• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಗದಾಯುದ್ಧಂ | Gadayuddham

ಕವಿಚಕ್ರವರ್ತಿ ಬಿರುದಾಂಕಿತ ಮಹಾಮೇರು ಕವಿ ರನ್ನ ವಿರಚಿತ ಗದಾಯುದ್ದಂ (ಸಾಹಸ ಭೀಮ ವಿಜಯಂ) ಕೃತಿ , ಗಮಕ ವಿದ್ವಾನ್ ಡಾ. ಎಂ ಎ ಜಯರಾಮ್ ರಾವ್ ಅವರ ವ್ಯಾಖ್ಯಾನದೊಂದಿಗೆ. 'ಗದಾಯುದ್ಧ'ವನ್ನು ರನ್ನನು ತನ್ನ ಆಶ್ರಯದಾತ ಅರಸನಾದ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ(ಕೊನೆಯಲ್ಲಿ ಪಟ್ಟಾಭಿಷೇಕವಾಗುವುದು ಭೀಮನಿಗೇ) ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ ಹೊಂದಿದ್ದರೂ, ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದು.

₹350   ₹298

ಗದಾಯುದ್ಧಂ ಇಬುಕ್ | Gadayuddam Ebook

ಕವಿಚಕ್ರವರ್ತಿ ಬಿರುದಾಂಕಿತ ಮಹಾಮೇರು ಕವಿ ರನ್ನ ವಿರಚಿತ ಗದಾಯುದ್ದಂ (ಸಾಹಸ ಭೀಮ ವಿಜಯಂ) ಕೃತಿ , ಗಮಕ ವಿದ್ವಾನ್ ಡಾ. ಎಂ ಎ ಜಯರಾಮ್ ರಾವ್ ಅವರ ವ್ಯಾಖ್ಯಾನದೊಂದಿಗೆ.

₹350   ₹175

ಗಮ್ಯ | Ghamya

nil

₹225   ₹200

ಗರ್ಭಗುಡಿ

nil

₹75   ₹67

ಗರ್ವದ ಗಮ್ಮತ್ತು | Garvada Gammattu

ಮಲೆನಾಡಿನ ಶ್ರೀಮಂತ ಜಮಿನ್ದಾರಿ ಕುಟುಂಬ ಶತಮಾನಗಳ ಕಾಲ ಪಾಳೆಗಾರರಾಗಿ ಸ್ವಂತ ಸೈನ್ಯವನ್ನು ಹೊಂದಿ ಸಾವಿರಾರು ಎಕರೆ ಭೂ ಮಾಲಿಕರಾಗಿ ಆಳು ಕಾಳು ಒಕ್ಕಲು ಹತ್ತಾರು ಗ್ರಾಮದ ಪಟೇಲ್ ಜವಬ್ದಾರಿ ಘರ್ವದಿಂದ ಗತ್ತಿನಿಂದ ಎಂತವರಿಗು ಅವರ ಆಡಳಿತ ಮತ್ತು ಶ್ರೀಮಂತಿಕೆ ಬೆರುಗು ತರುವಂತಿತ್ತು. ಇಲ್ಲಿ ಬರುವ ಪಟೇಲರು ಒಮ್ಮೆ ಹೈದರಾಲಿ ಆತನ ಮಗ ಟಿಪ್ಪು ವಿರುದ್ಧ ಬ್ರಿಟೀಷರ ಸಹಾಯ ಪಡೆದು ಸಮರ ಸಾರಿದವರು. ಒಮ್ಮೊಮ್ಮೆ ಗೆಲುವು ಕಂಡವರು. ಹೈದರ್ ಮತ್ತು ಟಿಪ್ಪು ಸಂತತಿ ಅಳಿದ ನಂತರ ಬ್ರಿಟೀಷರ ಕಾನೂನು ಮತ್ತು ಮತಾಂತರದ ವಿರುದ್ಧ ಸಮರ ಸಾರಿದವರು. ಹೀಗೆ ಹಲವಾರು ಘಟನೆಗಳ ಚಿತ್ರಣವನ್ನು ಈ ಕಾದಂಬರಿಯಲ್ಲಿ ಸೆರೆ ಹಿಡಿಯಲಾಗಿದೆ. ಒಮ್ಮೊಮ್ಮೆ ಕೆಲವು ಕಡೆ ಉತ್ತೇಕ್ಷೆಯಂತೆ ಕಂಡರು ಕೆಲವು ಕಡೆ ಗೊಂದಲವಾಗಿಯೂ ಕಂಡು ಬರಬಹುದು. ಅದೆಲ್ಲದಕ್ಕು ಕೂನೆಯಲ್ಲಿ ಉತ್ತರ ದೊರೆತಂತೆ ಕಾಣುತ್ತದೆ. ನಾನು ಹೇಳಬೇಕಾದ ಕೆಲವು ವಿಚಾರಗಳನ್ನು ಕಥಾ ನಾಯಕರ ಬಾಯಿಯಿಂದ ಹೇಳಿಸುವ ಪ್ರಯತ್ನ ಮಾಡಿದ್ದೇನೆ ಎನ್ನುವುದು ಸತ್ಯ. ಈ ಕೃತಿ ಓದಿ ತಾವು ಪ್ರಾಮಾಣಿಕ ಅಭಿಪ್ರಾಯವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತೀರೆಂದು ನಂಬಿದ್ದೇನೆ.

