ಅಹಲ್ಯಾ ಪಾಯಿ ಹೊಳ್ಳರ್ ಎಂಬ ಮೇರು ವ್ಯಕ್ತಿತ್ವವು ಪುಣ್ಯಭೂಮಿ ಭಾರತದಲ್ಲಿ ಜನ್ಮತಾಳಿ 300 ವಸಂತಗಳು ತುಂಬಲಿದೆ. ಜೀವನದುದ್ದಕ್ಕೂ ಎದುದಾದ ಕಷ್ಟಗಳ ಸರಮಾಲೆಯ ನಡುವಿನಲ್ಲೂ ತನ್ನ ಪ್ರಜೆಗಳ ಹಿತಕ್ಕಾಗಿ, ಭಾರತದ ಏಕಾತ್ಮತೆಗಾಗಿ ಕಾರ್ಯ ನಿರ್ವಹಿಸಿ. ತನ್ನ ಸಮಸ್ತ ಸಂಪತ್ತು, ಅಧಿಕಾರ ಎಲ್ಲವೂ ಶಿವನಿಗೆ ಸೇರಿದ್ದಾಗಿದ್ದು ತಾನು ಕೇವಲ ಅವನ ಅಜ್ಞಾಪಾಲನೆ ಮಾಡುತ್ತಿದೀನಿ ಎಂಬ ಭಾವದಿಂದ ರಾಜ್ಯಭಾರ ಮಾಡುತ್ತಿದ್ದ ದೇಶ ಹಿಂದೆಂದೂ ಕಂಡಿಲ್ಲದ ಅಪರೂಪದ ವ್ಯಕ್ತಿತ್ವ. ಪದಕೀಯರ ದಾಳಿ, ಆಕ್ರಮಣಗಳ ನಡುವೆಯೂ ತನ್ನ ರಾಜ್ಯವನ್ನು ಸಮೃದ್ಧಗೊಳಿಸುತ್ತಾ ಇಡೀ ಭಾರತದ ಸಾಂಸ್ಕೃತಿಕ ವೈಭವವನ್ನು, ರಾಷ್ಟ್ರೀಯ ಚೇತನವನ್ನು, ಭಾರತದ ಏಕಾತ್ಮತೆಯನ್ನು ಮರು ಸ್ಥಾಪಿಸಲು ಶ್ರಮಿಸಿದವರು- 'ಅಖಂಡ ರಾಷ್ಟ್ರ ತಪಸ್ವಿನಿ ಅಹಲ್ಯಾಬಾಯಿ ಹೋಳ್ಳರ್". ಪ್ರಸ್ತುತ ಕೇಂದ್ರ ಸರ್ಕಾರದ ಹಲವಾರು ಜನಪರ ಯೋಜನೆಗಳನ್ನು ನೋಡಿದಾಗ ಲೋಕಮಾತೆ ಅಹಲ್ಯಾಬಾಯಿ ಹೊಳ್ಳರರ ಅಂದಿನ ರಾಜಕೀಯ, ಸಾಮಾಜಿಕ ನಿಲುವುಗಳೇ ಸ್ಫೂರ್ತಿ ಇರಬಹುದು ಎಂದನಿಸದೇ ಇರದು. ಮೇಘಾ ಪ್ರಮೋದ್
ಬ್ರಿಟಿಷ್ ವಿದ್ವಾಂಸರು ಮತ್ತು ಸ್ವಾತಂತ್ಯೋತ್ತರ ಕಾಲದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸವನ್ನು ಮರೆಮಾಜಿ, ತಪ್ಪು ಇತಿಹಾಸವನ್ನೇ ಯುವ ಪೀಳಿಗೆಯ ತಲೆಯಲ್ಲಿ ತುಂಬಿತು. ನೈಜ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪ್ರಾಮಾಣಿಕ ಅನಾವರಣ ಹಾಗೂ ಗಂಭೀರ ಅಧ್ಯಯನ ನಡೆಯಲೇ ಇಲ್ಲ. ತಮಗೆ ಬೇಕಾದಂತೆ ನೈಜ ಇತಿಹಾಸವನ್ನು ತಿರುಚಿ, ಭಾರತದ ಹೋರಾಟದ ಇತಿಹಾಸವನ್ನು ಕಾಂಗ್ರೆಸ್ ಇತಿಹಾಸವಾಗಿ ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಮಸ್ತಿಷ್ಕದಲ್ಲಿ ತುರುಕಲಾಯಿತು. ಇದೊಂದು ಕಾಂಗ್ರೆಸ್ ಸರಕಾರದ ಅನುಚಿತ, ಅಸಂಬದ್ಧ ಹಾಗೂ ಅಹಂಕಾರದ ಕ್ರಮವೇ ಆಗಿತ್ತು ಏ. ಓ.ಹೂಮ್ ಎಂಬ ವಿದೇಶೀಯನಿಂದ ಸ್ಥಾಪನೆಗೊಂಡು ಇಟಿಷರನ್ನು ಓಲೈಸುವುದಕ್ಕಾಗಿಯೇ ಹುಟ್ಟಿದ ಕಾಂಗ್ರೆಸ್ಗೆ ಈಗಲೂ ಭಾರತ ನಿಷ್ಠೆಗಿಂತ ವಿದೇಶಿ ನಿಷ್ಠೆಯೇ ಹೆಚ್ಚು ಎನ್ನುವುದು ಪದೇಪದೇ ಸಾಬೀತಾಗುತ್ತಲೇ ಇದೆ. ಕಾಂಗ್ರೆಸ್ ಕರಾಳ ಇತಿಹಾಸ ಮುಂದುವರೆಯುತ್ತಲೇ ಇದೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಕಾಂಗ್ರೆಸ್ ನಡೆಸಿದ ಅಪಸವ್ಯಗಳ ಇತಿಹಾಸವನ್ನು ಆಧಾರಸಹಿತ ಈ ಕೃತಿಯಲ್ಲಿ ಆದಷ್ಟೂ ಸರಳವಾಗಿ ವಿಶ್ಲೇಷಿಸಲಾಗಿದೆ.
