• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ಶತಮಾನಂ ಭವತಿ | Shatamanam Bhavati

'ಶತಮಾನಂಭವತಿ' ಅನ್ನೋದು ನೂರು ವರ್ಷ ಚೆನ್ನಾಗಿ ಬಾಳಲಿ ಎಂದು ಆಶೀರ್ವದಿಸುವ ಮಂತ್ರ. ಈ ಮಂತ್ರದ ಆಶಯವೇ ಕಾದಂಬರಿಯ ತಲೆಬರಹ, ಈ ಆಶಯದಂತೆ ರಘು ಅನ್ನುವ ಪ್ರಮುಖ ಪಾತ್ರದಾರಿ ಪರಿಶುದ್ಧ ಪ್ರೀತಿಗಾಗಿ ಹಪಾಹಪಿಸುತ್ತಾನೆ ಜೊತೆಗೆ ಆ ಪ್ರೀತಿಯನ್ನ ಗಳಿಸಿ ಜೀವನ ಪೂರ್ತಿ ಕಾಪಿಟ್ಟುಕೊಳ್ಳುವ ಉದ್ದೇಶವನ್ನು ಸಹ ಇಟ್ಟುಕೊಂಡಿರುತ್ತಾನೆ. ಅಷ್ಟೇ ಅಲ್ಲ ಅಂತಹ ಪ್ರೀತಿ ಪಡೆಯಲು ಪರಿಶುದ್ಧನಾಗೇ ಈತನು ಇರುತ್ತಾನೆ. ಮ್ಯಾಟ್ರಿಮೊನಿಯಲ್ ಅನ್ನೋದು ಮದುವೆ ಮಾಡಸಲಿಕ್ಕೆ ಇರುವ ಆನ್ ಲೈನ್ ವೆಬ್ ಸೈಟ್, ಈ ಆನ್ ಲೈನ್ ಪೇಜ್ ಗೆ ಮದುವೆಯಾಗುವ ಹುಡುಗಿಯ ತಲಾತ್ ಮಾಡಲು ನೋಂದಾಯಿಸಿಕೊಳ್ಳುವ ಕಥಾನಾಯಕ ರಘು ಪ್ರೊಫೈಲ್ ಮೂಲಕ ಪರಿಚಯ ಆಗುವ ಹುಡುಗಿ ಜೊತೆಯಲ್ಲಿ ಚಾಟ್ ಆರಂಭಿಸಿದ ನಂತರ ಅವಳೆಡೆಗೆ ಅನುರಾಗ ತೋರಿ ಆ ನಂತರ ಅವಳು ಸಿಗದೆ ಮೋಸಕ್ಕೆ ಒಳಗಾಗುತ್ತಾನಾ? ಅಥವಾ ಅವನಿಗೆ ಅವಳ ಪ್ರೀತಿ ಧಕ್ಕುತ್ತಾ? ಅನ್ನುವ ಹುಡುಕಾಟದಲ್ಲಿರುವ ನಮಗೆ, ಅದೇ ವಂಚನೆ ಮೋಸದ ಕಾರಣಗಳಿಂದ ಮತ್ತೆ ಹೇಗೆ ಅತ ಪ್ರೀತಿಯನ್ನ ಗಳಿಸುತ್ತಾನೆ ಅನ್ನುವ ಕಥಾ ಹೂರಣ ಇರುವ ಕಾದಂಬರಿ ಶತಮಾನಂಭವತಿ, ಕಾದಂಬರಿಯ ಅಂತ್ಯದಲ್ಲಿ ಹೇಳುವ ವಿಷಯವನ್ನ ನಮಗೆ ಗೊತ್ತಿಲ್ಲದಂತೆ ಮೊದಲಿಂದಲೂ ಬೆಸೆದುಕೊಂಡೆ ಬಂದಿರುತ್ತಾರೆ. ಅದೇ ಈ ಕಾದಂಬರಿಯ ಹೆಗ್ಗುರುತು. ಕಾದಂಬರಿಕಾರ ರಾಜಶೇಖರ್ ಮೂಲತಃ ಸಿನೆಮಾ ನಿರ್ದೇಶನ ಮಾಡಲು ಬಂದಾತ. ಆ ರಂಗದಲ್ಲಿ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಕೆಲಸ ಮಾಡಿ ಸದಭಿರುಚಿಯ ಹಾಗೂ ಹೊಸತನ ಇರುವ ಸಿನೆಮಾ ಕೊಡಬೇಕೆಂಬ ಸದಾ ಇಚ್ಚೆಯುಳ್ಳ ವ್ಯಕ್ತಿ, ವರ್ತಮಾನದ ಹದಿಹರೆಯದ ಪ್ರೀತಿ, ಪ್ರೇಮ ತಲ್ಲಣಗಳನ್ನ ಹೊಸತನದ ಹಚ್ಚಿಗೆ ಹಾಕಿ ಚೆಂದದ ರೂಪಗಳನ್ನ ಕೊಟ್ಟಿದ್ದಾರೆ. ಇದನ್ನ ಓದುತ್ತಿರುವಾಗಲೇ ಒಂದು ಸಿನೆಮಾ ನೋಡಿದ ಅನುಭವವಾಗುತ್ತದೆ, ಅಂದರೆ ಆ ರೀತಿಯಲ್ಲಿ ಕಾದಂಬರಿಕಾರರು ಸಾಹಿತ್ಯ ಕಟ್ಟಿಕೊಟ್ಟಿದ್ದಾರೆ. ಇದು ಅವರ ಚೊಚ್ಚಲ ಕೃತಿ, ಮುಂದೆ ಏನಾಗಬಹುದು ಅನ್ನುವ ಕುತೂಹಲಗಳ ನಡುವೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಒಳ್ಳೆಯ ಬರಹಗಾರರಾಗುವ ಕುರುಹುಗಳನ್ನ ಈ ಪುಸ್ತಕದ ಮೂಲಕ ಮಿತ್ರರು ನೀಡಿದ್ದಾರೆ. ಓದುಗರು ಅರೆಕೊರೆಗಳನ್ನ ಮನ್ನಿಸಿ ಸ್ವೀಕರಿಸಿ ಪ್ರೋತ್ಸಾಹಿಸಲಿ ಅನ್ನುವ ಸದಾಶಯ. ರಾಜು ಸೂನಗಹಳ್ಳಿ ಬರಹಗಾರ, ಚಲನಚಿತ್ರ ನಿರ್ದೇಶಕ

