nil
ನಾನು ನಿಜವಾಗಿಯೂ ನಿಮ್ಮ ಬರೆಹದ ಭಾಷೆಗೆ ಕರಗಿ ಮಳೆಯಾದೆ. ಒಂದು ಕಥನಕ್ಕೆ ಏನೇನ್ ಬೇಕೋ ಎಲ್ಲಾ ಈ ಕಥನದಲ್ಲಿದೆ. ನಾನ್ ಎಷ್ಟ್ ಥ್ರಿಲ್ ಆಗಿದೀನಿ ಅಂದ್ರೆ. ಬಿಜ್ಜು ತನ್ನ ಕಷ್ಟಕ್ಕೆ ಪರಿಹಾರ ಹುಡುಕುತ್ತಾ ಸ್ನೇಹಿತ ಮುತ್ತುವಿನ ಊರು ತಲುಪೋದು.ಅಲ್ಲಿ ಮುತ್ತುವಿನ ಸುಳಿವೇ ಸಿಗದೇ ಆತನ ಡೈರಿ ಸಿಗುವುದು.ಮುಂದೆ ಡೈರಿಯಲ್ಲಿ ಮೂಡಿಬರುವ ಮುತ್ತುವಿನ ಕಥೆ ಒಂದು ಶುದ್ಧ ಪ್ರೇಮ. ಅವ್ವನ ಮೇಲಿನ ಅಚಲ ಪ್ರೀತಿ, ಬಾಲ್ಯ ಹುಟ್ಟೂರ ಮೇಲಿನ ಅಭಿಮಾನ, ಪುಸ್ತಕ, ಸ್ನೇಹ, ಬೀದಿಬದಿಯ ನಾಯಿಗಳ ಕಾಳಜಿ, ಮೇಷ್ಟ್ರು ಸೇರಿದಂತೆ ಹಲವರ ನಡುವಿನ ಅಸಕ್ತ ಬದುಕ ಬವಣೆಗಳ ಸೊಗಸಾದ ಭಾವಗೀತೆಯಂತೆ ರೂಪುಗೊಂಡಿದೆ ನಿಮ್ಮ ಕಥನ ಹಂದರ.
ಆತ್ಮೀಯ ಸಹೋದರಿ ಕನ್ನಡ ಕವಯಿತ್ರಿ ಡಾ. ಸುಮಂಗಲಾ ಅತ್ತಿಗೇರಿ ಅವರಲ್ಲಿ ಅಮೂರ್ತ ರೂಪದಲ್ಲಿದ್ದ ಭಾವನೆಗಳ ಹೂವುಗಳು ಮೊಗ್ಗಿನಾವಸ್ಥೆಯಿಂದ ವಾಚಿಸುವ ಕಣ್ಮನಗಳಿಗೆ ಹೂವಾಗಿ ಅರಳಿ ಮಕರಂದ ಸೂಸಿದೆ. ಹೆಣ್ಣಿನ ಗುಣಕ್ಕೆ ತಕ್ಕಂತೆ ರಚನೆಗಳು ಹೊರಬಂದಿವೆ. ಮಹಿಳೆಯ ನೋವು, ನಲಿವು, ಆಸೆ. ಆಕಾಂಕ್ಷೆ, ನಿರಾಸೆ, ದುಗುಡ, ದುಮ್ಮಾನಗಳ ಅನುಭವದ ಪಾಕದಿಂದ ಹೆತ್ತವರ ನೆನಪಿನವರೆಗೆ ತಮ್ಮ ಚಿತ್ರದಲ್ಲಿನ ಚಿತ್ರಗಳು ಹದ ತಪ್ಪದೆ ಪದ ರೂಪದಿಂದ ಎದೆಯ ಕದ ತೆರೆದು ಓದುಗರ ಮಂಗಳ ಮನಸ್ಸಿಗೆ ಸುಮಂಗಲವೆನಿಸಿದೆ. ಅವಳೀಗ ನೆನಪು ಮಾತ್ರ ಕವನ ಸಂಕಲನ ಇದವರ ಎರಡನೆಯ ಕೂಸು. ಇವರ ರಚನೆಯ ಸಾಲುಗಳೆಲ್ಲ ಕರುಳ ಬಳ್ಳಿಯಂತೆ ಬಳ್ಳಿ ಬಳ್ಳಿಯಾಗಿ ಹಸುರಿನಂತೆ ಅವರದೆಯಾದ ಅನುಭವದ ಉಸಿರಿನಿಂದ ಇದೀಗ ಎಲ್ಲರ ಮನೆ ಮತ್ತು ಮನಕ್ಕೆ ಹಬ್ಬಿ ಕಂಗೊಳಿಸಿದೆ. ಅಧ್ಯಯನದ ಜೊತೆ ಜೊತೆಗೆ ಅನುಭವದ ಮೂಸೆಯಿಂದ ಇವರ ಕವನ ಕುಲಾವಿ ತೊಟ್ಟಿದೆ. ಓದುಗರ ಮನ ಮುಟ್ಟುವಲ್ಲಿ ಕವಯಿತ್ರಿಯ ಕೈ ರಚನೆ ಕೈ ಹಿಡಿದಿದೆ. ಮನ ಮುಟ್ಟಿದೆ. ಎದೆ ತಟ್ಟಿದೆ. ಇಲ್ಲಿಯ ಸಾಲುಗಳೆಲ್ಲ ಕವಯಿತ್ರಿಯ ಅಂತರಾಳದ ದೀಪಗಳು, ಆ ದೀಪದಲ್ಲಿ ವಿನಯ, ವಿಸ್ಮಯ, ವೈಖರ್ಯ ರೂಪಗಳೇ ನುಡಿ ಬೆಳಕಾಗಿ ಬೆಳಗಿವೆ. ಒಟ್ಟಿನಲ್ಲಿ ಕನ್ನಡ ನಾಡಿನ ನರನಾಡಿಗೆ ಇಂತವರ ಸಾಹಿತ್ಯ ವ್ಯವಸಾಯವೇ ಜೀವನಾಡಿ, ಕವಯಿತ್ರಿಯ ಕೈರಚನೆಯ ಕೈಂಕರ್ಯ್ಯ ನಮ್ಮ ನಾಡಿನಲ್ಲಿ ಸತ್ಯಂ. ಶಿವಂ, ಸುಂದರಂ ನಂತೆ ದಿನನಿತ್ಯ ಕಂಗೊಳಿಸುತ್ತಿರಲಿ.
#
Showing 541 to 570 of 5048 results