• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಸಣ್ಣ ಕಥೆಗಳಲ್ಲಿ ಜೀವನ ತತ್ವ | Sanna kathegalalli Jeevana Tatva

ಈ ಪುಸ್ತಕವನ್ನು ಬರೆದ ಡಾ. ಸತ್ಯವತಿ ಮೂರ್ತಿಯವರ ಕನ್ನಡ ಪ್ರೇಮ ಮತ್ತು ಸಾಧನೆಯೂ ಗಮನಾರ್ಹ. ವಿವಿಧ ಪ್ರಕಾರಗಳ ಹಲವು ಪುಸ್ತಕಗಳನ್ನು ರಚಿಸಿರುವ ಇವರು, ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಲ್ಲಿ (ರಾಯಲ್ ಕಾಲೇಜ್ ಆಫ್ ಮ್ಯೂಸಿಕ್) ನಡೆದ ಅಖಿಲ ಭಾರತೀಯ ಕವಿಗೋಷ್ಠಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿ, ಸಾಹಿತ್ಯ ರಚನೆ, ಸಂಶೋಧನೆ ಮತ್ತು ಉಪನ್ಯಾಸಗಳನ್ನು ನೀಡುತ್ತಾ ಬಂದಿರುವ ಇಂಗ್ಲೆಂಡಿನ ಸರ್ಕಾರದ ವತಿಯಿಂದ 'ಪ್ರಿಸನ್ ಮಿನಿಸ್ಟರ್' ಆಗಿ ನೇಮಕಾತಿಯಾಗಿರುವುದು ಹೆಮ್ಮೆಯ ವಿಚಾರ. ವಿದೇಶದಲ್ಲಿ ನೆಲೆಸಿದ್ದು, ಇಷ್ಟೆಲ್ಲಾ ಬಿಡುವಿಲ್ಲದ ಕೆಲಸದ ನಡುವೆಯೂ, ಕನ್ನಡದ ಕುರಿತು, ಕನ್ನಡದ ಸಣ್ಣ ಕಥೆಗಳ ಕುರಿತು ಅಪಾರ ಅಭಿಮಾನವಿಟ್ಟುಕೊಂಡು, ಈ ಕೃತಿಯನ್ನು ಬರೆದಿರುವುದು ಸಹ ಎಲ್ಲರೂ ಹೆಮ್ಮೆ ಪಡುವ ವಿಚಾರ. "ಸಣ್ಣ ಕಥೆಗಳಲ್ಲಿ ಜೀವನ ತತ್ವ"ದಂತಹ ಅಪರೂಪದ ಕೃತಿಯನ್ನು ಕನ್ನಡದ ಓದುಗರಿಗೆ ನೀಡಿರುವ ಡಾ. ಸತ್ಯವತಿ ಮೂರ್ತಿಯವರನ್ನು ಮನಸಾರೆ ಅಭಿನಂದಿಸುತ್ತೇನೆ. -ಶಶಿಧರ ಹಾಲಾಡಿ

₹170   ₹151

ಹರಿಭಕ್ತಿ ಸಾರ | Haribhakti saara

ಆತ್ಮೀಯರೆ, ನಾನು ನಿಮ್ಮ ತನಾಶಿ. ಟಿ.ಎನ್. ಶಿವಕುಮಾರ್, ಮಂಡ್ಯಕೊಪ್ಪಲು. ಇದೋ ಕನಕದಾಸರ ಹರಿಭಕ್ತಿಸಾರವನ್ನು ಅರ್ಥ ಮತ್ತು ವ್ಯಾಖ್ಯಾನ ಸಹಿತ ಕನ್ನಡಿಗರ ಮಡಿಲಿಗೆ ಇಡುತ್ತಿದ್ದೇನೆ. ಹರಿಯ ವರ್ಣನೆಯನ್ನೂ, ಲೀಲಾವಿಲಾಸಗಳನ್ನೂ, ಹಾಡಿ ತಣಿಯದ ದಾಸರ ಪದ ಸಾಮ್ರಾಜ್ಯವು ನನ್ನ ವ್ಯಾಖ್ಯಾನದ ಜೊತೆಗೆ ನಿಮ್ಮೊಡನಿದೆ. ಇದು ನಿಮ್ಮ ಮೈಮನಗಳನ್ನು ಪುಳಕಗೊಳಿಸಿದರೆ ನನ್ನ ಶ್ರಮ ಸಾರ್ಥಕ. ಹರಿ ನಾಮ ಸಂಕೀರ್ತನೆಯು ಕನ್ನಡನಾಡಿನ ಮನೆಮನಗಳಲ್ಲಿ ಮೊಳಗಲಿ, ತಾವು ಓದಿ ಹಾರೈಸಿ, ಹರಸಿ,

₹120   ₹107