ಸಾಕ್ಷಿ ಷಡಕ್ಷರಿ
nil
ಕಾಡುತ್ತದೆ. ಸೃಜನಶೀಲ ಲೇಖಕ ಜೀವನದ ವಿಶ್ವವಿದ್ಯಾನಿಲಯದಲ್ಲಿ ಗಾಢವಾದ ಆಲೋಚನೆ ಮಾಡಿ ತನ್ನ ದಾರಿಯನ್ನು ತಾನೇ ಹುಡುಕಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ ('ನನ್ನ ವಿಶ್ವವಿದ್ಯಾನಿಲಯ'); ಕೊನೆ ಎಲೆ', ಕಲಾವಿದನೊಬ್ಬ ಮಹಾನ್ ಕಲಾಕೃತಿಯನ್ನು ಸೃಷ್ಟಿಸಿ ಅದರ ಮೂಲಕ ಸಾಯುವಂತಹ ಜೀವ ಒಂದಕ್ಕೆ ಬದುಕಬೇಕು ಆತ್ಮವಿಶ್ವಾಸವನ್ನು ತುಂಬಿದ ಸಾರ್ಥಕ ಕಥೆಯಾಗಿದೆ; 'ಖುಷಿ ರಾಜಕುಮಾರ' ಕಥೆಯಲ್ಲಿ ಚಿಕ್ಕ ಪಕ್ಷಿ ಮತ್ತು ರಾಜಕುಮಾರ ತಮ್ಮ ಚಟುವಟಿಕೆಗಳ ಮೂಲಕ ದೇವರಿಗೆ ಪ್ರಿಯರಾಗುತ್ತಾರೆ. ಒಳ್ಳೆಯತನ ಮತ್ತು ಕೆಡಕುತನ ಇವುಗಳ ನಿರಂತರ ಸಂಘರ್ಷದಲ್ಲಿ ಕೊನೆಗೆ ಒಳ್ಳೆಯದ್ದು ಗೆಲ್ಲುತ್ತದೆ ಎಂಬ ಆಶಾಭಾವ 'ಕನಸು' ಕಥೆಯಲ್ಲಿ ಧ್ವನಿಸುತ್ತದೆ. ಮನುಷ್ಯ ಸ್ವಭಾವದಲ್ಲಿರುವ ಒಳ್ಳೆಯತನಕ್ಕೆ ದಸ್ತಾಯೇವ್ಸ್ಕಿ ಒತ್ತುಕೊಟ್ಟು ಸಕಾರಾತ್ಮಕವಾಗಿ ಸ್ಪಂದಿಸಿದ್ದಾನೆ. ಪ್ರೀತಿ, ಪ್ರೇಮ, ಆದರ್ಶ, ತ್ಯಾಗ, ಇಂತಹ ಸೂಕ್ಷ್ಮಭಾವನೆಗಳೂ ಕಥೆಗಳಲ್ಲಿ ಕಲಾತ್ಮಕವಾಗಿ ಅನಾವರಣಗೊಂಡಿವೆ.
