ಹದಿನೆಂಟು ದಿನದ ಯುದ್ಧ. ಹದಿನೆಂಟು ಅಕ್ಷೌಹಿಣೀ ಸೈನ್ಯ. ಅತಿರಥ-ಮಹಾರಥರ ಘನೋಪಸ್ಥಿತಿ. ಐದು ತಲೆಮಾರಿನ ಯೋಧರ ಸಮ್ಮಿಲನ. ಒಟ್ಟು ಸತ್ತವರು ಅರವತ್ತೆರಡು ಕೋಟಿ ಜನ. ಆನೆ-ಕುದುರೆಗಳ ಲೆಕ್ಕವಿಲ್ಲ. ಕೊನೆಗೆ ಉಳಿದಿದ್ದು ಬೆರಳೆಣಿಕೆಯ ಜನರಷ್ಟೇ. ಇದು ಕುರುಕ್ಷೇತ್ರದ ಯುದ್ಧದ ಕಥೆ. ಧರ್ಮಕ್ಷೇತ್ರದಲ್ಲಿ ಧರ್ಮರಕ್ಷೆಗಾಗಿ ನಡೆದ ಈ ಮಹಾಯುದ್ಧ ವಾಸ್ತವವಾಗಿ ನಡೆದಿದ್ದು ಹೇಗೆ? ಮಹಾಭಾರತ ವಿವರಿಸುವ ಮಾಹಿತಿಗಳ ಸಂಗಮವೇ ಈ ಕೃತಿ.
#
ಆತ್ಮೀಯರೆ, ನಾನು ತನಾಶಿ. ಜ್ಞಾನೇಶ್ವರನು ಪರಿಷ್ಕರಿಸಿದ 125 ಕಂದಪದ್ಯಗಳ ಚೂಡಾರತ್ನ ಶತಕವನ್ನು ನಿಮ್ಮ ಮುಂದೆ ತಂದಿದ್ದೇನೆ. ನಿತ್ಯವೂ ನೆನೆಯಬೇಕಾದ ನೀತಿಶತಕವಿದು.ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರಬೇಕಾದ ಭಾವನೆಗಳ ಗೊಂಚಲು ಇಲ್ಲಿದೆ. ಸತ್ವದ ಝೇಂಕಾರವಿದೆ. ಸತ್ಯದ ಓಂಕಾರವಿದೆ. ನೀತಿಯ ಸಾಕಾರವಿದೆ. ಬದುಕಿನ ವೈವಿಧ್ಯಗಳ ಆಕಾರವಿದೆ. ಕಣ್ಣಿಗೊತ್ತಿಕೊಂಡು ಓದುವ, ಎದೆಯಲಿಟ್ಟು ಆಸ್ವಾದಿಸುವ ಸಾರಸತ್ವಗಳ ಹೂರಣವಿದೆ. ಸಹೃದಯ ಬಂಧುಗಳೇ ನೀವು ಸವಿದು ನಿಮ್ಮ ಅಮೃತವಾಣಿಗಳಿಂದ ಜಗವನ್ನೂ ತಣಿಸಿರಿ. ನಿಮ್ಮನ್ನೇ ನೀವು ಕಾಣುವ ಕನ್ನಡಿಯ ತೆರದಿ ಇದನ್ನೂ ಕಾಣಿರಿ. ಆಸ್ವಾದಿಸಿ ಹಾರೈಸಿರಿ. ನಿಮ್ಮವ ತನಾಶಿ
ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತವಾದದಂಥ ಅನನ್ಯ ಬೋಧನೆಗಳ ಮೂಲಕ ಇಡೀ ಜಗತ್ತಿಗೆ ಶಾಂತಿಯ ದಾರಿ ತೋರಿಸಿದ ಜೈನ ಧರ್ಮವು ಭಾರತದ ಪುರಾತನ ಧರ್ಮಗಳಲ್ಲಿ ಒಂದು. ಭಾರತದ ಇತರ ಮತ್ತು ಪಾಶ್ಚಾತ್ಯ ಧರ್ಮಗಳ ತುಲನೆಯಲ್ಲಿ ಜೈನ ಧರ್ಮದ ಉನ್ನತ ಸ್ಥಾನಮಾನ ಗುರುತಿಸುವ ಈ ಪುಸ್ತಕ ಕನ್ನಡದ ಓದುಗರಿಗೆ ಒಂದು ಅಪೂರ್ವ ಕೊಡುಗೆ. ಜೈನ ಧರ್ಮದಲ್ಲಿ ೬೩ ಜನ ಶಲಾಕಾ ಪುರುಷರಿದ್ದಾರೆ. ಅದಕ್ಕಾಗಿಯೇ ಈ ಕೃತಿ ೬೩ ಅಧ್ಯಾಯಗಳಲ್ಲಿ ವಿಸ್ತರಿಸಿದೆ. ಜೈನ ಧರ್ಮದಲ್ಲಿ ಮತ್ತು ಧರ್ಮಗಳಲ್ಲಿ ಆಸಕ್ತಿ ಇರುವ ಯಾರೇ ಆದರೂ ಈ ಕೃತಿಯನ್ನು ಓದಬೇಕು. ದೇವದತ್ತ ಪಟ್ಟನಾಯಕರ ಈ ಅದ್ಭುತ ಕೃತಿಯನ್ನು ಪದ್ಮರಾಜ ದಂಡಾವತಿಯವರು ಅಷ್ಟೇ ಅನುಪಮವಾಗಿ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ
Showing 1 to 30 of 76 results