nil
#
ತಿರುಮಲೇಶ್ ಕೆ ವಿ
ಅಹಲ್ಯಾ ಪಾಯಿ ಹೊಳ್ಳರ್ ಎಂಬ ಮೇರು ವ್ಯಕ್ತಿತ್ವವು ಪುಣ್ಯಭೂಮಿ ಭಾರತದಲ್ಲಿ ಜನ್ಮತಾಳಿ 300 ವಸಂತಗಳು ತುಂಬಲಿದೆ. ಜೀವನದುದ್ದಕ್ಕೂ ಎದುದಾದ ಕಷ್ಟಗಳ ಸರಮಾಲೆಯ ನಡುವಿನಲ್ಲೂ ತನ್ನ ಪ್ರಜೆಗಳ ಹಿತಕ್ಕಾಗಿ, ಭಾರತದ ಏಕಾತ್ಮತೆಗಾಗಿ ಕಾರ್ಯ ನಿರ್ವಹಿಸಿ. ತನ್ನ ಸಮಸ್ತ ಸಂಪತ್ತು, ಅಧಿಕಾರ ಎಲ್ಲವೂ ಶಿವನಿಗೆ ಸೇರಿದ್ದಾಗಿದ್ದು ತಾನು ಕೇವಲ ಅವನ ಅಜ್ಞಾಪಾಲನೆ ಮಾಡುತ್ತಿದೀನಿ ಎಂಬ ಭಾವದಿಂದ ರಾಜ್ಯಭಾರ ಮಾಡುತ್ತಿದ್ದ ದೇಶ ಹಿಂದೆಂದೂ ಕಂಡಿಲ್ಲದ ಅಪರೂಪದ ವ್ಯಕ್ತಿತ್ವ. ಪದಕೀಯರ ದಾಳಿ, ಆಕ್ರಮಣಗಳ ನಡುವೆಯೂ ತನ್ನ ರಾಜ್ಯವನ್ನು ಸಮೃದ್ಧಗೊಳಿಸುತ್ತಾ ಇಡೀ ಭಾರತದ ಸಾಂಸ್ಕೃತಿಕ ವೈಭವವನ್ನು, ರಾಷ್ಟ್ರೀಯ ಚೇತನವನ್ನು, ಭಾರತದ ಏಕಾತ್ಮತೆಯನ್ನು ಮರು ಸ್ಥಾಪಿಸಲು ಶ್ರಮಿಸಿದವರು- 'ಅಖಂಡ ರಾಷ್ಟ್ರ ತಪಸ್ವಿನಿ ಅಹಲ್ಯಾಬಾಯಿ ಹೋಳ್ಳರ್". ಪ್ರಸ್ತುತ ಕೇಂದ್ರ ಸರ್ಕಾರದ ಹಲವಾರು ಜನಪರ ಯೋಜನೆಗಳನ್ನು ನೋಡಿದಾಗ ಲೋಕಮಾತೆ ಅಹಲ್ಯಾಬಾಯಿ ಹೊಳ್ಳರರ ಅಂದಿನ ರಾಜಕೀಯ, ಸಾಮಾಜಿಕ ನಿಲುವುಗಳೇ ಸ್ಫೂರ್ತಿ ಇರಬಹುದು ಎಂದನಿಸದೇ ಇರದು. ಮೇಘಾ ಪ್ರಮೋದ್
ಎನ್.ಸಿ. ಮಹೇಶ್ರವರ ಮೂರನೆಯ ಕಥಾಸಂಕಲನ ಅಗೆಲು. ಪ್ರಾರಂಭದ ಕಥೆಗಳ ಆಕ್ರೋಶವನ್ನು ಕಳೆದುಕೊಂಡು ಬದುಕನ್ನು ಸಾವಧಾನದಿಂದ ನೋಡುವ ಮನಸ್ಥಿತಿಯನ್ನು ರೂಢಿಸಿಕೊಂಡಿರುವ ಬಗೆ ಈ ಕಥೆಗಳಲ್ಲಿ ನಿಚ್ಚಳವಾಗಿ ಕಾಣಬರುತ್ತದೆ. ಇವರ ಹಲವಾರು ಕತೆಗಳು ಪ್ರಜಾವಾಣಿ, ಬುಕ್ ಬ್ರಹ್ಮ, ಮಯೂರ, ಅಕ್ಷರ ಸಂಗಾತ ಮುಂತಾದ ಕನ್ನಡದ ಪ್ರಮುಖ ಸಾಹಿತ್ಯ ಸ್ಪರ್ಧೆಗಳಲ್ಲಿ ಪುರಸ್ಕಾರಕ್ಕೆ ಪಾತ್ರವಾಗಿರುವಂತದ್ದು. ಇಲ್ಲಿನ ಬಹುಪಾಲು ಕಥೆಗಳು ಪ್ರಸ್ತುತ ಸಂದರ್ಭದ ಹಲವಾರು ವಿಚಾರಗಳಿಗೆ ಮುಖಾಮುಖಿಯಾಗುತ್ತವೆ. ಅದನ್ನು ಲೇಖಕ ಕಂಡಿರಿಸಿರುವ ಕ್ರಮ ಅತ್ಯಂತ ಪ್ರಾಮಾಣಿಕವಾಗಿದೆ. ಶಿಕ್ಷಣ ರಂಗದಲ್ಲಿರುವ ದಂಧೆ, ಒಂದು ವರ್ಗವನ್ನು ಹತ್ತಿಕ್ಕಲಾಗದೆ ತತ್ತರಿಸುತ್ತಿರುವ ಮತ್ತೊಂದು ವರ್ಗದವರ ಹಪಾಹಪಿ, ಸ್ತ್ರೀವಾದ, ದೈವದ ಕುರಿತ ನಂಬಿಕೆ, ಕೋಮುವಾದದ ಸ್ವರೂಪ, ಸಂವಿಧಾನ ಇಂದು ಹಲವರ ಮನಸ್ಸಿನಲ್ಲಿ ಅರಳಿಕೊಳ್ಳುತ್ತಿರುವ ಬಗೆ ಇಲ್ಲಿನ ಕಥೆಗಳ ವಸ್ತುವಾಗಿದೆ. "ವರ್ತಮಾನದಲ್ಲಿನ ಮಾಗುವಿಕೆಯ ಪ್ರಜ್ಞೆ ಕೂಡಾ ಅಂತಿಮವಾದುದಲ್ಲ" ಎಂಬ ಅರಿವಿನ ಎಚ್ಚರದಲ್ಲಿ ಬರೆಯುವ ಮಹೇಶ್ ಕನ್ನಡದ ಭರವಸೆಯ ಕತೆಗಾರ,
NA
Showing 271 to 300 of 5048 results