nil
ರಘುನಾಥ ಚ ಹ
#
ಯಂಡಮೂರಿ ವೀರೇಂದ್ರನಾಥ್ ಯಂಡಮೂರಿ ವೀರೇಂದ್ರನಾಥ್ ಒಬ್ಬ ಭಾರತೀಯ ಕಾದಂಬರಿಕಾರರು ಮತ್ತು ಚಿತ್ರಕಥೆಗಾರರು. ಇವರು ತೆಲುಗು ಭಾಷೆಯಲ್ಲಿನ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ.ಅವರು ತಮ್ಮ ಸಾಮಾಜಿಕವಾಗಿ ಸಂಬಂಧಿತ ಬರಹಗಳು ಮತ್ತು ಯೂಟ್ಯೂಬ್ ವೀಡಿಯೊಗಳೊಂದಿಗೆ ಯುವ ಪೀಳಿಗೆಯ ಮೇಲೆ ಪ್ರಭಾವ ಬೀರುತ್ತಾರೆ. ಅವರ ಬರಹಗಳಲ್ಲಿ ಅವರು ಬಡತನ, ಪೂರ್ವಾಗ್ರಹಗಳು ಮತ್ತು ಮೂಢನಂಬಿಕೆಗಳಂತಹ ಭಾರತದಲ್ಲಿನ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತವಾಗಿರಲು ಜನರನ್ನು ಪ್ರೋತ್ಸಾಹಿಸುತ್ತಾರೆ. ಅವರು ಸಾಹಿತ್ಯದ ಆದರ್ಶವಾದಿ ಮತ್ತು Read More...
“ಬೇವಾಚ್” ಕತ್ತಲಾಗುತ್ತಿದ್ದಂತೆ ಎಚ್ಚರವಾಗುವ ಲೈವ್ ಬ್ಯಾಂಡಿನ ಝಗಮಗಿಸುವ ಬೆಳಕಿನಡಿಯಲ್ಲಿ, ಕಿವಿಗಡಚಿಕ್ಕುವ ಅಬ್ಬರದ ಹಾಡಿಗೆ ಅರೆಬರೆ ಬಟ್ಟೆತೊಟ್ಟು ಮೈ ಬಳಕಿಸುತ್ತಾ, ಗ್ರಾಹಕರನ್ನು ಕಣ್ಣಲ್ಲೇ ಸೆಳೆಯುವ ಯುವತಿಯೊಬ್ಬಳ ಸುತ್ತ ಹೆಣೆದ ಕಾದಂಬರಿ ಪರಿಸ್ಥಿತಿ ಮತ್ತು ಜವಾಬ್ದಾರಿ ಒಬ್ಬ ಮುಗ್ಧ ಹೆಣ್ಣನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ; ಮುಂದೆ, ಬದಲಾಗುವ ಅವಕಾಶ ಇದ್ದರೂ ಹಣದಾಸೆಗೆ ಬಿದ್ದ ಅವಳು ಯಾವ್ಯಾವ ಕುಕೃತ್ಯದಲ್ಲಿ ತೊಡಗಿಕೊಳ್ಳುತ್ತಾಳೆ ಎಂಬುದರ ಜೊತೆಗೆ ಬಡತನ, ಮೋಸ, ವ್ಯಭಿಚಾರ, ಗಂಡು ಮಗುವಿನ ವ್ಯಾಮೋಹ, ಪೊಲೀಸರ ಕ್ರೌರ್ಯ, ಕ್ರೈಂ ಮಿಗಿಲಾಗಿ ಬೆಲೆವೆಣ್ಣುಗಳ ಸಹವಾಸ ಮಾಡುವುದರಿಂದಾಗುವ ಪರಿಣಾಮವನ್ನು ಕಾದಂಬರಿಯಲ್ಲಿ ಕಾಣಬಹುದಾಗಿದೆ.