#
ಕೆಲವರು ತಪ್ಪಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಮಾಡದೇ ತಮ್ಮ ತಮ್ಮ ಕ್ಯಾಬಿನ್ಗಳಲ್ಲಿ ಮತ್ತು ಅಲ್ಲಲ್ಲಿ ನಿಂತುಕೊಂಡು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇನ್ನೂ ಕೆಲವು ಪ್ರಯಾಣಿಕರು ಟ್ರಂಕುಗಳು ಮತ್ತು ಉಳಿದ ವಸ್ತುಗಳನ್ನು ಹಿಡಿದುಕೊಂಡು ಡೆಕ್ ಗಳಲ್ಲಿ ನಿಂತುಕೊಂಡು ಯಾರಾದರು ಬಂದು ತಮ್ಮನ್ನ ಕರೆದುಕೊಂಡು ಹೋಗುವರೆಂದು ಕಾಯುತ್ತಿದ್ದರು. ಮನಶಾಸ್ತ್ರಜ್ಞ ವೈನ್ ಕ್ರೇಗ್ ವೇಡ್ ಇದನ್ನು ಸಾಮಾಜಿಕ ಮೇಲಾಧಿಕಾರಿಗಳ ಪೀಳಿಗೆಗಳಿಂದ ಉತ್ಪತ್ತಿಯಾಗುವ Stoic Passitivity ಎಂದು ಹೇಳುತ್ತಾರೆ. ಇವರಲ್ಲಿ ಹೆಚ್ಚಿನವರು ಬದುಕುಳಿಯಲು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ನೂರಾರು ಜನರು ಸಭಾಂಗಣಗಳಲ್ಲಿ ಬೋಧಕರೊಂದಿಗೆ ನಿಂತುಕೊಂಡು ಪ್ರಾರ್ಥಿಸುತ್ತಿದ್ದರು, ದೇವರು ಮತ್ತು ಮೇರಿ ಅವರಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಿದ್ದರು. ಕೆಲವರು ಅಲ್ಲಿಯೇ ಮಲಗಿಕೊಂಡು ಚೀರಾಡುತ್ತಿದ್ದರು, ಅವರು ತಮ್ಮ ಸ್ವಂತ ಇಚ್ಛಾಶಕ್ತಿಯನ್ನು ಕಳೆದುಕೊಂಡಿದ್ದರು ಮತ್ತು ದೇವರೇ ಎಲ್ಲಾ ಕೆಲಸಗಳನ್ನು ಮಾಡಬೇಕೆಂದು ನಿರೀಕ್ಷಿಸುತ್ತಿದ್ದರು. ಟೈಟಾನಿಕ್ ದುರಂತ ಸಾಗರ ಇತಿಹಾಸದಲ್ಲಿ ಮೈ ನವಿರೇಳಿಸುವ ಮತ್ತು ಕೇಳಲಾರದ ವಿದ್ರಾವಕ ಸತ್ಯಕತೆಯಾಗಿದೆ. ಸಹಸ್ರಮಾನಗಳ ಇತಿಹಾಸದಲ್ಲಿ ಇಂತಹ ನರಕಸದೃಶ ದುರಂತ ಹಿಂದೆ ಎಂದೂ ನಡೆದಿರಲಿಲ್ಲ. ಈ ದುರಂತದ ನಂತರ ಸಾಗರ ಕಾನೂನುಗಳನ್ನು ಬದಲಿಸಬೇಕಾಯಿತು ಮತ್ತು ಅನೇಕ ಕಟ್ಟೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಯಿತು. ಇದರಿಂದ ಇಡೀ ಜಗತ್ತು ಸಾಗರಲೋಕದಲ್ಲಿ ಒಂದು ಹೊಸ ಪಾಠವನ್ನೇ ಕಲಿತುಕೊಂಡಿತು. ನಂತರದ ಕಾಲದಲ್ಲಿ ಯಾವುದೇ ದೊಡ್ಡ ದುರಂತಗಳು ನಡೆಯಲಿಲ್ಲ. ಈ ದುರಂತದಲ್ಲಿ ಮಡಿದವರ ಸಂಖ್ಯೆ ಗೊಂದಲಗಳಿಂದ ಕೂಡಿದ್ದು ಸುಮಾರು 1,490 ರಿಂದ 1635ರ ಎನ್ನಲಾಗಿದೆ. ಇನ್ನು ಸಮುದ್ರದಿಂದ ಸಂಗ್ರಹಿಸಿದ ಮೃತದೇಹಗಳ ಸಂಖ್ಯೆ ಕೇವಲ 333. ಒಟ್ಟಿನಲ್ಲಿ ಈ ಟೈಟಾನಿಕ್ ಹಡಗಿನ ಕತೆಯ ವ್ಯಥೆಯನ್ನು ಓದಿಯೇ ತಿಳಿಯಬೇಕು. ಡಾ. ಎಂ. ವೆಂಕಟಸ್ವಾಮಿ
ಗ್ರೀಕ್ ಇತಿಹಾಸದಲ್ಲೇ ಒಮ್ಮೆ ಕಾಲ್ಪನಿಕ… ಒಮ್ಮೆ ಪೌರಾಣಿಕ… ಮತ್ತೊಮ್ಮೆ ಜನಪದ ಕಥೆ ಎನ್ನುವ ವಿವಾದದೊಂದಿಗೇ ಅತ್ಯಂತ ಹೆಸರುವಾಸಿಯಾದ… ಅತ್ಯಂತ ಭೀಕರ ಯುದ್ಧವೊಂದಕ್ಕೆ ನಾಂದಿಯಾದ ಒಂದು ಅಮರ ಪ್ರೇಮಕಥೆ ಈ ” ಟ್ರಾಯ್” .
