#
ಪ್ರೊ ಎಲ್ ಎಸ್ ಶೇಷಗಿರಿ ರಾವ್
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
nil
ಬದುಕಿನ ಪ್ರತಿ ಕ್ಷಣವನ್ನೂ, ಅದು ಒಂದೇ ಬಾರಿಗೆ ನಮಗೆ ಸಿಗುವುದು ಎಂಬಂತೆ ಅನುಭವಿಸಬೇಕಾದರೆ ಈ ಕೃತಿ ನಿಮಗೆ ಒಳ್ಳೆಯ ಮಾರ್ಗದರ್ಶಿಯಾದೀತು. ಈ ‘ಇಚಿಗೊ ಇಚಿಯೆ’ ಎಂಬ ಜಪಾನಿ ಕಲೆಯ ಬಗ್ಗೆ, ಅತ್ಯಧಿಕ ಮಾರಾಟವಾಗುವ ‘ಇಕಿಗಾಯ್ʼನ ಲೇಖಕರೇ ಬರೆದಿರುವ ಪುಸ್ತಕ ಇದಾಗಿದೆ. “ತಮಗೆ ಖುಷಿ ಕೊಡುವ ಸಂಗತಿಗಳನ್ನು ಮಾಡುವ ಮೂಲಕ ತಮ್ಮ ಬದುಕನ್ನು ಸರಳಗೊಳಿಸಬೇಕು ಎಂದು ಇಕಿಗಾಯ್ ಪ್ರತಿಯೊಬ್ಬರನ್ನೂ ಆಗ್ರಹಿಸುತ್ತದೆ” (ಮೇರಿ ಕೊಂಡೊ). ನಮ್ಮ ಜೀವನದಲ್ಲಿ ಪ್ರತಿ ಕ್ಷಣವೂ ಒಂದೇ ಬಾರಿಗೆ ಸಂಭವಿಸುತ್ತದೆ ಮತ್ತು ಅದನ್ನು ನಾವು ಕೈಚೆಲ್ಲಿದರೆ ಅದನ್ನು ಶಾಶ್ವತವಾಗಿ ಕಳೆದುಕೊಂಡಂತೆ- ಜಪಾನಿನ ನಾಣ್ಣುಡಿ ‘ಇಚಿಗೊ ಇಚಿಯೆ’ಯಿಂದ ಆಯ್ದುಕೊಂಡಿರುವ ಒಂದು ಉಪಾಯ. ಇದು, ಝೆನ್ ಬೌದ್ಧ ಧರ್ಮದ ತತ್ವವಾಗಿದೆ. ಇದನ್ನು ಹದಿನಾರನೇ ಶತಮಾನದ ಓರ್ವ ಟೀ ಮಾಸ್ಟರ್ಗೆ ಸಮರ್ಪಿಸಲಾಗಿದ್ದು, ಅವರ ಚಹಾ ಕೂಟಗಳ ಆಚರಣೆಗಳಲ್ಲಿ, ವರ್ತಮಾನ ಕ್ಷಣದ ಮೇಲೆ ಹೇಗೆ ಗಮನ ಕೇಂದ್ರೀಕರಿಸಬೇಕು ಎಂಬುದನ್ನು ತೋರಿಸಿಕೊಡಲಾಗಿದೆ. ಇದನ್ನು ‘ಗಮನದ ಕೂಟ’ ಎಂದೂ ಕರೆಯಲಾಗುತ್ತದೆ. ಹಳೆಯ ಕಾಲದ ಈ ಆಚರಣೆಯಿಂದ, ನಮ್ಮಲ್ಲಿ ಸಾವಧಾನತೆ ಮೈದುಂಬಿಕೊಳ್ಳುತ್ತದೆ. ಇಚಿಗೊ ಇಚಿಯೆ ಎಂಬ ಈ ಪುಸ್ತಕದ ಮೂಲಕ, ಪ್ರಸ್ತುತ ಕ್ಷಣದಲ್ಲಿರಲು ಪಂಚೇಂದ್ರಿಯಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ನೀವು ಕಲಿಯುತ್ತೀರಿ. ನಾವು ಪ್ರತಿಯೊಬ್ಬರೂ, ಗಮನ ಎಂಬ ಬಾಗಿಲನ್ನು ತೆರೆಯುವ, ಇತರರೊಂದಿಗೆ ಸೌಹಾರ್ದದಿಂದಿರುವ ಮತ್ತು ಜೀವನದೆಡೆಗಿನ ಪ್ರೀತಿಯ ಕೀಲಿಕೈಯನ್ನು ಹೊಂದಿರುತ್ತೇವೆ. ಆ ಕೀಲಿಕೈಯೇ ಇಚಿಗೊ ಇಚಿಯೆ. “ನಮ್ಮ ಚೈತನ್ಯವನ್ನು ಬಡಿದೆಬ್ಬಿಸಿ, ‘ಈ ಕ್ಷಣ’ದಲ್ಲಿ ಬದುಕುವುದರ ಮಹತ್ವವನ್ನು ನಮಗೆ ನೆನಪಿಸಲು ಹಾಗೂ ಭೂತಕಾಲ ಇಲ್ಲವೇ ಭವಿಷ್ಯದ ಬಗ್ಗೆ ಚಿಂತಿಸದೇ ಬದುಕುವುದನ್ನು ನೆನಪಿಸಲು ಈ ಸಣ್ಣ ಪುಸ್ತಕ ಸಾಕು”- ೫* ಓದುಗರ ವಿಮರ್ಶೆ “ಈ ಪುಸ್ತಕವು ನಮಗೆ ಅಲಾರ್ಮ್ ನಂತೆ ಕೆಲಸ ಮಾಡಬೇಕು. ಪ್ರತಿಯೊಂದು ‘ಕ್ಷಣ’ವನ್ನೂ ಪವಿತ್ರಗೊಳಿಸಲು ಗಮನ ಕೊಡಿ! ಪ್ರತಿ ಕ್ಷಣವನ್ನೂ ವಿಶೇಷವಾಗಿಸಿ!!”- ೫* ಓದುಗರ ವಿಮರ್ಶೆ “ಇಕಿಗಾಯ್ ಲೇಖಕರು ಸರಳವಾದ ಮತ್ತು ಹೆಚ್ಚು ಪರಿಪೂರ್ಣವಾದ ಬದುಕು ಬಾಳಲು ಇಚ್ಛಿಸುವವರಿಗೆ ಮತ್ತೊಂದು ಸಂಕ್ಷಿಪ್ತವಾದ ಮತ್ತು ಪಾಂಡಿತ್ಯಪೂರ್ಣ ಸೇರ್ಪಡೆಯನ್ನು ಮಾಡಿದ್ದಾರೆ”- ೫* ಓದುಗರ ವಿಮರ್ಶೆ
ಕು ಮಂಜುನಾಥ್ , ಅಶೋಕ್ ಹಂಜಗಿ
ಎ ಸುಬ್ರಮಣಿ
ಜೆ ರಂಜಾನ್ , ವಿ ಸಿ ರುದ್ರಾಣಿ
ಉತ್ತರ ಪರ್ವ”ದಲ್ಲಿ ಆಯ್ಕೆಯಾದ ಅನುವಾದಿತ ಕಥೆಗಳ ಈ ಸಂಕಲನ ಒಂದು ತಾಜಾ ಅನುಭೂತಿಯನ್ನು ಎದುರು ನೋಡುತ್ತಿರುವ ಅಕ್ಷರಮೋಹಿಗಳ ಜೋಳಿಗೆಗೆ ಮುಡಿಪಾಗಿಟ್ಟ ಹೋಳಿಗೆ.
