ಲೇಖಕರು, ಪತ್ರಕರ್ತರು ಆದ ಅನಂತ ಹುದೆಂಗಜೆ ಅವರು ಜನಸಾಮಾನ್ಯರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಸರಳ ಭಾಷೆ, ಶೈಲಿಯಲ್ಲಿ ಬರೆದಿರುವ ಪುಸ್ತಕವಿದು. ನಮ್ಮ ‘ಕನ್ನಡ ಮಾಣಿಕ್ಯ’ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಬರೆದಿರುವ ಲೇಖನಗಳ ಸಂಕಲನವೇ ಇದಾಗಿದೆ. ಇದೂ ಕೂಡ ಹಣಕಾಸು, ಬ್ಯಾಂಕಿಂಗ್ ಕ್ಷೇತ್ರದ ವಿಚಾರಗಳ ಕುರಿತ ಪುಸ್ತಕವಾಗಿದೆ. ಈ ಪುಸ್ತಕವನ್ನು ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ಹಣವನ್ನು ಮನುಷ್ಯ ಮಾಡುವುದು ಮುಖ್ಯವಲ್ಲ; ಅದರ ಸದ್ಬಳಕೆ ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಚಿತ್ರಣ ಹಾಗೂ ಜ್ಞಾನ ನಮಗೆ ಈ ಪುಸ್ತಕದಿಂದ ಲಭಿಸುತ್ತದೆ.
#
ಅಬ್ದುಲ್ ಕಲಾಂ ಎ ಪಿ ಜೆ
ಡಾ. ಸಿ ಆರ್ ಚಂದ್ರಶೇಖರ್ ನಿವೃತ್ತ ಮನೋವೈದ್ಯ ಪ್ರಾಧ್ಯಾಪಕರು ನಿಮಾನ್ಸ್ ಬೆಂಗಳೂರು ಲೇಖಕರು 300+ ಕನ್ನಡ ಪುಸ್ತಕಗಳು 50+ ಇಂಗ್ಲಿಷ್ ಪುಸ್ತಕಗಳು ಸಮಾಧಾನ ಕೇಂದ್ರದಲ್ಲಿ ಉಚಿತ ಸಲಹೆ ಚಿಕಿತ್ಸೆ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ಆಪ್ತ ಸಮಾಲೋಚನೆ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ವಿಶ್ವ ಆರೋಗ್ಯ ಸೇವಾ ಸಂಸ್ಥೆಯ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ
nil
ಐತಿಹಾಸಿಕ ಕಥನವನ್ನು ಜನಪದೀಯ ನೆಲೆಯಲ್ಲಿ ವಿಕಸನಗೊಳಿಸುತ್ತ ಕಥನಕಾಲದ ಜೊತೆಗೆ ಆಯಾ ದೇಶಕಾಲದ ಚಿತ್ರಣವನ್ನು ತೆರೆದಿಡುವ ಕಾದಂಬರಿ ಈ ‘ನಿಯುಕ್ತಿಪುರಾಣ’, ಕತೆಯ ಮಟ್ಟಿಗೆ ಅಗಾಧ ಅಳತೆಯ ಕ್ಯಾನ್ವಾಸ್ ಹೊಂದಿರುವ ಇದು ಸುಲಭಕ್ಕೆ ಗ್ರಹಿಸಿ ಹಿಡಿದಿಡಲು ಆಗದಷ್ಟು ದೊಡ್ಡ ಕಥನ. ಲಾವಣಿ, ಜನಪದ ಶಬ್ದ ಭಂಡಾರ, ಕಥನ ಕುತೂಹಲಕ್ಕಾಗಿ ಏರಿಳಿತದ ಅನುಸರಣೆಯ ತಂತ್ರಗಾರಿಕೆ. ಪಾತ್ರಗಳು ಕಟ್ಟಿಕೊಡುವ ಗಟ್ಟಿತನ, ವಿಸ್ತಾರವಾದರೂ ಕೈ ತಪ್ಪದ ಸಂವಹನ ಮತ್ತು ಸಂಪರ್ಕಗಳು, ಸುತ್ತು ಬಳಸಿದರೂ ಮರೆಯದೆ ಜತೆಗೊಯ್ಯುವ ಸಂದರ್ಭದ ಹಲವು ಆವರ್ತಗಳಲ್ಲೂ ಹದತಪ್ಪದ ನಿರೂಪಣೆ ಪುರಾಣದ ವಿಶೇಷತೆಯಾದರೆ, ಹೊಸ ಓದುಗನಿಗೆ ಮತ್ತು ಜನಪದೀಯ ರುಚಿ ಗ್ರಹಿಸಿದವರಿಗೆ, ಗ್ರಂಥಸ್ಥ ಭಾಷೆಯನ್ನಷ್ಟೇ ಓದುವವರಿಗೆ ‘ನಿಯುಕ್ತಿಪುರಾಣ’ ಕೊಂಚ ಒಗರು ಕೂಡ. ಆದರೆ ಪಟ್ಟು ಬಿಡದೆ ಓದಿ ಬಿದ್ದರೆ ಪಳಗಿ ಬಿಡುವ ಬರಹದ ಶೈಲಿಗೆ ಗೊತ್ತಿಲ್ಲದೆ ಆಪ್ತವಾಗಿಸುವ ಹಿಡಿತ ಇಲ್ಲಿದೆ.
