#
ಬದುಕಿನ ಪ್ರತಿ ಕ್ಷಣವೂ ಸಿಹಿಯಾಗಿಯೇ ಇರುವುದಿಲ್ಲ. ಆದರೆ ಕಹಿಯಲ್ಲೂ ಸಿಹಿಯನ್ನು ಹುಡುಕುವುದರಲ್ಲೇ ಜೀವವೂ, ಜೀವನವೂ ಆಡಗಿದೆ. ಪ್ರತಿ ಸೂರ್ಯೋದಯಕ್ಕೂ ಹೊಸ ಬದುಕಿನ ಉದಯವಾಗುತ್ತದೆ. ಆ ಒಂದು ದಿನದ ಪ್ರತಿ ಕ್ಷಣವನ್ನು ನವೋಲ್ಲಾಸದಿಂದ ಕಳೆಯಬೇಕು ಅಂದರೆ ಸೂರ್ತಿ ಎಲ್ಲಿಂದ ಬರುತ್ತದೆ? ಯಾರು ಚೈತನ್ಯ ಕೊಡುತ್ತಾರೆ ಅಂತಲ್ಲ ಹುಡುಕಿದರೆ ಸಿಗುವುದಿಲ್ಲ. ನಮ್ಮೊಳಗೆ ಇರುವ ಧನಾತ್ಮಕ ಶಕ್ತಿಯನ್ನು ಪ್ರಚೋದಿಸಿಕೊಳ್ಳಬೇಕಷ್ಟೆ. ಸಣ್ಣ ಸಣ್ಣ ಸಂಭ್ರಮವೇ ಇಡೀ ದಿನವನ್ನು ನಿರಾಳವಾಗಿಸುತ್ತದೆ. ಮುಂಜಾವಿಗೆ ಅರಳಿದ ಹೂವಿನಲ್ಲೋ, ಪಕ್ಷಿಯ ಕೂಗಿನಲ್ಲೋ ಅಥವಾ ಇನ್ಯಾರದ್ದೋ ಮಾತು, ನಗುವಿಗೂ ನಿಮ್ಮನ್ನು ಖುಷಿಯಾಗಿ ಇಡುವ ಶಕ್ತಿ ಇದೆ ಅಂತಾದರೆ ಎದುರಾಗುವ ಯಾವ ಕ್ಷಣವನ್ನು ನಿರ್ಲಕ್ಷಿಸಬೇಡಿ, ಆಸ್ವಾದಿಸಿ ಎನ್ನುತ್ತವೆ ಹಲವರ ಬದುಕಿನಲ್ಲಿ ನಡೆದು ಹೋದ ದುರಂತ, ಯಾರದ್ದೋ ಹೋರಾಟ, ಮತ್ತೆಮತ್ತೆ ಸೋತು ಗೆದ್ದವರ ಈ ಕಥೆಗಳು. 'ಬರೆದು ಬದುಕು ಬದಲಿಸಿ' ಶೀರ್ಷಿಕೆಯಡಿ ವಿಜಯ ಕರ್ನಾಟಕ - ಸ್ನೇಹ ಬುಕ್ ಹೌಸ್ ಆಯೋಜಿಸಿದ್ದ ಯುಗಾದಿ ಲೇಖನ ಸ್ಪರ್ಧೆಗೆ ಬಂದ ಲೇಖನಗಳಲ್ಲಿ ಆಯ್ದ 25 ಲೇಖನಗಳ ಈ ಸಂಕಲನ ಓದಿದಾಕ್ಷಣ ನಿಮ್ಮ ಮನವೂ ಸಕಾರಾತ್ಮಕ ಭಾವದಿಂದ ಹೊಳಪುಗೊಳ್ಳದಿದ್ದರೆ ಹೇಳಿ...
ಯಾವ ವ್ಯಕ್ತಿಯನ್ನಾದರೂ ಸುಲಭಕ್ಕೆ ಅರ್ಥ ನ ಮಾಡಿಕೊಳ್ಳುವಷ್ಟು ಅವರ ಬದುಕು, ವಿಚಾರ ಮತ್ತು ಸಾಧನೆ ಸರಳವಾಗಿರುವುದಿಲ್ಲ. ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟೂ ಅವರು ಸಂಕೀರ್ಣವಾಗುತ್ತಾ, ಜಟಿಲವಾಗುತ್ತಾ ಹೋಗುವುದು ಸಹಜ ಕೆಲವೊಮ್ಮೆ ನಾವು ಯಾರನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ಭಾವಿಸುತ್ತೇವೋ ಅವರೇ ನಮಗೆ ಸರಿಯಾಗಿ ಅರ್ಥವಾಗಿರುವುದಿಲ್ಲ. ಅದರಲ್ಲೂ ಅವರು ಮೇಲಮೇಲಕ್ಕೆ ಹೋದಂತೆಲ್ಲ ನಮ್ಮಿಂದ ದೂರವಾಗುತ್ತಾ ಹೋಗುತ್ತಾರೆ. ಹಿರಿಯ ಪತ್ರಕರ್ತ ರಾಜು ಅಡಕಳ್ಳಿ ಅವರು ಈ ಕೃತಿಯಲ್ಲಿ ಹಲವು ವ್ಯಕ್ತಿಗಳನ್ನು ನಮಗೆ ಪರಿಚಯಿಸುವ, ಆಪ್ತವಾಗಿಸುವ ಮತ್ತು ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವುದರ ಜತೆಗೆ ಅವರ ಸಾಧನೆಯನ್ನು ನಮ್ಮ ಮುಂದೆ ಅಡಕಳ್ಳಿಯವರು ತೆರೆದಿಟ್ಟಿದ್ದಾರೆ. ಇಲ್ಲಿನ ಪ್ರತಿಯೊಬ್ಬರೂ ಅನ್ನ ವ್ಯಕ್ತಿತ್ವದವರು, ವಿಶೇಷ ಸಾಧನೆ ಮಾಡಿದವರು. ಅವರೆಲ್ಲರ ಸಾಧನೆ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಸ್ಫೂರ್ತಿಯ ಸೆಲೆ, ಪ್ರೇರಣಿಯ ಧಾರೆ. ಒಬ್ಬರನ್ನು ಪರಿಚಯಿಸಿಕೊಳ್ಳುವುದು ಮತ್ತು ಅವರ ಸಾಧನೆಯಿಂದ ಪ್ರೇರಿತರಾಗುವುದು ಯಾವತ್ತೂ ಒಂದು ದಿವ್ಯ ಅನುಭವವೇ. ಅಂಥ ಒಂದು ವಿಶೇಷ ಅನುಭವ ಈ ಕೃತಿಯನ್ನು ಓದಿದಾಗ ಆಗುತ್ತದೆ. ಅಡಹಳ್ಳಿಯವರ ಭಾಷೆ, ಶೈಲಿ, ಓಘ, ನಿರೂಪಣೆ ಅಪರೂಪವಾದುದು. ಅವರ ಬರಹಕ್ಕೆ ಸಹಜ ಓದಿನ ಗತಿ, ವೇಗವನ್ನು ಸಂಪಾದಿಸುವ ಕಥನಶಕ್ತಿ ಇದೆ. ವ್ಯಕ್ತಿಯನ್ನು ಪರಿಚಯಿಸುವ ಕಾಳಜಿ, ಆಪ್ತವಾಗಿಸುವ ಕಲೆಗಾರಿಕೆ ಅವರಿಗೆ ಸೊಗಸಾಗಿ ಸಿದ್ಧಿಸಿದೆ. ಅದಕ್ಕೆ ಈ ಕೃತಿಯೇ ನಿದರ್ಶನ ಒಬ್ಬರನ್ನು ಪರಿಚಯಿಸುವ ಏಕತಾನತೆ, ಧಾವಂತದಲ್ಲಿ ಅದು ಶುಷ್ಕ ಬಯೋಡೇಟಾ ಅಥವಾ ವ್ಯಕ್ತಿ ಕಿರ್ದಿಯಾಗದಂತೆ ಎಚ್ಚರವಹಿಸಿರುವುದು ಅವರ ಬರವಣಿಗೆಯ ಇನ್ನೊಂದು ವಿಶೇಷ. ಒಬ್ಬ ವ್ಯಕ್ತಿಯನ್ನು ನೋಡುವುದು, ಅವರ ಸಾಧನೆಯ ಬದುಕಿನಲ್ಲಿ ಅಂತರನೋಟ ಬೀರುವುದು ಹಾಗೂ ನಂತರ ಅವರ ಇಡೀ ವ್ಯಕ್ತಿತ್ವವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದು ಅತ್ಯಂತ ಹೊಣೆಗಾರಿಕೆಯ ನಡೆ. ಕಾರಣ ವ್ಯಕ್ತಿಗೆ, ಅವರ ವಿಚಾರ ಮತ್ತು ಸಾಧನೆಗೆ ಎಲ್ಲೂ ಅಪಚಾರವಾಗಬಾರದಲ್ಲ? ಈ ಕೃತಿಯಲ್ಲಿ ಅಂಥ ಒಂದು ವಿಶೇಷ ಪ್ರಯತ್ನವನ್ನು ಗಮನಿಸಬಹುದು. ಈ ಕೃತಿಯಲ್ಲಿನ ಒಬ್ಬೊಬ್ಬ ವ್ಯಕ್ತಿಯ ಕುರಿತು ಓದುತ್ತಾ ಹೋದಂತೆಲ್ಲ ನಮ್ಮೊಳಗೆ ಸ್ಫೂರ್ತಿಯ ಒಳಹರಿವು ಹೆಚ್ಚಾಗಿ, ಪ್ರೇರಣೆಯ ಅಣೆಕಟ್ಟು ಭರ್ತಿಯಾಗುತ್ತಾ ಹೋಗುತ್ತದೆ. ವಿಶ್ವೇಶ್ವರ ಭಟ್
nil
ಅದು 1939ನೇ ಇಸವಿ. ದೆಹಲಿಯ ಬ್ರಿಟಿಷ್ ಅಧಿಕಾರಿಯ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಚಲಪತಿಯನ್ನು ಜರ್ಮನಿಯು ಆಕ್ರಮಿಸಿಕೊಂಡಿದ್ದ ಆಸ್ಟ್ರಿಯಾದ ಸಾಲ್ಬರ್ಗ್ ಸ್ವಶ (ಗೂಢಚಾರ)ನಾಗಿ ಕಳುಹಿಸುತ್ತಾನೆ ಆ ಬ್ರಿಟಿಷ್ ಅಧಿಕಾರಿ. ಜರ್ಮನ್ ಸೈನಿಕರ ಗುಟ್ಟುಗಳನ್ನು ದೇಶಪ್ರೇಮಿ ಆಸ್ಟ್ರಿಯನ್ನರಿಗೆ ರವಾನೆ ಮಾಡುತ್ತಿದ್ದ ಚಲಪತಿಯನ್ನು ಸೈನಿಕರು ಹಿಡಿಯಲು ಸನ್ನಾಹ ನಡೆಸುತ್ತಾರೆ. ಆಗ ಜೀವ ಉಳಿಸಿಕೊಳ್ಳಲು ಈ ಸ್ವಶನು ಮಾಡುವ ಸಾಹಸಗಳು... ಕುತೂಹಲಭರಿತ ಕಾದಂಬರಿ....
Showing 9151 to 9180 of 9444 results