₹130   ₹111

ಸತ್ಯದ ಅನಾವರಣ | Sathyada Anavarana

ಹೆಣ್ಣೂಬ್ಬಳು ಬಾಡಿಗೆ ತಾಯಿಯಾಗಲು ಸಮ್ಮತಿಸಿದ್ದು ಯಾಕೆ ಎಂಬುದೇ ಈ ಕೃತಿಯ ಕಥಾವಸ್ತು.

₹100   ₹85

ಹಾವಿನ ಮನೆ | Havina Mane

ಹಣ ಯಾರಿಗೆ ತಾನೆ ಕಹಿ? ಅವನಿಗೊಂದು ದೊಡ್ಡ ಕನಸಿತ್ತು. ಸಮಾಜದಲ್ಲಿ ತಾನೂ ಒಬ್ಬ ಗಣ್ಯ ವ್ಯಕ್ತಿ ಅನಿಸಿಕೊಳ್ಳಬೇಕು, ಕೈ ತುಂಬಾ ಹಣ ಗಳಿಸಬೇಕೆನ್ನುವುದು.

₹250   ₹215

ಹೂವಿನ ಕೊಲ್ಲಿ | Hoovina Kolli

ಯಾರಾದರೂ ನನ್ನ ಎದೆಗೆ ಬಂದೂಕಿಟ್ಟು, ನಿನ್ನ ಕೊನೆಯ ಆಸೆ ಏನು ಅಂತ ಕೇಳಿದ್ರೆ… ಅಬ್ದುಲ್ ರಶೀದ್ ಅವರ ಬರಹಗಳನ್ನು ಇನ್ನೊಮ್ಮೆ ಓದಿಕೊಂಡುಬಿಡ್ತೀನಿ ಅಂತ ಬಂದೂಕಿಟ್ಟವರಿಗೆ ಹೇಳುವೆ. ಜಯಂತ್ ಕಾಯ್ಕಿಣಿ. ಕಾಯ್ಕಿಣಿ ಸರ್ ಇಂತಹ ಮಾತುಗಳನ್ನು ಹೇಳುತ್ತಾರೆಂದರೆ ‘ಅಬ್ದುಲ್ ರಶೀದ್’ ಅವರ ಸಾಹಿತ್ಯದ ಶಕ್ತಿ ನಿಮಗೆ ಅರಿವಾದೀತು. ಅವರು ಕಥೆ ಹೇಳುವ ರೀತಿ, ಅವರ ಕಥೆಗಳಲ್ಲಿನ ವಸ್ತು ವೈವಿದ್ಯತೆ, ಒಳನೋಟಗಳು ತುಂಬಾ ಅನನ್ಯವಾಗಿರುತ್ತವೆ. ಆದ್ದರಿಂದಲೇ ಅವರ ಕಥೆಗಳು ಒಂದಕ್ಕಿಂತ ಒಂದು ವಿಶೇಷವಾಗಿರುತ್ತವೆ ಮತ್ತು ಅವರನ್ನು ಓದುವ, ಅವರ ಕಥೆಗಳಿಗಾಗಿ ಕಾಯುವ ಒಂದು ದೊಡ್ಡವರ್ಗವೇ ಇದೆ. ಅಂತಹ ಅಬ್ದುಲ್ ರಶೀದ್ ಅವರ ಹೂವಿನ ಕೊಲ್ಲಿ ಪರಿಷ್ಕೃತ ಕಾದಂಬರಿಯನ್ನು ಇದೀಗ ವೀರಲೋಕ ಹೊರತರುತ್ತಿದೆ. ಕೊಡಗಿನ ಕಾಫಿ ತೋಟದ ಒಳಗಿನ ಬದುಕನ್ನು ಹೇಳುವ ಕಾದಂಬರಿ ಇದು. ಅಂತರ್ಜಾಲಕ್ಕಾಗಿ ಬರೆದಂತಹ ಈ ಕಾದಂಬರಿಯನ್ನು ಆಗ ಲೇಖಕರಾದ ಅಬ್ದುಲ್ ರಶೀದ್ ಅವರು ಬ್ಲಾಗಂಬರಿ ಎಂದೂ ಕರೆದಿದ್ದರು. ಈ ಕಾದಂಬರಿ ಈಗ ಪರಿಷ್ಕೃತಗೊಂಡು ಬಿಡುಗಡೆಗೊಳ್ಳುತ್ತಿದೆ.

₹270   ₹230