nil
ಒಂದು ಕಾಲಕ್ಕೆ ಸಾಹಿತ್ಯಲೋಕದಲ್ಲಿ ಶಿಕ್ಷಕರದ್ದೇ ಸಿಂಹಪಾಲು. ಆದರೆ ಈಗ ಕಾಲ ಬದಲಾಗಿದೆ. ನಮ್ಮ ಶಿಕ್ಷಕರಿಗೆ ಬರೆಯುವಷ್ಟು ಸಮಯ ಪಕ್ಕಕ್ಕಿಡಿ, ಓದಲೂ ಸಮಯವಿಲ್ಲದಂತಾಗಿದೆ ಶಿಕ್ಷಕವರ್ಗವೇ ಓದಿನಿಂದ ವಿಮುಖರಾಗಿರುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಈ ನಡುವೆ ಓದು ಅಂಕಗಳಿಕೆಗೆ ಮಾತ್ರ ಬಳಕೆಯಾಗುತ್ತಿರುವುದು ಹೊಸ ಸಂಗತಿ ಏನಲ್ಲ. ದೇಶದ ಪಿತಾಮಹರಂತಹ ದೊಡ್ಡ ಪ್ರಶ್ನೆಗಳನ್ನು ಬಿಡಿ, ದೇಶದ ರಾಷ್ಟ್ರಪತಿ, ರಾಜ್ಯಪಾಲರು ಯಾರೆಂಬುದು ಗೊತ್ತಾಗದಂತಹ ಶಿಕ್ಷಣವನ್ನು ನಾವು ಮಕ್ಕಳಿಗೆ ನೀಡುತ್ತಿದ್ದೇವೆ. ಇಂತಹ ಸ್ಥಿತಿಯಲ್ಲಿ ಇಲ್ಲೊಂದು ಶಾಲೆ, ಶಿಕ್ಷಕಿ ಮತ್ತವರ ದಿನಚರಿ ತುಸು ವಿಭಿನ್ನ ಮತ್ತು ಮಾದರಿಯಂತಿದೆ. ಚೂರು ಹೊಸ ಭರವಸೆಯನ್ನು ಮೂಡಿಸುತ್ತಿದೆ.
#
ಬನ್ನಂಜೆ ಗೋವಿಂದಾಚಾರ್ಯ
ಡಾ ಸಿ ಆರ್ ಚಂದ್ರಶೇಖರ್
ಶ್ರೀಮತಿ ಸುಖಲಾಕ್ಷಿಯವರು ಅನೇಕ ಬಗೆಯ ಲೇಖನಗಳನ್ನಿಲ್ಲಿ ಸಂಕಲಿಸಿದ್ದಾರೆ. ಮುಂಬಯಿಗಷ್ಟೇ ಸೀಮಿತಗೊಳಿಸದೆ, ಮಹಾರಾಷ್ಟ್ರದ ಹಿನ್ನೆಲೆಯೊಂದಿಗೆ, ಭಾಷೆ- ಸಂಸ್ಕೃತಿ, ಕೃಷಿಪದ್ಧತಿ, ರಂಗಭೂಮಿ, ನೃತ್ಯಕಲೆ ಇತ್ಯಾದಿ ಮತ್ತು ವಿವಿಧ ವಿಷಯಗಳ ಮೂವತ್ತಕ್ಕೂ ಮಿಕ್ಕಿದ ಬರೆಹಗಳಿವೆ. ಇದೊಂದು ಸಂಕೀರ್ಣ ಸಾಹಿತ್ಯ ಪ್ರಕಾರದ ಅಭಿವ್ಯಕ್ತಿ! ಇಲ್ಲಿ ಸಂದರ್ಭ ಚಿತ್ರಗಳಿವೆ, ವ್ಯಕ್ತಿಚಿತ್ರಗಳಿವೆ, ಸಾಮಾಜಿಕ ಹಿನ್ನೆಲೆಯ ಬರೆಹಗಳಿವೆ, ಸಾಧನಾ ಪಥಗಳ ದಾಖಲಾತಿಗಳೂ ಇವೆ! ವಿಶೇಷತಃ ಮಹಿಳೆಯರ ಸಾಧನೆಗಳನ್ನಿಲ್ಲಿ ರೇಖಿಸುವ ಪ್ರಯತ್ನವಿದೆ. ಏಷಿಯಾದ ಅತಿದೊಡ್ಡ ಕೊಳೆಗೇರಿಯೆನಿಸಿದ ಧಾರಾವಿಯ ವ್ಯಾವರ್ಣನೆಯೂ, ಕಾಮಾಟಿಪುರದ 'ಕೆಂಪುದೀಪ'ದ ಪ್ರದೇಶವೂ, ತೃತೀಯ ಲಿಂಗಿಗಳ ಪ್ರಸ್ತಾಪಗಳ ಸಹಿತ ಅನೇಕ ಸಾಂಸ್ಕೃತಿಕ ವಿಚಾರಗಳೂ ಇಲ್ಲಿ ಹಾದುಹೋಗುತ್ತವೆ. ಅನೇಕ ಲೇಖನಗಳ ಸಂಚಯನದ ಈ ಕೃತಿಯಲ್ಲಿ ಅತ್ಯಂತ ಸರಳವೂ " ನೇರವೂ ಆದ ಬಗೆಯಲ್ಲಿ ನಿರೂಪಿಸಿರುವ ಪ್ರಯತ್ನದ ಸಾಫಲ್ಯವನ್ನು ಕಾಣಬಹುದು
Showing 2671 to 2700 of 3772 results