nil
#
*
ದಿ. ನೇರಂಬಳ್ಳಿ ಪ್ರಭಾಕರ ಆಚಾರ್ಯರು ತಮ್ಮ ಕಾವ್ಯಪ್ರೇಮ ಮತ್ತು ಸಾಹಿತ್ಯಾಸಕ್ತಿಗೆ ಹೆಸರಾಗಿದ್ದವರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಕಾವ್ಯ ಬೋಧನೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಛಾಪು ಮೂಡಿಸಿದವರು. ಅನೇಕ ಭಾರತೀಯ ಇಂಗ್ಲಿಷ್ ಕವಿಗಳಿಗೆ ವಿಮರ್ಶೆಯ ಒರೆಗಲ್ಲಾಗಿದ್ದವರು. 'ದ ಸುರಗಿ ಟೀ', 'ಮನು ಇನ್ ಕಿಮ್ಮಿಂದ', 'ಧ್ವನಿ ಆ್ಯಂಡ್ ಎಪಿಫನಿ' ಮತ್ತು 'ಕವಿತೆಯ ಓದು' ಕೃತಿಗಳ ಕರ್ತೃ. ಅವರ 'ಕವಿತೆಯ ಓದು' ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ. 'ಒಲವಿನ ದೈವ' ಎಂಬ ಈ ಕೃತಿ ಅವರ ಮರಣಾನಂತರ ಪ್ರಕಟಗೊಳ್ಳುತ್ತಿದೆ. ಇದು ಅವರ 'ಗಾಡ್ ಆಫ್ ಲವ್' ಕೃತಿಯ ಕನ್ನಡ ಅನುವಾದ. ಕೃಷ್ಣನ ಕತೆ ನಮಗಾರಿಗೂ ಹೊಸದಲ್ಲವಾದರೂ ಲೋಕದೊಡನೆ ಕೃಷ್ಣನ ಸಂಬಂಧ, ಎಲ್ಲ ಕಾಲಕ್ಕೂ ಅಗತ್ಯವಾದ ಪ್ರೇಮಭಾವದ ಪ್ರಸಾರಕನಾಗಿರುವ ಅವತಾರಪುರುಷನ ಅಗತ್ಯ, ಸರಿದಾರಿ ತೋರುತ್ತ ದಾರಿತಪ್ಪಿದವರನ್ನು ಶಿಕ್ಷಿಸುವ ಧೈರ್ಯ ಇವನ್ನೆಲ್ಲ ಒಳಗೊಳ್ಳುವಂತೆ ಆಚಾರ್ಯರು ಬರೆದಿರುವುದನ್ನು ಓದಿ ಸ್ವಯಂಸ್ಪೂರ್ತಿಯಿಂದ ಶಿಕ್ಷಣ ತಜ್ಞ ಪ್ರೊ. ಮಹಾಬಲೇಶ್ವರ ರಾಯರು ಕನ್ನಡಕ್ಕೆ ಸರಳ ಸುಂದರವಾಗಿ ಅನುವಾದಿಸಿದ್ದಾರೆ. ಈ ರಚನೆಗೆ ಜನಮನ್ನಣೆ ಸಿಗಲಿ. ನಾಡೋಜ ಕೆ. ಪಿ. ರಾವ್
ಡಾ. ಜಿ ಪ್ರಶಾಂತ ನಾಯಕ
Showing 991 to 1020 of 5051 results