nil
#
"ನಮ್ಮ ಕಾಲ ಹಿಂಗ್ ಇರ್ಲಿಲ್ಲಪ್ಪ.." ಅನ್ನೋ ಆಪಾದನೆ ಇಂದಿನ ಜನರೇಶನ್ನಿನ ಮೇಲಿದೆ. ಅದನ್ನು ಒಪ್ಪುವಂತೆಯೇ ಇಂದಿನ ಜನರೇಶನ್ನಿನ ವರ್ತನೆ ಕೂಡ ಇದೆ. ವ್ಯವಹಾರಗಳಷ್ಟೇ ಮುಖ್ಯ, ದುಡ್ಡಿದ್ರೆ ದುನಿಯಾ ಅನ್ನೋ ಮನಸ್ಥಿತಿಯವರೇ ಹೆಚ್ಚು. ವಿಜ್ಞಾನ ತಂತ್ರಜ್ಞಾನಗಳು ಪ್ರಾಯೋಗಿಕವಾಗಿ ಎಷ್ಟೊಂದು ವಿಷಯಗಳನ್ನು ಜನರಿಗೆ ಹತ್ತಿರದಿಂದ ಅರ್ಥ ಮಾಡಿಸಿದರೂ.. ಬದುಕಿನ ಶಿಸ್ತು, ಪ್ರೀತಿ, ಸ್ನೇಹ, ಸಂಬಂಧಗಳನ್ನು ಮನುಷ್ಯನಿಗೆ ಯಾರೂ ಸಂಪಾದಿಸಿಕೊಡುವುದಿಲ್ಲ. ಉನ್ನತ ಸ್ಥಾನವನ್ನೇರಲು ಯಾರೂ ಸಹಕರಿಸುವುದಿಲ್ಲ. ನಮಗೆ ನಾವೇ ಧೈರ್ಯ ತುಂಬಿಕೊಳ್ಳಬೇಕು, ನಮಗೆ ನಾವೇ ಆತ್ಮಸ್ಥೆರ್ಯ ಹುಡುಕಿಕೊಳ್ಳಬೇಕು, ನಮಗೆ ನಾವೇ ಸಮಾಧಾನ ಹೇಳಿಕೊಳ್ಳಬೇಕು. ಸರಿ ಯಾವುದು? ತಪ್ಪು ಯಾವುದು? ಸಮಾಜದಲ್ಲಿ ನಾನು ಹೇಗಿರಬೇಕು? ನನಗೊಂದು ಅಸ್ತಿತ್ವ ಇದೆಯಾ? ನನ್ನ ಬದುಕಿಗೆ ಅರ್ಥ ಇದೆಯಾ? ಇವೆಲ್ಲಾ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ? ನಾವೇ! ಹೇಗೆ? ಗೊತ್ತಿಲ್ಲ! ಅರ್ಥಪೂರ್ಣ ಬದುಕಿಗೆ ವ್ಯಕ್ತಿತ್ವ ವಿಕಸನದ ಪಾಠಗಳು ಅತ್ಯಗತ್ಯ. ಅವುಗಳನ್ನು ಎಲ್ಲಿಂದ ಬೇಕಾದರೂ ಕಲಿಯಬಹುದು. 'ಜಾಲಿರೈಡ್' ಎಂಬಂತಹ ಪುಸ್ತಕಗಳಿಂದಲೂ ಹಿರಿಯರ ಅನುಭವಗಳನ್ನು ಓದಿ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದು. - ಅನಂತ ಕುಣಿಗಲ್
Nil
ತನ್ನ ಕಾಲದ ಹಲವು ಬಗೆಯ ಒತ್ತಡಗಳನ್ನು ಒಳಗೊಂಡು, ಅರಗಿಸಿಕೊಂಡ ನಂತರವೂ ಸೃಜನಶೀಲತೆಯ ಹೊಸ ಹಾದಿಗಳನ್ನು ಹುಡುಕುವ, 'ಸಯರ ಸಮ್ಮತ ಸಂತೆಯ ದಾರಿ'ಯನ್ನು ಅನುಸರಿಸದ ಲೇಖಕರು ಮಾತ್ರವೇ ಒಂದು ಭಾಷೆಯ ಸಾಹಿತ್ಯವನ್ನು ಕಟ್ಟಬಲ್ಲರು. ರಂಗಭೂಮಿ, ಚಲನಚಿತ್ರ, 'ಜೀವಂತ' ಜೀವನ ಮುಂತಾದ ಹತ್ತು ಹಲವು ಸಂಗತಿಗಳಲ್ಲಿ ತೀವ್ರವಾದ ಆಸಕ್ತಿಗಳನ್ನು ಹೊಂದಿರುವ ಗೆಳೆಯ ಮೌನೇಶ ಬಡಿಗೇರ್ ಅವರು ಅಂತಹ ಕೆಲವು ತರುಣ-ತರುಣಿಯರಲ್ಲಿ ಒಬ್ಬರು. ಕಥೆ, ಕವಿತೆ, ಕಾದಂಬರಿ ಮುಂತಾದ ಪುಕಾರಗಳ ಸಾಧ್ಯತೆಗಳನ್ನು ಅರಸುವ ಕೆಲಸವು 'ಸೃಜನಶೀಲ ಕಲ್ಪನೆ' ಮತ್ತು 'ಮಾಧ್ಯಮ ಶೋಧನೆ'ಗಳನ್ನು ಅವಲಂಬಿಸಿರುತ್ತದೆ. ಇವುಗಳ ಜೊತೆಗೆ, ಜಡವಲ್ಲದ ಕೇವಲ ಬೌದ್ಧಿಕವಲ್ಲದ ತಾತ್ವಿಕ ಕುತೂಹಲ/ಚಿಂತನೆಯೂ ಅದಕ್ಕೆ ಅಗತ್ಯವಾದ ಇನ್ನೊಂದು ಗುಣ. ಇದೆಲ್ಲದರ ಸಂಗಡ ಕತೆಸಾರನಿಗೆ ಲೋಕವನ್ನು ಅದರ ಸ್ಕೂಲನೆಲೆಯಲ್ಲಿ ಮಾತ್ರವಲ್ಲ, ವಿವರಗಳಲ್ಲಿ ಕಾಣುವ ಸುಣವೂ ಬೇಕು. ಮೂರ' ಮತ್ತು 'ಅಮೂರ' ಒಟ್ಟಿಸೆ ಗ್ರಹಿಸುವ, ಒಟ್ಟಾಗಿ ಹೆಣೆಯುವ ಕೆಲಸ ಬಹಳ ಜಟಲವಾದುದು. ಮೌನೇಶ್ ಈ ಎಲ್ಲ ಶಕ್ತಿಗಳನ್ನೂ ಬೇರೆ ಬೇರೆ ಪ್ರಮಾಣದಲ್ಲಿ ಪಡೆದಿದ್ದಾರೆ. ಆದ್ದರಿಂದ ಅವರ ಈ ಕಾದಂಬರಿ ನನಗೆ ಇಷ್ಟವಾಯಿತು. ನನ್ನನ್ನು ಬೆಳೆಸಿತು. ನಾನು ಅವರ ಕಥೆ, ಕವಿತೆಗಳನ್ನೂ ಪ್ರೀತಿಯಿಂದ ಓದಿದ್ದೇನೆ. -ಎಚ್. ಎಸ್. ರಾಘವೇಂದ್ರ ರಾವ್
ವಿನಾಯಕ ನಾಯಕ್ , ರಾಜನ್ ದೇಶಪಾಂಡೆ
Showing 1771 to 1800 of 5123 results