nil
nil.
. ದಿಲೀಪ್ ಎನ್ನೆ ಒಳ್ಳೆಯ ಕಥೆಗಾರನೆಂಬುದಕ್ಕೆ 'ತಿತ್ತಿದ್ವಾಸನ ಟೈಟಾನ್ ವಾಚು' ಕಥಾ ಸಂಕಲನದೊಳಗಿನ ಒಂಬತ್ತು ಕಥೆಗಳೇ ಸಾಕ್ಷಿ. ಎರಡನೇ ಕಥಾಸಂಕಲನ ಪ್ರಕಟಿಸುತ್ತಿರುವ ಈ ಹೊತ್ತಿನಲ್ಲಿ ವಿಲೀಪರ ಬರವಣಿಗೆಯ ಕೈವಾಡಕ್ಕೆ ಮತ್ತಷ್ಟು ಕಳೆ ಕೂಡಿಕೊಂಡಿದೆ. ಈ ಕಳೆ ಕೂಡಿಕೊಂಡಿರುವುದಕ್ಕೆ ಮಾಯ್ತಾರ ಮಲೆಮಾದಯ್ಯನ ತಳಮನೆಯಾದ ಕೊಳ್ಳೇಗಾಲ ಸೀಮೆಯ ಆಡುಮಾತಿನ ಚಂದ, ಮಾನವ ಜೀವನದ ಚಿತ್ರ-ವಿಚಿತ್ರ ಆಯಾಮಗಳ ಅಂದ, ಜೀವನದ ಒಳಪದರುಗಳಲ್ಲಿ ಅಡಗಿರುವ ವೃಥೆಯ ನಿನಾದ ಮುಂತಾದುವೆಲ್ಲಾ ಕಾರಣವಾಗಿದೆ. ಇವೆಲ್ಲವುಗಳನ್ನೂ ತಮ್ಮದೇ ಆದ ಕಲಾತ್ಮಕ ಶೈಲಿಯಲ್ಲಿ ನಿರೂಪಿಸುತ್ತಾ ಒಮ್ಮೊಮ್ಮೆ ನವ್ಯ ಕಥೆಗಳ ರೂಪದಲ್ಲಿ. ಒಮ್ಮೊಮ್ಮೆ ಮೌಖಿಕ ಕಾವ್ಯಕಥನದ ಧಾಟಿಯಲ್ಲಿ ಕಥೆ ಹೇಳುವ ದಿಲೀಪರ ಕಥನ ಸಾಮರ್ಥ್ಯ ಹುಬ್ಬೇರಿಸುತ್ತದೆ. ಬಂಜಗೆರೆ ಜಯಪ್ರಕಾಶ
#
ತನ್ನ ಮಾಲೀಕನ ಮಗಳನ್ನು ಪತ್ತೆ (ತುಬ್ಬು) ಹಚ್ಚಲು ಮಾನವ್ ಬೆಂಗಳೂರಿನಿಂದ ಅಮೆರಿಕಾಗೆ ಹೋಗುತ್ತಾನೆ. ಅವಳು ಹೇಗಿರುವಳೆಂದೂ, ಎಲ್ಲಿರುವಳೆಂದೂ ತಿಳಿಯದಿದ್ದ ಅವನು ಅಮೆರಿಕಾದ ಅನೇಕ ಊರುಗಳಿಗೂ, ಕದ್ದು ಮೆಕ್ಸಿಕೋಗೂ, ನಂತರ ಮತ್ತೊಂದುಖಂಡಕ್ಕೂ ಹೋಗುತ್ತಾನೆ. ಅವನ ಪ್ರಯತ್ನದಲ್ಲಿ ಅವನು ಸಾಫಲ್ಯಕಂಡನೇ? ಆಸಕ್ತಿಕರ, ಮಾಹಿತಿಪೂರ್ಣ ಕಾದಂಬರಿ...
