nil
#
ಬನ್ನಂಜೆ ಗೋವಿಂದಾಚಾರ್ಯ
ಲೇಖಕ ಲಕ್ಷ್ಮಣ ಕೌಂಟೆ ಅವರ ಪೌರಾಣಿಕ ಕಾದಂಬರಿ ಕೃತಿ ʻಋಷ್ಯಶೃಂಗ: ಯುವ ಮಳೆಮುನಿಯೋರ್ವನ ರಾಮಾಯಣ ಪೂರ್ವದ ಕಥೆ ಆಧಾರಿತ ಕಾದಂಬರಿʼ. ಮಹಾಭಾರತದಲ್ಲಿ ಒಂದು ಸಣ್ಣ ಉಪಕಥೆ ಆಗಿ ಬರುವ ಖಷ್ಯಶೃಂಗ ಮುನಿಯ ಕಥೆಯನ್ನು ಕುತೂಹಲಕಾರಿ ಆಗಿ ಹೇಳಿದ್ದಾರೆ. ಇವರು ಕಶ್ಯಪನ ಮೊಮ್ಮಗ ಋಷಿ ವಿಭಾಂಢಕನ ಮಗ. ತನ್ನ ಪತ್ನಿ ತನ್ನನ್ನು ತೊರೆದು ಹೋದಳೆಂಬ ಸಿಟ್ಟಿನಲ್ಲಿ ವಿಭಾಂಢಕ ಮಾನವ ದ್ವೇಷಿ ಆಗಿ ತನ್ನ ಮಗನನ್ನು ಕೌಶಿಕಿ ನದಿ ತೀರದ ಗೊಂಡಾರಣ್ಯ ಒಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಎಲ್ಲಾ ಮಂತ್ರ ತಂತ್ರ ಕಲಿಸಿ ಬೆಳೆಸುತ್ತಾನೆ. ತಂದೆಗೆ ವಿಧೇಯನಾಗಿ ಬೆಳೆದ ಋಷ್ಯಶೃಂಗ ಕಠಿಣ ಸಾಧನೆ ಮೂಲಕ ಮಳೆ ದೇವರನ್ನು ಒಲಿಸಿಕೊಳ್ಳುತ್ತಾನೆ. ಹೀಗೆ ತಾನು ಕಾಲು ಇಟ್ಟ ಕಡೆ ಮಳೆ ತರಿಸಲು ಸಾಧ್ಯ ಇರುವ ಅದ್ಬುತ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತಾನೆ. ಆದರೆ ಯೌವನದಲ್ಲಿ ತುಂಬಾ ಸ್ವೇಚ್ಛೆಯಿಂದ ವರ್ತಿಸಿದ ಕಾರಣ ಪುರುಷತ್ವ ಕಳೆದುಕೊಡಿರುತ್ತಾನೆ. ಈ ಕಾದಂಬರಿಯಲ್ಲಿ ರಾಜರ ಸ್ವಾರ್ಥ ಲಂಪಟತನವನ್ನೂ ಅನಾವರಣಗೊಳಿಸಿದ್ದಾರೆ. ಮಳೆ ನೀರಿನ ಸದುಪಯೋಗ, ಗುಡಿ ಗುಡಾರ ಮೇಲೆ ಖರ್ಚು ಮಾಡುವ ಹಣವನ್ನು ಪ್ರಜೆಗಳ ಹಿತಕ್ಕೆ ಖರ್ಚು ಮಾಡಬೇಕು ಎನ್ನುವ ನೀತಿಯನ್ನೂ ಹೇಳಿದ್ದಾರೆ.
ಪ್ರೊ ಎಲ್ ಎಸ್ ಶೇಷಗಿರಿ ರಾವ್
ನಗರವಾಸಿಗಳು ಸ್ವರ್ಗವೆಂದು ಉದ್ಘರಿಸುವ ಸಕಲೇಶಪುರ ಭಾಗದ ಹಸಿಹಸಿ ಚಿತ್ರಣ, ಅಲ್ಲಿನ ಜನಜೀವನ, ಕೆಲವೇ ವರ್ಷಗಳಲ್ಲಾದ ಭೌಗೋಳಿಕ ಬದಲಾವಣೆಗಳು, ಅಪರೂಪವಾಗುತ್ತಿರುವ ಅಪ್ಪಟ ಮಲೆನಾಡಿನ ಮರಗಳು, ಪ್ರಾಣಿಪಕ್ಷಿಗಳು, ಕ್ರಿಮಿಕೀಟಗಳು, ಮಲೆನಾಡಗಿಡ್ಡ ತಳಿಯ ದನಗಳು ಹೀಗೆ ಸಾಗುವ ಕೃತಿಯಲ್ಲಿ ಅಚ್ಚುಕಟ್ಟಾದ ಕಥಾ ಹಂದರವು ಒಂದು ಸುಂದರ ಪ್ರಾಕೃತಿಕ ಪ್ರವಾಸದಂತೆ ಸಾಗಿದೆ.
ಸುಧಾ ಆಡಕಳ
ಶ್ರೀಕೃಷ್ಣಯ್ಯ ಅನಂತಪುರ
Showing 481 to 510 of 3317 results