nil
. ದಿಲೀಪ್ ಎನ್ನೆ ಒಳ್ಳೆಯ ಕಥೆಗಾರನೆಂಬುದಕ್ಕೆ 'ತಿತ್ತಿದ್ವಾಸನ ಟೈಟಾನ್ ವಾಚು' ಕಥಾ ಸಂಕಲನದೊಳಗಿನ ಒಂಬತ್ತು ಕಥೆಗಳೇ ಸಾಕ್ಷಿ. ಎರಡನೇ ಕಥಾಸಂಕಲನ ಪ್ರಕಟಿಸುತ್ತಿರುವ ಈ ಹೊತ್ತಿನಲ್ಲಿ ವಿಲೀಪರ ಬರವಣಿಗೆಯ ಕೈವಾಡಕ್ಕೆ ಮತ್ತಷ್ಟು ಕಳೆ ಕೂಡಿಕೊಂಡಿದೆ. ಈ ಕಳೆ ಕೂಡಿಕೊಂಡಿರುವುದಕ್ಕೆ ಮಾಯ್ತಾರ ಮಲೆಮಾದಯ್ಯನ ತಳಮನೆಯಾದ ಕೊಳ್ಳೇಗಾಲ ಸೀಮೆಯ ಆಡುಮಾತಿನ ಚಂದ, ಮಾನವ ಜೀವನದ ಚಿತ್ರ-ವಿಚಿತ್ರ ಆಯಾಮಗಳ ಅಂದ, ಜೀವನದ ಒಳಪದರುಗಳಲ್ಲಿ ಅಡಗಿರುವ ವೃಥೆಯ ನಿನಾದ ಮುಂತಾದುವೆಲ್ಲಾ ಕಾರಣವಾಗಿದೆ. ಇವೆಲ್ಲವುಗಳನ್ನೂ ತಮ್ಮದೇ ಆದ ಕಲಾತ್ಮಕ ಶೈಲಿಯಲ್ಲಿ ನಿರೂಪಿಸುತ್ತಾ ಒಮ್ಮೊಮ್ಮೆ ನವ್ಯ ಕಥೆಗಳ ರೂಪದಲ್ಲಿ. ಒಮ್ಮೊಮ್ಮೆ ಮೌಖಿಕ ಕಾವ್ಯಕಥನದ ಧಾಟಿಯಲ್ಲಿ ಕಥೆ ಹೇಳುವ ದಿಲೀಪರ ಕಥನ ಸಾಮರ್ಥ್ಯ ಹುಬ್ಬೇರಿಸುತ್ತದೆ. ಬಂಜಗೆರೆ ಜಯಪ್ರಕಾಶ
#
ತೆರೆದ ಮನಸ್ಸಿನ ಪುಟಗಳು 25 ಕಥೆಗಳುಳ್ಳ ಕಥಾ ಸಂಕಲನ ಇದರಲ್ಲಿನ ಕಥೆಗಳಲ್ಲಿ ಕೆಲವು ಕಾಲ್ಪನಿಕವಾದರೆ, ಮತ್ತೆ ಕೆಲವು ನೈಜ ಘಟನೆಗಳನ್ನು ಆಧರಿಸಿ ಬರೆದಂತವು. ಹೆಚ್ಚಿನ ಕಥೆಗಳು ಮಹಿಳಾ ಪ್ರಧಾನ ಕಥೆಗಳು. ವರದಕ್ಷಿಣೆ, ಗಂಡು ಮಗುವಿನ ಮೋಹ, ನಶಿಸಿ ಹೋಗುತ್ತಿರುವ ಸಂಬಂಧಗಳ ಮೌಲ್ಯ, ಹಣದ ವ್ಯಾಮೋಹ ಮೊದಲಾದ ಸಾಮಾಜಿಕ ಸಮಸ್ಯೆಗಳ ಕುರಿತಾಗಿರುವ ಕಥೆಗಳಲ್ಲಿ ನೀತಿ ಪಾಠವಿದೆ. ಅಮ್ಮ. ಬಲಿದಾನ, ಮನೆಯ ಅದೃಶ್ಯ ಕಂಬಗಳು ನಮ್ಮಲ್ಲೇ ಎಲ್ಲೋ ನಡೆದಿರಬಹುದಾದ ಕಥೆಗಳು. ಸುಂದರಗೊಂದಲ, ಮ್ಯಾಜಿಕ್ ಲ್ಯಾಂಪ್, ಅದಲು ಬದಲು ಕಥೆಗಳು ಗಂಭೀರ ಕಥೆಗಳ ನಡುವೆ ತಿಳಿ ಹಾಸ್ಯ ಹೊಂದಿದೆ. ಜೊತೆಗೆ ಹೆಚ್ಚಿನ ಕಥೆಗಳು ಯುವ ಜನತೆಗೆ ಪಾಠವಾಗಬಲ್ಲ ಕಥೆಗಳು.
ಹೆಣ್ಣಿನ ಅಸಹಾಯಕತೆ ಮತ್ತು ಗಂಡಿನ ಸಂವೇದನಾಶೂನ್ಯತೆ ಅನುಪಮಾ ತಮ್ಮ ಕತೆಗಳಲ್ಲಿ ಮತ್ತೆ ಮತ್ತೆ ಶೋಧಿಸುವ ಎರಡು ಅಪರಿಹಾರ್ಯ ಸ್ಥಿತಿಗಳು. ಇಲ್ಲಿ ನಮಗೆ ಎದುರಾಗುವ ಎಲ್ಲಾ ಪಾತ್ರಗಳು ದಿನನಿತ್ಯದ ಕಷ್ಟ ಕಾರ್ಪಣ್ಯ ಮತ್ತು ಅನಿರೀಕ್ಷಿತವಾಗಿ ಎರಗಿಬರುವ ಆಘಾತಗಳ ಜೊತೆ ನಮ್ಮ ಕಾಲದ ರಾಜಕೀಯದಲ್ಲಿ ಹಾಸುಹೊಕ್ಕಾಗಿರುವ ಕ್ರೌರ್ಯದ ಜೊತೆ ಸಹ ಏಗಿಕೊಂಡು ತಾಳಿಕೊಂಡು ಬಾಳುವವರು; ಆದರೆ ಯಾರೂ ಒಂಟಿಯಲ್ಲ. ಸಂಕಲನದ ಎಲ್ಲ ಕಥೆಗಳೂ ಊರು ಮನೆಗಳ ಆವರಣವನ್ನೂ ಕಾಲದೇಶದ ಸಂದರ್ಭವನ್ನೂ ಕಟ್ಟಿಕೊಂಡೇ ನಮ್ಮೆದುರು ಅನಾವರಣಗೊಳ್ಳುವುದು. ಜಿ ರಾಜಶೇಖರ
NA
Showing 211 to 240 of 470 results