@#
ಡಾ ಎಂ ಎಸ್ ಆಶಾದೇವಿ
ಶತಾವಧಾನಿ ಡಾ. ಆರ್. ಗಣೇಶ್
ಎನ್ ರಾಮನಾಥ್
ಸಂಜಯ ಈ ಕಾಲದ ಯುವ ಕತೆಗಾರ, ಆತನ ಕಥನ ಶಕ್ತಿ ಬಗ್ಗೆ ಯಾವುದೇ ಅನುಮಾನ ಬೇಡ. ಈಗಾಗಲೇ ಅವನ ಕತೆಗಳು ವಿದ್ಯಾರ್ಥಿ ಕಥಾ ಪ್ರಶಸ್ತಿಗಳನ್ನು ಪಡೆದಿವೆ. ಸಿದ್ದ ಸೂತ್ರಗಳನ್ನು ಯಾವ ಮುಲಾಜಿಲ್ಲದೆ ಸೈಡಿಗೆ ತಳ್ಳಿ, ತನ್ನದೇ ಭಾಷೆ ಮತ್ತು ನರೇಷನ್ ಮೂಲಕ ಹೊಸ ಕತೆ ಅಲ್ಲದಿದ್ದರೂ ಹೊಸತನ ಕೂಡಿರುವ ಕತೆಗಳನ್ನು ಕಟ್ಟಿದ್ದಾನೆ. ತನ್ನ ಜೀವನಾನುಭವಕ್ಕೆ ಎಟುಕಿದಷ್ಟು ಭಾಷೆಯನ್ನು ಅತಿ ನಾಜೂಕಾಗಿ, ಅಷ್ಟೇ ಚುರುಕಾಗಿಯೂ ಬಳಸಿದ್ದಾನೆ. 'ದ್ಯಾಮಜ್ಜಿ ಪುರಾಣ' 'ಗುಲ್ಕಮ್ಮ' 'ನೀರಿಲ್ಲದ ನದಿಯ ಊರಿಂದ ನಡೆದು ಬಂದವರು' 'ಕಲರ್ ಕಲರ್ ಬಲೂನ್' 'ಉದ್ಭವ ಸೇತುವೆ' ಕತೆಗಳಲ್ಲಿ ಸ್ಪಷ್ಟವಾಗಿ ನೇರವಾಗಿ ಎಲ್ಲ ಕಾಲಕ್ಕೂ ಸಲ್ಲುವ ಕಥೆಗಾರನಾಗಿ ಸಂಜಯ್ ಕಾಣಿಸಿಕೊಳ್ಳುತ್ತಾನೆ. ಸಂಜಯನ ಎಷ್ಟೋ ಕತೆಗಳು ಪದಮಿತಿಗೆ, ಡೆಡ್ ಲೈನ್ ಇಟ್ಟುಕೊಂಡು ಸ್ಪರ್ಧೆಗಾಗಿ ಬರೆದ ಕತೆಗಳೇ ಆಗಿವೆ. ಹಾಗಾಗಿ ಕೆಲವು ಮಾದರಿಗೆ, ಇಂತಹ ಪತ್ರಿಕೆಗಳಿಗೆ ಇಂಥ ಕಥಾವಸ್ತು ಇದ್ರೆ ಗೆಲ್ಲುವುದು ಎಂಬ ಸಹಜ ಆಸೆಯಿಂದ ಕಟ್ಟಿದ ಕತೆಗಳು. ಅವು ಕೂಡ ಕೆಲವೊಂದು ಸಲ ಸಂಜಯನ ಅಸೆಯನ್ನು ಮಣಿಸಿ ಅವನೊಳಗಿನ ಕತೆಗಾರನ್ನು ಗೆಲ್ಲಿಸಿವೆ. ಹಾಗಾಗಿ ಕತೆಗಳು ಗೆದ್ದಿವೆ..! ಜಯರಾಮಚಾರಿ ಮುನ್ನುಡಿಯಿಂದ
ರಾಘವೇಂದ್ರ ಮಾಯಕೊಂಡ
Showing 1231 to 1260 of 3317 results