ನಿರುದ್ಯೋಗ
ಆವರಣಗಳಿಂದ ಕಳಚಿಕೊಂಡ ಆತ್ಮದ ಹೊನಲು ಈ ಕವಿತೆಗಳಲ್ಲಿವೆ.. ವಿವರಿಸಲು ಹೋದರೆ ಮಾತು ಸೋಲುತ್ತದೆ. ಈ ಕವಿತೆಗಳನ್ನು ಓದಿದಾಗ, ಒಂದು ವಿಚಿತ್ರವಾದ ನಿರುಮ್ಮಳ ಶಾಂತ ಸ್ಥಿತಿಯ ಅನುಭೂತಿ ಉಂಟಾಗುತ್ತದೆ.
ಪ್ರೀತಿನಿ ಧನಂಜಯ ಅವರ “ನಿಷಿತೆ”. ಈ ಕಾದಂಬರಿಯು ಮನೋವೈಜ್ಞಾನಿಕ ಥ್ರಿಲ್ಲರ್ ಆಗಿದ್ದು, ಪ್ರೀತಿನಿ ಅವರು ತಮ್ಮ ಮೊದಲ ಕೃತಿಯಲ್ಲೇ ಇಂಥದ್ದೊಂದು ಪ್ರಯೋಗಕ್ಕೆ ಅಣಿಯಾಗಿದ್ದು ಮೆಚ್ಚಬೇಕಾದ ಸಂಗತಿ. ದೆವ್ವ, ಭೂತ, ವಾಸ್ತವ, ಕಲ್ಪನೆ ಮತ್ತು ವೈಜ್ಞಾನಿಕ ವಿಷಯಗಳ ಸುತ್ತಲೇ ಸುತ್ತುವ ಈ ಕಾದಂಬರಿಯ ಮೂಲಕ ನಿಜಕ್ಕೂ ದೆವ್ವ ಭೂತಗಳಿಗೆ ಅಸ್ತಿತ್ವ ಇದೆಯೋ? ಇಲ್ಲವೋ? ಎನ್ನುವ ವೈಚಾರಿಕತೆಯ ಬೆಳಕು ಚೆಲ್ಲಲು ಲೇಖಕಿ ಪ್ರಯತ್ನಿಸಿದ್ದಾರೆ. ಎಷ್ಟೊಂದು ಸಿನೆಮಾಗಳನ್ನು ನೋಡಿದರೂ ದೆವ್ವ ಭೂತಗಳ ಬಗೆಗಿನ ಕುತೂಹಲ ತಣಿಯದವರಿಗೆ ಈ ಕೃತಿ ರಸಾನುಭವ ನೀಡಬಲ್ಲುದು ಮತ್ತು ಒಂದೊಳ್ಳೆ ಎಂಟರ್ಟ್ರೈನರ್ ಆಗಬಲ್ಲುದು.
ಮಂಗಳೂರು ನಗರ ಹಲವು ಬದುಕುಗಳ ವಿವಿಧ್ಯಮಯ ನಗರ. ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಹಾಗೂ ಪಾಕ ವೈವಿಧ್ಯತೆಗಳನ್ನು ಹಿತವಾಗಿ ತನ್ನ ಜನರಿಗೆ ದೊರಕಿಸುವ ಉದಾರನಗರ ಎನಿಸಿಕೊಂಡಿದೆ.
Showing 1591 to 1620 of 3319 results