₹350   ₹312

ಗಾಂಧಿ ನಾನು ಅರಿತಂತೆ | Gandhi Naanu Aritante

ಮೋಹನದಾಸ ಕರಮಚಂದ್ ಗಾಂಧಿಯವರನ್ನು ಕುರಿತು ಹೊಸ ತಲೆಮಾರು ಪ್ರೀತಿ ದ್ವೇಷದ ಭಾವನೆಯನ್ನು ಬೆಳೆಸಿಕೊಂಡಿದೆ. ಹಳೆಯ ಕಾಲದ ಆರಾಧನೆ ಹಿಂದೆ ಸರಿದು ವಸ್ತು ನಿಷ್ಠವಾಗಿ, ನಿರ್ದಾಕ್ಷಿಣ್ಯವಾಗಿ, ಕೆಲವೊಮ್ಮೆ ತೀರ ಕಟುವಾಗಿ ಗಾಂಧಿ ಜೀವನ ಮತ್ತು ದರ್ಶನವನ್ನು ವಿಮರ್ಶಿಸುವ ಪರಿಪಾಠ ಬೆಳೆದಿದೆ. ಅಂತೆಯೇ ಮುಸಲ್ಮಾನರ ಪರ, ಹಿಂದೂ ವಿರೋಧಿ ಎಂಬ ನೆಲೆಯಲ್ಲಿ ಗಾಂಧಿಯವರ ಬಗ್ಗೆ ಕಡುದ್ವೇಷವನ್ನು ಬೆಳೆಸುವ ಮತ್ತು ಹಂತಕ ಗೋಡೆಯನ್ನು ಆರಾಧಿಸುವ ಪರಂಪರೆಗೆ ಚಾಲನೆ ನೀಡಲಾಗಿದೆ. ಡಾ. ಮಹಾಬಲೇಶ್ವರ ರಾವ್ ಈ ಎರಡೂ ಚಿಂತನಧಾರೆಗಳನ್ನು ಮತ್ತು ಗಾಂಧಿ ಪ್ರತಿಪಾದಿಸಿದ ಸತ್ಯಾಗ್ರಹ, ಅಹಿಂಸೆ, ಸ್ವದೇಶಿ, ಸ್ವರಾಜ್ಯ, ಚರಕ ಮೊದಲಾದ ಪರಿಕಲ್ಪನೆಗಳನ್ನು ಪರಾಮರ್ಶಿಸುತ್ತಾರೆ. ಗಾಂಧಿ ಕೊಲೆಯ ಆರಂಭಿಕ ವಿಫಲಯತ್ನಗಳು ಮತ್ತು ಹತ್ಯೆಯ ಹಿಂದಿನ ಕಾರಣಗಳ ಮೇಲೆ ಕ್ಷಕಿರಣ ಬೀರುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಸಂಘರ್ಷದ ಸಂವಾದದ ಸಂಬಂಧವನ್ನು ವಿವರಗಳ ಮೂಲಕ ಕಟ್ಟಿಕೊಡುತ್ತಾರೆ. ಈ ಸಂಕಲನ ಗಾಂಧಿಚಿಂತನ ಸಂಕಥನಗಳ ಮಾಲೆಗೆ ಡಾ. ಮಹಾಬಲೇಶ್ವರ ರಾವ್ ನೀಡಿರುವ ಸಮದರ್ಶಿತ್ವದ ಕೊಡುಗೆ.

₹160   ₹142