nil
ಬನ್ನಂಜೆ ಗೋವಿಂದಾಚಾರ್ಯ
#
ಡಾ ಸಿ ಆರ್ ಚಂದ್ರಶೇಖರ್
ಶ್ರೀಮತಿ ಸುಖಲಾಕ್ಷಿಯವರು ಅನೇಕ ಬಗೆಯ ಲೇಖನಗಳನ್ನಿಲ್ಲಿ ಸಂಕಲಿಸಿದ್ದಾರೆ. ಮುಂಬಯಿಗಷ್ಟೇ ಸೀಮಿತಗೊಳಿಸದೆ, ಮಹಾರಾಷ್ಟ್ರದ ಹಿನ್ನೆಲೆಯೊಂದಿಗೆ, ಭಾಷೆ- ಸಂಸ್ಕೃತಿ, ಕೃಷಿಪದ್ಧತಿ, ರಂಗಭೂಮಿ, ನೃತ್ಯಕಲೆ ಇತ್ಯಾದಿ ಮತ್ತು ವಿವಿಧ ವಿಷಯಗಳ ಮೂವತ್ತಕ್ಕೂ ಮಿಕ್ಕಿದ ಬರೆಹಗಳಿವೆ. ಇದೊಂದು ಸಂಕೀರ್ಣ ಸಾಹಿತ್ಯ ಪ್ರಕಾರದ ಅಭಿವ್ಯಕ್ತಿ! ಇಲ್ಲಿ ಸಂದರ್ಭ ಚಿತ್ರಗಳಿವೆ, ವ್ಯಕ್ತಿಚಿತ್ರಗಳಿವೆ, ಸಾಮಾಜಿಕ ಹಿನ್ನೆಲೆಯ ಬರೆಹಗಳಿವೆ, ಸಾಧನಾ ಪಥಗಳ ದಾಖಲಾತಿಗಳೂ ಇವೆ! ವಿಶೇಷತಃ ಮಹಿಳೆಯರ ಸಾಧನೆಗಳನ್ನಿಲ್ಲಿ ರೇಖಿಸುವ ಪ್ರಯತ್ನವಿದೆ. ಏಷಿಯಾದ ಅತಿದೊಡ್ಡ ಕೊಳೆಗೇರಿಯೆನಿಸಿದ ಧಾರಾವಿಯ ವ್ಯಾವರ್ಣನೆಯೂ, ಕಾಮಾಟಿಪುರದ 'ಕೆಂಪುದೀಪ'ದ ಪ್ರದೇಶವೂ, ತೃತೀಯ ಲಿಂಗಿಗಳ ಪ್ರಸ್ತಾಪಗಳ ಸಹಿತ ಅನೇಕ ಸಾಂಸ್ಕೃತಿಕ ವಿಚಾರಗಳೂ ಇಲ್ಲಿ ಹಾದುಹೋಗುತ್ತವೆ. ಅನೇಕ ಲೇಖನಗಳ ಸಂಚಯನದ ಈ ಕೃತಿಯಲ್ಲಿ ಅತ್ಯಂತ ಸರಳವೂ " ನೇರವೂ ಆದ ಬಗೆಯಲ್ಲಿ ನಿರೂಪಿಸಿರುವ ಪ್ರಯತ್ನದ ಸಾಫಲ್ಯವನ್ನು ಕಾಣಬಹುದು
ವಯಸ್ಸಾಗುವುದು ಎಂಬ ಅನುದಿನದ ಪ್ರಕ್ರಿಯೆಯೇ ಸೃಷ್ಟಿಯ ಒಂದು ಸೋಜಿಗ. ಸಾವಿನ ಹಾದಿಯಲ್ಲಿ ಬರುವ ಒಂದು ಹಂತವಾದ ಕಾರಣಕ್ಕೋ ಏನೋ ವಯಸ್ಸಾಗುವುದೆಂದರೆ ನಿಡುಸುಯ್ಯುವವರೇ ಹೆಚ್ಚು. ಹಾಗಂತ ವಯಸ್ಸಾಗುವುದೇನು ನಿಲ್ಲುತ್ತದೆಯೇ? ಖಂಡಿತ ಇಲ್ಲ! ಮುಪ್ಪು, ವೃದ್ಧಾಪ್ಯ, ವಾನಪ್ರಸ್ಥಾಶ್ರಮಗಳೆಂದು ಹಲವು ಹೆಸರುಗಳಲ್ಲಿ ಕರೆಯಲಾಗುವ ಈ ಹಂತವು ಬರುವ ಸಮಯದಲ್ಲಿ ಬಂದೇ ಬರುತ್ತದೆ. ವರ್ಷಗಳಲ್ಲಿ ಆಯಸ್ಸನ್ನು ಅಳೆಯುವ ನಮಗೆ, ನಿಮಿಷಗಳಲ್ಲಿ ಸೋರಿಹೋಗುವ ಆಯಸ್ಸೇಕೆ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ? ವೃದ್ಧಾಪ್ಯದಲ್ಲೂ ಚಂದದ ಬದುಕು ಸಾಧ್ಯವಿಲ್ಲವೇ? ವೃತ್ತಿಬದುಕಿನಲ್ಲಿ ನಿವೃತ್ತಿಗೆ ತಯಾರಾದಂತೆ, ಬದುಕಿನಲ್ಲಿ ವೃದ್ಧಾಪ್ಯಕ್ಕೆ ತಯಾರಾದರೆ ತಪ್ಪೇನಿದೆ? ಹೀಗೆ ಹಲವು ಪ್ರಶ್ನೆ-ತಲಾಶೆಗಳ ಚುಂಗು ಹಿಡಿಯುತ್ತಾ ಹೊರಟ ನನಗೆ ದಕ್ಕುತ್ತಾ ಹೋದ ಸಂಗತಿಗಳು ಸಾಕಷ್ಟು. ಈ ವಿಷಯದ ಬಗ್ಗೆ ಪುಸ್ತಕವೊಂದನ್ನು ಬರೆಯಲು ನನಗೇನು ಮಹಾವಯಸ್ಸು ಎಂಬ ಪ್ರಶ್ನೆಯು ಕಾಡಿದ್ದೇನೋ ಹೌದು. ಆದರೆ ಬರಹಗಾರನೊಬ್ಬ ತನ್ನನ್ನು ಬಲವಾಗಿ ಕಾಡಿದ ಸಂಗತಿಗಳ, ಕತೆಗಳ ಬಗ್ಗೆ ತನ್ನ ಓದುಗರೊಂದಿಗೆ ಹೇಳಿಕೊಳ್ಳದೆ ಹೆಚ್ಚು ಕಾಲ ಇರಲಾರ. ಇವೆಲ್ಲದರ ಫಲವೇ ಈ ಪುಸ್ತಕ. "ಮುಸ್ಸಂಜೆ ಮಾತು" ಬದುಕಿನ ಮುಸ್ಸಂಜೆಯ ಕತೆಗಳನ್ನು ನಿಮಗಾಗಿ ತೆರೆದಿಟ್ಟಿರುವ ಒಂದು ಕಿರುಹೊತ್ತಗೆ. ಒಂದಲ್ಲ ಒಂದು ಹಂತದಲ್ಲಿ ಬದುಕಿನ ಮುಸ್ಸಂಜೆಯನ್ನು ನೋಡಲಿರುವ ಪ್ರತಿಯೊಬ್ಬರೂ ಒಮ್ಮೆ ಓದಬೇಕಾದ ಪುಸ್ತಕವಿದು ಎಂದು ವಿನಯದಿಂದ ಹೇಳಬಲ್ಲೆ! - ಪ್ರಸಾದ್ ನಾಯ್ಕ
Showing 2611 to 2640 of 3677 results