• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ
  • Call Us: +91 7022122121 / +91 8861212172
  • Free shipping above ₹499
back

Publishers

Categories

Sub Categories

Authors

Languages

Book Type

Clear All
Filter
ಗಾಂಧಿ ನಾನು ಅರಿತಂತೆ | Gandhi Naanu Aritante

ಮೋಹನದಾಸ ಕರಮಚಂದ್ ಗಾಂಧಿಯವರನ್ನು ಕುರಿತು ಹೊಸ ತಲೆಮಾರು ಪ್ರೀತಿ ದ್ವೇಷದ ಭಾವನೆಯನ್ನು ಬೆಳೆಸಿಕೊಂಡಿದೆ. ಹಳೆಯ ಕಾಲದ ಆರಾಧನೆ ಹಿಂದೆ ಸರಿದು ವಸ್ತು ನಿಷ್ಠವಾಗಿ, ನಿರ್ದಾಕ್ಷಿಣ್ಯವಾಗಿ, ಕೆಲವೊಮ್ಮೆ ತೀರ ಕಟುವಾಗಿ ಗಾಂಧಿ ಜೀವನ ಮತ್ತು ದರ್ಶನವನ್ನು ವಿಮರ್ಶಿಸುವ ಪರಿಪಾಠ ಬೆಳೆದಿದೆ. ಅಂತೆಯೇ ಮುಸಲ್ಮಾನರ ಪರ, ಹಿಂದೂ ವಿರೋಧಿ ಎಂಬ ನೆಲೆಯಲ್ಲಿ ಗಾಂಧಿಯವರ ಬಗ್ಗೆ ಕಡುದ್ವೇಷವನ್ನು ಬೆಳೆಸುವ ಮತ್ತು ಹಂತಕ ಗೋಡೆಯನ್ನು ಆರಾಧಿಸುವ ಪರಂಪರೆಗೆ ಚಾಲನೆ ನೀಡಲಾಗಿದೆ. ಡಾ. ಮಹಾಬಲೇಶ್ವರ ರಾವ್ ಈ ಎರಡೂ ಚಿಂತನಧಾರೆಗಳನ್ನು ಮತ್ತು ಗಾಂಧಿ ಪ್ರತಿಪಾದಿಸಿದ ಸತ್ಯಾಗ್ರಹ, ಅಹಿಂಸೆ, ಸ್ವದೇಶಿ, ಸ್ವರಾಜ್ಯ, ಚರಕ ಮೊದಲಾದ ಪರಿಕಲ್ಪನೆಗಳನ್ನು ಪರಾಮರ್ಶಿಸುತ್ತಾರೆ. ಗಾಂಧಿ ಕೊಲೆಯ ಆರಂಭಿಕ ವಿಫಲಯತ್ನಗಳು ಮತ್ತು ಹತ್ಯೆಯ ಹಿಂದಿನ ಕಾರಣಗಳ ಮೇಲೆ ಕ್ಷಕಿರಣ ಬೀರುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಸಂಘರ್ಷದ ಸಂವಾದದ ಸಂಬಂಧವನ್ನು ವಿವರಗಳ ಮೂಲಕ ಕಟ್ಟಿಕೊಡುತ್ತಾರೆ. ಈ ಸಂಕಲನ ಗಾಂಧಿಚಿಂತನ ಸಂಕಥನಗಳ ಮಾಲೆಗೆ ಡಾ. ಮಹಾಬಲೇಶ್ವರ ರಾವ್ ನೀಡಿರುವ ಸಮದರ್ಶಿತ್ವದ ಕೊಡುಗೆ.

₹160   ₹142

Buy Now
ಗಾಂಧೀ ಜೋಡಿನ ಮಳಿಗೆ | Gandhi Jodina Malige

ಕತೆಗಾರಿಕೆಯ ಕೌಶಲವನ್ನು ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು.

₹175   ₹156

Buy Now
ಗಾನ ಯಾನ - ಕಾವ್ಯ ಮಿಲನ | Gaana Yaana - Kavya Milana

'ಹಾಡು ಹರಡಬೇಕು, ಮಾತು ಮರೀಬೇಕು' ಎನ್ನುತ್ತಾರೆ. ತಮ್ಮ ಬದುಕಿನ ಉದ್ದಕ್ಕೂ ಹಾಡನ್ನು ಹರಡುತ್ತಾ ಸಾಗಿದವರು ಎಚ್ ಆರ್ ಲೀಲಾವತಿ. ಕನ್ನಡದ ಮನೆ, ಮನಗಳಲ್ಲಿ ಅಚ್ಚೊತ್ತಿ ನಿಂತ ಹೆಸರು. 'ಹಾಡು' ಎನ್ನುವುದಕ್ಕೆ ಅನ್ವರ್ಥನಾಮವೇ ಲೀಲಾವತಿ ಎನ್ನುವಂತೆ ಇವರು ಹಾಡಾಗಿ ಹರಿದಿದ್ದಾರೆ. 'ಹಾಡಾಗಿ ಹರಿದಾಳೆ..' ಲೀಲಾವತಿ ಅವರ ಆತ್ಮಕಥನ. ಹಾಡನ್ನೇ ಉಸಿರಾಗಿಸಿಕೊಂಡ ಮಹಾನ್ ಪ್ರತಿಭೆಯ ಪಯಣದ ಕಥೆ. ಒಂದು ಅರ್ಥದಲ್ಲಿ ಈ ಕೃತಿ ಅದರ ಮುಂದುವರಿಕೆ. ಇದು ಕೇವಲ ಗಾನ ಯಾನವಲ್ಲ, ಕವಿಗಳ ಜೊತೆಗಿನ ಒಡನಾಟದ ಮೆಲುಕು ಸಹಾ. ಹಾಗಾಗಿಯೇ ಇದು 'ಗಾನ ಯಾನ, ಕಾವ್ಯ ಮಿಲನ'. ಈ ಕೃತಿ ಓದಿದರೆ ಲೀಲಾವತಿಯವರ ಬಗ್ಗೆ ಇರುವ ನಮ್ಮ ಪ್ರೀತಿ ಒಂದು ಹಿಡಿ ಹೆಚ್ಚೇ ಆಗುತ್ತದೆ.

₹250   ₹223

Buy Now