ನಿತ್ಯ ಬದುಕಿನಲ್ಲಿ ಬರುವ ಆಗು ಹೋಗುಗಳ ನಡುವೆ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಪ್ರತಿಯೊಬ್ಬರಿಗೂ ಅವರವರ ನಿರ್ಧಾರಗಳು ಅವರಿಗೆ ಸರಿ ಎನ್ನಿಸುತ್ತದೆ. ನಮ್ಮ ನಿರ್ಧಾರಗಳು ಪ್ರಾಪಂಚಿಕ ಆಗು ಹೋಗುಗಳಿಗೆ ಹೊಂದಾಣಿಕೆ ಇದ್ದರೆ ಬದುಕು ಸ್ವಲ್ಪವಾದರೂ ಸುಗಮವಾಗಬಹುದು. ಈ ದಿಕ್ಕಿನಲ್ಲಿ ಕೆಲವು ತಾತ್ವಿಕ ವಿಚಾರಗಳನ್ನು ತರ್ಕದ ದೃಷ್ಟಿಯಿಂದ ಮಂಡಿಸಲಾಗಿದೆ. ಈ ಬರಹಗಳು ಬೇರೆಲ್ಲಿಯೂ ಪ್ರಕಟವಾಗಿಲ್ಲ.
ನಾಡಿನ ಹೆಸರಾಂತ ಸಾಹಿತಿಗಳು, ತತ್ತ್ವ ದರ್ಶನಗಳ ರಸಮಯ ವ್ಯಾಖ್ಯಾನಕಾರರೂ ಆಗಿರುವ ಜಿ. ಬಿ. ಹರೀಶರು ಬರೆದಿರುವ ಸಾ.ಕೃ. ರಾಮಚಂದ್ರ ರಾಯರ ಜೀವನ ಚರಿತ್ರೆಯನ್ನು ಓದುವಾಗ ರೋಮಾಂಚನವಾಗುವ ಜೊತೆ ಜೊತೆಗೇ ದುಃಖವೂ ಆಗುತ್ತದೆ. ಬಹುಶ: ಅವರು ಅಮೆರಿಕದಲ್ಲೋ, ಜರ್ಮನಿಯಲ್ಲೋ ಹುಟ್ಟಿ ಆ ದೇಶಗಳ ಇತಿಹಾಸ ಇಂಡಿಕ್, ಅಧ್ಯಯನ ವಿಭಾಗಗಳಲ್ಲಿ ದುಡಿದಿದ್ದರೆ ಈಗಿಗಿಂತ ಹೆಚ್ಚಿನ ಜಗದ್ವಿಖ್ಯಾತಿ, ಧನ ಸಂಪಾದನೆ ಮಾಡಿ ಮೇಲೇರಬಹುದಿತ್ತು. ಆಸ್ತಿಕ ಸಮಾಜವೇನೋ ಅವರನ್ನು ಗೌರವಿಸಿತ್ತು. ಆದರೆ ಇದ್ದಷ್ಟು ದಿನ ಅವರಿಗೆ ಒಂದು ಪದ್ಮಪ್ರಶಸ್ತಿಯೂ ಬರಲಿಲ್ಲ ಎಂಬುದೇ ನಮ್ಮ ಕಾಲದ ಮಹಿಮೆಯನ್ನು ಹೇಳುತ್ತದೆ. ರಾಯರು ತುಂಬು ಜೀವನ ನಡೆಸಿ ಕನ್ನಡ, ಇಂಗ್ಲಿಷ್, ಸಂಸ್ಕೃತ, ಪ್ರಾಕೃತ ಪಾಳಿ ಭಾಷೆಗಳ ಕಣಜವನ್ನು ತಿಳಿವಿನಿಂದ ತುಂಬಿದರು. ಸಾವಿರದ ಹೊಳೆಯುವ ಈ ಸಾಲಿಗ್ರಾಮಕ್ಕೆ ಇದು ನಮಸ್ಕಾರ ಪೂರ್ವಕ ನುಡಿ ನಮನ.