#
ಕತೆಗಾರಿಕೆಯ ಕೌಶಲವನ್ನು ಕತೆಗಾರನ ಆಳವಾದ ಸಂವೇದನಾಶೀಲತೆಯನ್ನು, ಸಮಾಜಮುಖಿಯಾದ ನೈಜ ಕಾಳಜಿಯನ್ನು ಹೊಂದಿರುವ ಗಟ್ಟಿಯಾದ ಕಥಾವಸ್ತುವುಳ್ಳ ಕತೆಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿವೆ. ಪ್ರಕಾಶ ಅವರು ನೆಲಮೂಲದ ಸಂಸ್ಕೃತಿಯ ಸತ್ವದಿಂದ ವಿಶೇಷವಾಗಿ ಪುಷ್ಟಿಗೊಂಡವರು.
nil
ಭಾರತ ಕಂಡ ಅದ್ಭುತ ನಾಯಕ, ಪಿತಾಮಹ ಹಾಗೂ ಬಹುಮುಖ ಪ್ರತಿಭೆ, ಬಹುಮುಖ ಚಿಂತಕ, ಶಾಂತಿಯುತ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರು ತಮ್ಮ ಸ್ವಂತ ಅನುಭವದಿಂದ ಕೈ, ತಲೆ ಮತ್ತು ಹೃದಯಗಳಿಗೆ ಆದ್ಯತೆಯನ್ನು ನೀಡಿ ಶಿಕ್ಷಣದಲ್ಲಿ ಇವುಗಳ ಬೆಳವಣಿಗೆಗೆ ಆದ್ಯತೆ ನೀಡಿದಾಗ, ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಅಲ್ಲದೆ ಮಾತೃಭಾಷಾ ಶಿಕ್ಷಣ, ಆಧ್ಯಾತ್ಮಿಕ ಶಿಕ್ಷಣ, ಪರಿಸರ ಶಿಕ್ಷಣ. ವಾರ್ಧಾಶಿಕ್ಷಣ ಹಾಗೂ ರಾಷ್ಟ್ರೀಯಶಿಕ್ಷಣದ ರೂಪುರೇಷೆಗಳ ಬಗೆಗೆ ವಿಭಿನ್ನ ನೆಲೆಗಳಲ್ಲಿ ಚಿಂತಿಸಿದ ಮಹಾತ್ಮ .. ಗಾಂಧೀಜಿಯವರ ಸಮಗ್ರ ಶೈಕ್ಷಣಿಕ ಚಿಂತನೆಗಳ್ಳುಳ್ಳ ಈ ಕೃತಿಯನ್ನು ಸಹೃದನು ಓದುಗರು ಓದಿ ಲೇಖಕರ ಮತ್ತು ಸಂಪಾದಕರ ಕೈಬಲಪಡಿಸಬೇಕಾಗಿ ಮನವಿಮಾಡಿಕೊಳ್ಳುತ್ತೇನೆ. ಡಾ. ವೆಂಕೋಬರಾವ್ ಎಂ. ಹೊಸಕೋಟೆ ಎಂ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯ ರಾಜಾಜನಗರ, ಬೆಂಗಳೂರು.
'ಹಾಡು ಹರಡಬೇಕು, ಮಾತು ಮರೀಬೇಕು' ಎನ್ನುತ್ತಾರೆ. ತಮ್ಮ ಬದುಕಿನ ಉದ್ದಕ್ಕೂ ಹಾಡನ್ನು ಹರಡುತ್ತಾ ಸಾಗಿದವರು ಎಚ್ ಆರ್ ಲೀಲಾವತಿ. ಕನ್ನಡದ ಮನೆ, ಮನಗಳಲ್ಲಿ ಅಚ್ಚೊತ್ತಿ ನಿಂತ ಹೆಸರು. 'ಹಾಡು' ಎನ್ನುವುದಕ್ಕೆ ಅನ್ವರ್ಥನಾಮವೇ ಲೀಲಾವತಿ ಎನ್ನುವಂತೆ ಇವರು ಹಾಡಾಗಿ ಹರಿದಿದ್ದಾರೆ. 'ಹಾಡಾಗಿ ಹರಿದಾಳೆ..' ಲೀಲಾವತಿ ಅವರ ಆತ್ಮಕಥನ. ಹಾಡನ್ನೇ ಉಸಿರಾಗಿಸಿಕೊಂಡ ಮಹಾನ್ ಪ್ರತಿಭೆಯ ಪಯಣದ ಕಥೆ. ಒಂದು ಅರ್ಥದಲ್ಲಿ ಈ ಕೃತಿ ಅದರ ಮುಂದುವರಿಕೆ. ಇದು ಕೇವಲ ಗಾನ ಯಾನವಲ್ಲ, ಕವಿಗಳ ಜೊತೆಗಿನ ಒಡನಾಟದ ಮೆಲುಕು ಸಹಾ. ಹಾಗಾಗಿಯೇ ಇದು 'ಗಾನ ಯಾನ, ಕಾವ್ಯ ಮಿಲನ'. ಈ ಕೃತಿ ಓದಿದರೆ ಲೀಲಾವತಿಯವರ ಬಗ್ಗೆ ಇರುವ ನಮ್ಮ ಪ್ರೀತಿ ಒಂದು ಹಿಡಿ ಹೆಚ್ಚೇ ಆಗುತ್ತದೆ.
Showing 1621 to 1650 of 5051 results