಸುರಂಗದೊಳಗೆ ಹೋಗುತ್ತಿರುವ ಅನುಭವವಾಯಿತಷ್ಟೆ,
ಅಂಬೇಡ್ಕರ್ ಹೆಸರಿನ ಬದಲು ದೈವದ ಸ್ಮರಣೆ ಮಾಡಿದರೆ ಸೌಭಾಗ್ಯ ಕೂಡಿಬರಲಾರದು. ಕಾಣದ ದೈವಕ್ಕಿಂತ ಕೈಹಿಡಿದು ನಡೆಸುವ ಧೀಮಂತ ನಾಯಕ ಮತ್ತು ಆದರ್ಶ ಮೌಲ್ಯಗಳ ಸಾಕಾರಮೂರ್ತಿ ಬಾಬಾ ಸಾಹೇಬರು. ಅವರನ್ನು ಪರಿಚಯಿಸುವ ಗ್ರಂಥಗಳ ಮಹಾಪೂರಕ್ಕೆ ಈಗಾಗಲೇ ಸಾರವತ್ತಾಗಿ ನೆಲ್ಸನ್ ಮಂಡೇಲಾ ಜೀವನ ಚರಿತ್ರೆಯನ್ನು ನೀಡಿರುವ ಡಾ. ಎಂ. ವೆಂಕಟಸ್ವಾಮಿಯವರ ನೂತನ ಮೌಲಿಕ ಕೃತಿಯ ಸೇರ್ಪಡೆಯಾಗುತ್ತಿದೆ. ನಮ್ಮ ಸಾಂಸ್ಕೃತಿಕ - ಆರ್ಥಿಕ - ಸಾಮಾಜಿಕ ಸವಾಲುಗಳನ್ನೆದುರಿಸಲು ಡಾ. ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟಗಳನ್ನು ವಿಹಂಗಮ ಶೈಲಿಯಲ್ಲಿ ಪ್ರಸ್ತುತ ಕೃತಿಯು ಕಟ್ಟಿಕೊಡುತ್ತದೆ. ಬಾಬಾ ಸಾಹೇಬರ ಜೀವನ, ಹೋರಾಟ, ವಿದ್ವತ್ತು, ಕಳಕಳಿ ಮುಂತಾದವು ನಮಗಿಂದು ದಾರಿದೀಪ. ಸನಾತನವೆಂಬ ಹೊರೆಗೆ ಪರ್ಯಾಯಗಳಲ್ಲಿ ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟ ಅನನ್ಯವಾದುವು. ಡಾ. ಜಿ. ರಾಮಕೃಷ್ಣ
Showing 1201 to 1230 of 3497 results