'ದೂರ ದೇಶದ ದೇವರು' ಕಥಾಸಂಕಲನದ ಪಾತ್ರಗಳಲ್ಲಿ ನೈಜತೆಯಿದ್ದು ಅವು ಬಹು ಆಯಾಮವನ್ನು ಹೊಂದಿವೆ. ಕತೆ ಸಾಗುತ್ತಿದ್ದಂತೆ ಅಲ್ಲೊಂದು ಬೆಳವಣಿಗೆ, ಒಂದು ಬದಲಾವಣೆ ಕಂಡುಬರುತ್ತದೆ. ಅಲ್ಲಿನ ಸಂಬಂಧ-ಸಂಘರ್ಷಗಳು ನೈಜವಾಗಿ ನಡೆಯುವಂತೆ ಕತೆಯನ್ನು ಮುಂದಕ್ಕೆ ಕೊಂಡೊಯ್ಯಲಾಗಿದೆ. ಪ್ರತಿ ಕತೆಯಲ್ಲೂ ಇರುವ ಸಂಘರ್ಷದಲ್ಲಿ ಓದುಗನೂ ಪಾಲುಗೊಳ್ಳುವಂತಾಗುವುದು ಇಲ್ಲಿನ ವಿಶೇಷ. ಕುಣಿಗಲರು ಕತೆ ಹೇಳುವ ರೀತಿಯೂ ಸ್ವಾರಸ್ಯಕರವಾಗಿದ್ದು, ಕತೆಗಳು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತವೆ. ಕತೆಯ ಭಾಷೆ, ನಿರೂಪಣಾ ಶೈಲಿ, ಪದಗಳ ಆಯ್ಕೆಯಲ್ಲಿರುವ ಶಿಸ್ತು ಮತ್ತು ವಿಷಯವನ್ನು ಕೆಲವೇ ಶಬ್ದಗಳಲ್ಲಿ ಹೇಳುವ ಅಚ್ಚುಕಟ್ಟುತನ ಈ ಎಲ್ಲ ಅಂಶಗಳು ಅನಾಯಾಸವಾಗಿ, ಸಹಜವಾಗಿ ಬಂದು, ಅಲ್ಲೊಂದು ಸಮತೋಲನವಿದೆ. ಓದಿ ಮುಗಿದ ನಂತರವೂ ಓದುಗರೊಂದಿಗೆ ಉಳಿಯುವ ಗುಣವಿದೆ. ಮಾನವ ಸ್ವಭಾವದ ಬಗ್ಗೆ ಸೂಕ್ಷ್ಮವಾದ ಒಳನೋಟವನ್ನು ನೀಡುವ ಈ ಸಂಕಲನದ ಕತೆಗಳು ವೈಯುಕ್ತಿಕವಾಗಿದ್ದಂತೆ ಅಲ್ಲೊಂದು ಸಾರ್ವತ್ರಿಕತೆಯೂ ಇದೆ. ಮುಖ್ಯವಾಗಿ, ಕತೆಯ ಓಘವು ಎಲ್ಲವನ್ನೂ ಕಾಗುಣಿತಗೊಳಿಸದೆ ಬದುಕಿನ ವ್ಯಾಖ್ಯಾನಕ್ಕೆ ಅವಕಾಶವನ್ನು ನೀಡುತ್ತವೆ. ಹೊಸ ಆಲೋಚನೆಗಳು ವೈಯಕ್ತಿಕ ಮಟ್ಟದಲ್ಲಿ ಆಳವಾಗಿ ಪ್ರತಿಧ್ವನಿಸುವಂತಿದ್ದು, ಕೆಲವು ಕತೆಗಳು ಓದುಗನ ದೃಷ್ಟಿಕೋನಕ್ಕೆ ಸವಾಲೊಡ್ಡುವಂತಿವೆ. ಮಿತ್ರಾ ವೆಂಕಟ್ರಾಜ | ಹಿರಿಯ ಕಥೆಗಾರ್ತಿ | ಮುಂಬಯಿ
nil
ನಮ್ಮ ದೇಶದಲ್ಲಿ ರಾಮಾಯಣ, ಮಹಾಭಾರತ, ಭಾಗವತಗಳಿಗೆ ಸಂಬಂಧಪಡದ ನದಿಗಳಿಲ್ಲ, ಬೆಟ್ಟಗಳಿಲ್ಲ, ಯಾವ ಊರೂ ಇಲ್ಲ. ಹಾಗಾಗಿ ಇಡೀ ಭಾರತವೇ ಒಂದು ತೀರ್ಥಕ್ಷೇತ್ರ. ತೀರ್ಥಯಾತ್ರೆ ಅಭಯದ ಸಂಕೇತ. ಮನಸ್ಸಿಗೆ ಬಲ ಕೊಡುವ ಪ್ರಕ್ರಿಯೆ. ಭರವಸೆ ಕುಗ್ಗಿದಾಗ, ಚೈತನ್ಯ ತರುತ್ತದೆ. ಮನುಷ್ಯನ ತಿರುಗಾಟಕ್ಕೊಂದು ಆಧ್ಯಾತ್ಮಿಕ ಸ್ಪರ್ಶ ನೀಡುವುದೇ ತೀರ್ಥಯಾತ್ರೆ.. ಪ್ರವಾಸ ಲೌಕಿಕ ಅನುಭವವನ್ನು ಕೊಟ್ಟರೆ, ತೀರ್ಥಯಾತ್ರೆ ಅಲೌಕಿಕ ಅನುಭವವನ್ನು ತಂದುಕೊಡುತ್ತದೆ.
#
ದೇಶ ವಿಭಜನೆಯನ್ನು ಕುರಿತು ಈಗಾಗಲೇ ಲೆಕ್ಕವಿಲ್ಲದಷ್ಟು ಪುಸ್ತಕಗಳು ಬಂದಿವೆ. ಹಾಗೆ ನೋಡಿದರೆ ಇದೊಂದು ಮುಗಿಯದ ಸರಕು.ಕಾಲದಿಂದ ಕಾಲಕ್ಕೆ ಈ ದುರಂತವು ಬೇರೆ ಬೇರೆ ಮಾಹಿತಿ, ಅಂಕಿ-ಅಂಶ,ಸಂಶೋಧನೆ, ಚರಿತ್ರೆಯ ಅಧ್ಯಯನಗಳೊಂದಿಗೆ ಹೊಸ ಹೊಸ ಕೃತಿಗಳನ್ನು ಸೃಷ್ಟಿಸುತ್ತಿದೆ. ಅಂದಂತೆ,ಭಾರತದಲ್ಲಿ ಸಮಾಜವಾದದ ಯುಗದಲ್ಲಿ ಒಬ್ಬರಾದ ರಾಮ ಮನೋಹರ ಲೋಹಿಯಾ ಅವರು, ಅಖಂಡ ಭಾರತದ ಇಬ್ಭಾಗಕ್ಕೆ ನೇರ ಸಾಕ್ಷಿಯಾಗಿದ್ದವರು. ನೇರ ನಡೆ-ನುಡಿಗಳಿಗೆ ಮತ್ತು ನಿಲುವುಗಳಿಗೆ ಹೆಸರಾಗಿದ್ದ ಅವರು, ಭಾರತದ ಚಿಂತಕರ ವರ್ತುಲ ಮತ್ತು ಸಾರ್ವಜನಿಕ ಬದುಕಿನ ಮೇಲೆ ಬೀರಿರುವ ಪ್ರಭಾವ ಅಗಾಧವಾದುದು.ಅದರಲ್ಲೂ ಲೋಹಿಯಾ ಅವರು ದೇಶ ವಿಭಜನೆಗೆ ಕಾರಣರಾದವರು ಯಾರೆಂದು ಬಗೆದು ನೋಡಿ ಬರೆದಿರುವ The Guilty Men of India's Partition ಅತ್ಯಂತ ಮಹತ್ವದ ಕೃತಿಯಾಗಿದೆ.ಇದನ್ನು ಹೆಸರಾಂತ ಲೇಖಕ ಡಾ.ಟಿ ಎನ್ ವಾಸುದೇವಮೂರ್ತಿ ಅವರು "ದೇಶ ವಿಭಜನೆಯ ಪಾಪ ಹೊತ್ತವರು" ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ. ಇದಕ್ಕಾಗಿ ನಾವು ಅವರಿಗೆ ಆಭಾರಿಗಳಾಗಿದ್ದೇವೆ ದೊಡ್ಡದೊಡ್ಡ ಪದಗಳ ಬಾರವಿಲ್ಲದೆ ಸಹಜವಾದ ತಿಳಿಗನ್ನಡದಲ್ಲಿ ಮೂಡಿಬಂದಿರುವ ಈ ಭಾಷಾಂತರವು ಕನ್ನಡ ವಾಙ್ಮಯಕೊಂದು ಬೆಲೆಯುಳ್ಳ ಸೇರ್ಪಡೆಯಾಗಿದೆ
Showing 1471 to 1500 of 3623 results