ರಾ ಯಾ ಧಾರ್ವಾಡಕ
"ಬಾಸ್, ಆ ಮುಗ್ಧ ಹುಡುಗಿ ಇಂಪನಾ ಇದ್ದಾಳಲ್ಲಾ ನೋಡೋದಿಕ್ಕೂ ಚೆಲುವೆ. ನಮ್ಮ ಈ ಯೋಜನೆಗೆ ಅವಳೇ ಸರಿಯಾದ ಆಯ್ಕೆ" “ಸರಿ, ಹಾಗಾದ್ರೆ ಇವತ್ತು ಸಂಜೆ ಅವಳನ್ನು ಭೇಟಿಯಾಗು" ಅವನು ಒಪ್ಪಿಯಿಗೆಯಿತ್ತ ಇಂಪನಾ ಕೆಲಸಕ್ಕೆ ಹೊರಡುವ ಆತುರದಲ್ಲಿ ಬೆಳಿಗ್ಗೆ ಒಬ್ಬಳೇ ನಿರ್ಜನ ರಸ್ತೆಯಲ್ಲಿ ಬರುತ್ತಿರುವಾಗ ಗಕ್ಕನೆ ಕಾರೊಂದು ಬಂದು ಅವಳ ಹತ್ತಿರವೇ ನಿಂತಿತು. "ಮೇಡಂ, ಬನ್ನಿ ನಿಮಗೆ ಇನ್ನು ಬಸ್ಸು ಸಿಗೊಲ್ಲ. ನಾನೇ ನಿಮ್ಮನ್ನು ಡ್ರಾಪ್ ಮಾಡ್ತೀನಿ" ಪರಿಚಿತ ಧ್ವನಿ ಕೇಳಿದಂತಾಯಿತು. ಅವಳು ಹಿಂದೆ ಮುಂದೆ ಆಲೋಚಿಸದೆ ತೆರೆದ ಕಾರಿನ ಬಾಗಿಲೊಳಗೆ ತೂರಿಕೊಂಡಳು. ಬಾಗಿಲು ಕಾರು ರೊಯ್ಯನೆ ಮುಂದಕ್ಕೋಡಿತು... ಅವನು ಪಕ್ಕದಲ್ಲಿ ಕುಳಿತವಳತ್ತ ವಿಚಿತ್ರ ನೋಟ ಹರಿಸಿದ ಮುಂದೆ...? ನೀವೇ ಓದಿ ನೋಡಿ... 'ತೂಗುದೀಪ' ವಿಭಿನ್ನ ಕಥಾಹಂದರದ ಕುತೂಹಲಭರಿತ ಪತ್ತೇದಾರಿ ಕಿರು ಕಾದಂಬರಿ.
ತೆರೆದ ಮನಸ್ಸಿನ ಪುಟಗಳು 25 ಕಥೆಗಳುಳ್ಳ ಕಥಾ ಸಂಕಲನ ಇದರಲ್ಲಿನ ಕಥೆಗಳಲ್ಲಿ ಕೆಲವು ಕಾಲ್ಪನಿಕವಾದರೆ, ಮತ್ತೆ ಕೆಲವು ನೈಜ ಘಟನೆಗಳನ್ನು ಆಧರಿಸಿ ಬರೆದಂತವು. ಹೆಚ್ಚಿನ ಕಥೆಗಳು ಮಹಿಳಾ ಪ್ರಧಾನ ಕಥೆಗಳು. ವರದಕ್ಷಿಣೆ, ಗಂಡು ಮಗುವಿನ ಮೋಹ, ನಶಿಸಿ ಹೋಗುತ್ತಿರುವ ಸಂಬಂಧಗಳ ಮೌಲ್ಯ, ಹಣದ ವ್ಯಾಮೋಹ ಮೊದಲಾದ ಸಾಮಾಜಿಕ ಸಮಸ್ಯೆಗಳ ಕುರಿತಾಗಿರುವ ಕಥೆಗಳಲ್ಲಿ ನೀತಿ ಪಾಠವಿದೆ. ಅಮ್ಮ. ಬಲಿದಾನ, ಮನೆಯ ಅದೃಶ್ಯ ಕಂಬಗಳು ನಮ್ಮಲ್ಲೇ ಎಲ್ಲೋ ನಡೆದಿರಬಹುದಾದ ಕಥೆಗಳು. ಸುಂದರಗೊಂದಲ, ಮ್ಯಾಜಿಕ್ ಲ್ಯಾಂಪ್, ಅದಲು ಬದಲು ಕಥೆಗಳು ಗಂಭೀರ ಕಥೆಗಳ ನಡುವೆ ತಿಳಿ ಹಾಸ್ಯ ಹೊಂದಿದೆ. ಜೊತೆಗೆ ಹೆಚ್ಚಿನ ಕಥೆಗಳು ಯುವ ಜನತೆಗೆ ಪಾಠವಾಗಬಲ್ಲ ಕಥೆಗಳು.
ತ್ಯಾಗಕ್ಕಿಲ್ಲ ನೂಕುನುಗ್ಗಲು ಡಾ. ಗವಿಸ್ವಾಮಿ ಅತ್ಯಂತ ಕಡಿಮೆ ಶಬ್ದಗಳಲ್ಲಿ ಗಟ್ಟಿ ವಿಷಯವುಳ್ಳ ಕಥೆಗಳನ್ನು ಕಟ್ಟಿ ಕೊಟ್ಟಿದ್ದಾರೆ ಹೊತ್ತಗೆಯಲ್ಲಿನ ಅನೇಕ ಪುಟ್ಟ ಕಥೆಗಳನ್ನು ಕಾದಂಬರಿಗಳಾಗಿಸಬಹುದು ಎಂದರೆ ಈ ಕಥೆಗಳ ಶಕ್ತಿಯನ್ನು ಊಹಿಸಬಹುದು. ಮಾನವೀಯತೆ ಈ ಕಥೆಗಳಲ್ಲಿನ ಮುಖ್ಯ ಹೂರಣ.
Showing 1291 to 1320 of 3317 results