ಸಬಿತಾ ಬನ್ನಾಡಿ ಡಾ. ಸಬಿತಾ ಬನ್ನಾಡಿ ಅವರು ಮೂಲತಃ ಉಡುಪಿ ತಾಲೂಕು ಮತ್ತೆ ಜಿಲ್ಲೆಯ ಬನ್ನಾಡಿ ಅವರು. ಕವಿ, ಲೇಖಕಿ, ಅಂಕಣಕಾರ್ತಿಯಾಗಿ ಹೆಸರುವಾಸಿಯಾಗಿರುವ ಸಬಿತಾ ಅವರ ಪ್ರಜಾವಾಣಿಯಲ್ಲಿ ಅನಿಯಮಿತ ಅಂಕಣ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದೆ. ಸಬಿತಾ ಅವರ ಪ್ರಕಟಿತ ಕೃತಿಗಳು- ಸಾಹಿತ್ಯ ನಿರೂಪಣೆಗಳ (ವಿಮರ್ಶಾ ಲೇಖನ), ಆಲಯವು ಬಯಲಾಗಿ (ಸಂಶೋಧನೆ), ನಿರಿಗೆ - (ಕವಿತಾ ಸಂಕಲನ), ಗೂಡು ಮತ್ತು ಆಕಾಶ - (ಅಂಕಣ ಬರಹ) ಅವಳ ಕಾವ್ಯ Read More...
ಕನ್ನಡದ ಮಹತ್ವದ ಹಿರಿಯ ಲೇಖಕಿಯರಲ್ಲೊಬ್ಬರಾದ ವಸುಮತಿ ಉಡುಪರವರ ಕಥಾಜಗತ್ತು ವಿಶಿಷ್ಟವಾದದ್ದು. ಸಂದುಹೋಗುತ್ತಿರುವ ಒಂದು ಕಾಲಘಟ್ಟದ ತಲೆಮಾರಿನ ಚಿತ್ರಣವನ್ನು ಕಟ್ಟಿಕೊಡುವ ವಸುಮತಿ ಉಡುಪರವರು ಅಪ್ಪಟ ಕಥೆಗಾರ್ತಿ, ನೇರವಾಗಿ, ಸಹಜ ಹದದಲ್ಲಿ ಕಂಡಿರಿಸಿರುವ ಇವರ ಪಾತ್ರಗಳು ಹೆಣ್ಣುಮನದ ನಾನಾಭಾವಗಳ ರಂಗಶಾಲೆ, ಪಾತ್ರಗಳ ದಿಟ್ಟತನ, ನೇರವಂತಿಕೆ, ಬದುಕನೆದುರಿಸುವ ಛಲ, ತಾಕಲಾಟಗಳ ನಡುವೆಯೂ ಗುರಿಯನ್ನು ಕಂಡುಕೊಳ್ಳುವ ಆಶಾವಾದ ಇಲ್ಲಿ ಅಸಾಧಾರಣ ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ಬದುಕಿನ ಹತ್ತು ಹಲವಾರು ಹಳವಂಡಗಳಲ್ಲಿ, ಬಾಳಿನ ಕುಲುಮೆಯಲ್ಲಿ ಬೆಂದು ನೊಂದರೂ ತಮ್ಮದೇ ರೀತಿಯಲ್ಲಿ ಪ್ರತಿರೋಧಿಸುತ್ತಾ, ಜೀವನದ ಕಟು ಸತ್ಯವನ್ನು ಅರಿಯುತ್ತಾ ಮಾನವೀಯ ಮೂರ್ತಿಗಳಾಗಿ ನಿಲ್ಲುವ ಇಲ್ಲಿನ ಹಲವಾರು ಪಾತ್ರಗಳ ಕಥೆ ಹೃದಯಸ್ಪರ್ಶಿಯಾಗಿ ಚಿತ್ರಿತಗೊಂಡಿದೆ.
Showing 4831 to 4860 of 9309 results