ಕವಯತ್ರಿ ವಿದ್ಯಾ ಭರತನಹಳ್ಳಿಯವರು ಕಥಾ ಪ್ರಪಂಚಕ್ಕೆ ಕಾಲಿರಿಸಿದ್ದು ಇತ್ತೀಚೆಗೆ. ನೋಡನೋಡುತ್ತ ಮೂಡಿಬಂದ ಹದಿಮೂರು ಕಥೆಗಳ ಸಂಕಲನ 'ಬೇಸೂರ್'. ರೋಚಕತೆಯ ಮೋಹಕ್ಕೆ ಬೀಳದಿದ್ದರೂ ಶೈಲಿ ಚುರುಕಾಗಿದೆ. ವಸ್ತು ಮತ್ತು ಪಾತ್ರಗಳ ಆಯ್ಕೆ ತುಂಬಾ ಅಥೆಂಟಿಕ್ ಆಗಿದೆ. ಕಥೆಗಾರನಿಗೆ ಅಗತ್ಯವಾದ ನಿರ್ಲಿಪ್ತತೆ ವಿದ್ಯಾರಿಗೆ ಸಿದ್ದಿಸಿದೆ. ಕೆಲವು ಕತೆಗಳಂತೂ ಹೃದಯದಾಳವ ಹೊಕ್ಕು ಬಗೆಯುವಂತಿವೆ. ಗಂಡನೆಂಬ ಪ್ರಾಣಿಯ ಕ್ರೌರ್ಯಕ್ಕೆ ಸಿಕ್ಕು. ಹಿಚುಕಲ್ಪಟ್ಟು ಮಸಣ ಸೇರುವ 'ಆಯಿ'ಯ ಕಮಲಾಕ್ಷಿ, ಅಂಥದೇ ಇನ್ನೊಬ್ಬ ಗಂಡನನ್ನು ಧಿಕ್ಕರಿಸಿ ಹೊರಬಂದು ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ 'ಹೇಳೆ ಮೇದಿನಿ'ಯ ಮೇದಿನಿ. ಸ್ತ್ರೀ ಹೃದಯದ ಉದಾತ್ತತೆ ಮೆರೆಯುವ 'ಗಿಂಡಿ ತುಂಬಿದ ಹಾಲಿ'ನ ಶಾಂತಲೆ. ತನ್ನ ಉಕ್ಕುವ ಪ್ರತಿಭೆಯನ್ನು ಸದಾ ಸಿಟ್ಟು, ಸೆಡವು, ಕೊಂಕು ಮಾತುಗಳಿಂದ ಮುರುಟಿಸುವ ಗಂಡನನ್ನು ಕಟ್ಟಿಕೊಂಡು ವಿಲ ವಿಲ ಒದ್ದಾಡುವ ವರ್ಷಾ ದೇಶಪಾಂಡೆ ಮುಂತಾದ ಜೀವಗಳು ಕಥೆ ಓದಿ ಮುಗಿಸಿಯಾದಮೇಲೂ ಬಹುಕಾಲ ನೆನಪಿನಲ್ಲಿ ಸ್ಥಾಯಿಯಾಗುತ್ತವೆ. ಮನ ಕದಡುತ್ತವೆ. ಚಿಂತನೆಗೆ ಹಚ್ಚುತ್ತವೆ. ವಸ್ತುವಿನ ಗಟ್ಟಿತನದಿಂದ, ಶೈಲಿಯ ದಟ್ಟತೆಯಿಂದ, ಜೀವನಾನುಭವದ ಸಮೃದ್ಧತೆಯಿಂದ ವಿದ್ಯಾ ಭರತನಹಳ್ಳಿಯವರ 'ಬೇಸೂರ್' ಕಥಾ ಸಂಕಲನ ಸಾಹಿತ್ಯ ಲೋಕದಲ್ಲಿ ತನ್ನದೇ ಒಂದು ಛಾಪು ಮೂಡಿಸುತ್ತದೆ.
ಡಾ ವೀಣಾ ಎಸ್ ಭಟ್
ನರಸಿಂಹಮೂರ್ತಿ ಎಂ ಎಸ್
Showing 7501 to 7530 of 9447 results