ಸಂಪಟೂರು ವಿಶ್ವನಾಥ್
ನರಸಿಂಹಮೂರ್ತಿ ಎಂ ಎಸ್
#
ರತ್ನ ನ
ಪ್ರಸನ್ನ
nil
NA
ಭಾಷಾಂತರವೆನ್ನುವುದು 'ನೆರಳು' ಎಂದರು ದ ರಾ ಬೇಂದ್ರೆಯವರು, ಯಾವುದಾದರೂ ವಸ್ತುವಿನ ನೆರಳು ಆ ವಸ್ತುವಿನ ಆಕಾರದಲ್ಲಿಯೇ ಇರುತ್ತದೆಯಷ್ಟೆ ಅನುವಾದ ಕೂಡ ಹಾಗೆಯೇ. ನೂರಕ್ಕೆ ನೂರರಷ್ಟು ಮೂಲ ಕೃತಿಯನ್ನು ಅನುಸರಿಸಿದ ಅನುವಾದ ಕೂಡ ಸ್ವಸಂಪೂರ್ಣ ಕೃತಿಯಲ್ಲ ಕೊನೆಗೂ ಅದೊಂದು ಅನುವಾದವಷ್ಟೆ ಹಾಗಾಗಿ ಒಂದು ಭಾಷೆಯ ಕೃತಿಯನ್ನು ಇನ್ನೊಂದು ಭಾಷೆಗೆ ತರುವವರ ಅನುವಾದದಲ್ಲಿ ಅವರದೇ ಭಾಷೆ, ಗ್ರಹಣಶಕ್ತಿ, ಸಂವೇದನೆ, ಅಭಿರುಚಿ ಮುಂತಾದವು ಇರುವ ಹಾಗೆಯೇ ಅವರ ಕಾಲಧರ್ಮವೂ ಉಸಿರಾಡುತ್ತಿರುತ್ತದೆ. ಈ ಮಾತು ಶ್ರೀರಾಮ್ ಅವರ ಈ ಅನುವಾದಕ್ಕೂ ಸಲ್ಲುವಂಥದು. ಹೀಗಿದ್ದೂ ಇಲ್ಲಿನ ಕೆಲವು ಕತೆಗಳಲ್ಲಿ ಮೂಲ ಕತೆಗಳ ಧಾಟಿ ಧೋರಣೆಗಳಿಗೆ ಅನುಗುಣವಾದ, ಕನ್ನಡದಲ್ಲಿ ಸಾಮಾನ್ಯವಾಗಿ ಕಾಣದ ವಾಕ್ಯರಚನೆಗಳೂ ನುಡಿಗಟ್ಟುಗಳೂ ಇವೆಯೆಂಬುದು ಗಮನಾರ್ಹ. ಇಂಥವು ಯಾವುದೇ ಭಾಷೆಯ ಅಭಿವೃದ್ಧಿಗೆ ಅತ್ಯಗತ್ಯ ಕೂಡ. ಎಸ್ ದಿವಾಕರ್
ಫೈಜ್ ಅವರು ಕತೆ ಬರೆಯುವುದಿಲ್ಲ; ಅದನ್ನು ಸುಮ್ಮನೆ ಹ-ರಿಯ ಬಿಡುತ್ತಾರೆ. ನದಿ ತನ್ನ ಚಾಡನ್ನು ತಾನು ಹಿಡಿದು ಹೊರಡುವಂತೆ ಕಥೆ ತನ್ನ ದಾರಿಯನ್ನು ಹಿಡಿದುಕೊಂಡು ಸುಮ್ಮನೆ ಹೊರಡುತ್ತದೆ. ಕಥೆಗಾರ ಫೈಡ್ ಹೊರಗಿನಿಂದ ಅದನ್ನು ನೋಡುತ್ತಾ ನಿಲ್ಲುತ್ತಾರೆ. ಹರಿದ ಆ ನದಿಯಲ್ಲಿ ಮಣ್ಣಿನ ಸೊಗಡಿದೆ. ಬಡವರ ನಾಲ್ಕು ಹನಿ ಕಣ್ಣೀರಿದೆ. ನೋವಿದೆ. ದಡವು ನದಿಯನ್ನು ಸಮಾಧಾನಿಸುವಂತೆ ಕಥೆಗಾರ భృహో జీవించిగ మిడియుత్తార, నూ+విగ మిడియన ಕಥೆಯನ್ನು ಯಾಕಾದರೂ ಬರೆಯಬೇಕು? ಎಂಬುದು ಅವರ ಧೋರಣೆ. ಅವರೆಂದೂ ಬದುಕು ಮತ್ತು ಕಥೆ ಈ ಎರಡನ್ನೂ ಬೇರೆ ಬೇರೆಯಾಗಿ ನೋಡಿಲ್ಲ. ಅದು ನನಗಿಷ್ಟ ಇಲ್ಲಿನ ಕಥೆಗಳು ಮಧ್ಯಾಹ್ನ ಬಿಸಿಲಿನಂತೆ ಶುರುವಾಗುತ್ತವೆ. ಮುಗಿಯುವ ಹೊತ್ತಿಗೆ ನಿಮ್ಮ ಎದೆಯಲ್ಲಿ ಮೋಡ ಕಟ್ಟುತ್ತದೆ. ಕಥೆ ಮುಗಿಸಿ ಎದ್ದು ಹೊರಟ ನಿಮ್ಮೊಳಗೊಂದು ಮಳೆ ಸುರಿಯುತ್ತವೆ. ಕಥೆ ಓದಿದವ ಹದವಾಗುತ್ತಾನೆ. ಹದವಾದ ಎದೆಯಲ್ಲಿ ಒಂದು ಮಾನವೀಯ ಸಸಿ ಗರಿಬಿಚ್ಚಲಿ ಎಂಬ ಕಾಳಜಿ ಈ ಕಥೆಗಾರನದು. ಇವರ ಕಥೆಗಳು ತಣ್ಣನೆಯ ಇಬ್ಬನಿಯ ಬಗ್ಗೆ ವ್ಯರ್ಥವಾಗಿ ಚರ್ಚಿಸುತ್ತಾ ಕೂರುವುದಿಲ್ಲ, ಮಧ್ಯಾಹ್ನದ ಸುಡು ಬಿಸಿಲಿನ ನೋವಿಗೆ ಒಂದು ಹಿಡಿ ನೆರಳಿನಂಥಹ ಮದ್ದಿಗಾಗಿ ತಡಕಾಡುತ್ತವೆ. ಕಥೆಗಳಲ್ಲಿ ಅಗ್ನಿ ಪ್ರಾಮಾಣಿಕತೆ ಕಾಣಿಸುತ್ತದೆ. ಕಣ್ಣಿಗೊಡೆದು ಸುಮ್ಮನೆ ಮೋಡಿ ಮಾಡುವ ತಂತ್ರಗಾರಿಕೆ ಅವರದಲ್ಲ. ಇಲ್ಲಿ ಅಧಿಕ ಪ್ರಸಂಗವಿಲ್ಲ. ಮೊದಲ ಬಾರಿ ನಗರಕ್ಕೆ ಬರುವ ಹಳ್ಳಿಯ ಹೈದನ ಮುಗ್ಧತೆಯಿದೆ. ಇವು ಅಸಲಿ ಜವಾರಿ ಕಥೆಗಳು, ನೆಲದ ಕಥೆಗಳು. ಇಲ್ಲಿನ ಕಥೆಗಳು ಮೋಸಮಾಡುವುದಿಲ್ಲ. -ಸದಾಶಿವ ಸೊರಟೂರು ಕವಿ, ಹೊನ್ನಾಳಿ
ಸುಬ್ಬಣ್ಣ ರಂಗನಾಥ ಎಕ್ಕುಂಡಿ
Showing 1591 to 1620 of 3771 results