nil
ಅದು 1939ನೇ ಇಸವಿ. ದೆಹಲಿಯ ಬ್ರಿಟಿಷ್ ಅಧಿಕಾರಿಯ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಚಲಪತಿಯನ್ನು ಜರ್ಮನಿಯು ಆಕ್ರಮಿಸಿಕೊಂಡಿದ್ದ ಆಸ್ಟ್ರಿಯಾದ ಸಾಲ್ಬರ್ಗ್ ಸ್ವಶ (ಗೂಢಚಾರ)ನಾಗಿ ಕಳುಹಿಸುತ್ತಾನೆ ಆ ಬ್ರಿಟಿಷ್ ಅಧಿಕಾರಿ. ಜರ್ಮನ್ ಸೈನಿಕರ ಗುಟ್ಟುಗಳನ್ನು ದೇಶಪ್ರೇಮಿ ಆಸ್ಟ್ರಿಯನ್ನರಿಗೆ ರವಾನೆ ಮಾಡುತ್ತಿದ್ದ ಚಲಪತಿಯನ್ನು ಸೈನಿಕರು ಹಿಡಿಯಲು ಸನ್ನಾಹ ನಡೆಸುತ್ತಾರೆ. ಆಗ ಜೀವ ಉಳಿಸಿಕೊಳ್ಳಲು ಈ ಸ್ವಶನು ಮಾಡುವ ಸಾಹಸಗಳು... ಕುತೂಹಲಭರಿತ ಕಾದಂಬರಿ....
ಬದುಕಿನ ಸುಖ, ದುಃಖ, ಪ್ರೀತಿ, ನಗು, ಸಂಬಂಧ, ವಿಡಂಬನೆ, ಹಾಸ್ಯ, ಚೋದ್ಯಗಳ ಕೋಸುಂಬರಿಯಂತಿದೆ ಈ ವಿಶಿಷ್ಟ ಕೃತಿ.
ಚಲನಶೀಲತೆ ಈ ಕಾದಂಬರಿಯ ಮುಖ್ಯವಾದ ಪ್ರತಿಮೆ ಎಂದು ನನ್ನ ಭಾವನೆ. ಚಲನೆ ಎಡೆಬಿಡದೆ ನಿರ್ಮಲಾಳನ್ನು ಭಾವಲೋಕದಿಂದ ಭಾವನೆಗಳ ಲೋಕಕ್ಕೆ, ವಾಸ್ತವ ಲೋಕದಿಂದ ಯಥಾರ್ಥವಾದ ಆತ್ಮ ಶುದ್ಧಿಯ ಮತ್ತು ಮುಂದುವರಿದು ಆತ್ಮ ಬೋಧೆಯ ಪ್ರಪಂಚಕ್ಕೆ ತೆಗೆದುಕೊಂಡು ಹೋಗುತ್ತದೆ. ಹೀಗೆ ಎಲ್ಲೆಲ್ಲಿ ನೋಡಿದರೂ ಬದುಕಿನ ಚಲನಶೀಲತೆಯನ್ನು ಬರವಣಿಗೆಯ ಮೂಲಕ ಸೆರೆ ಹಿಡಿಯಲು ಕಿರಣ್ ಅವರು ಪ್ರಯತ್ನಿಸಿದ್ದಾರೆ. ಡಾ. ಜಿ.ಬಿ. ಹರೀಶ (ಮುನ್ನುಡಿಯಿಂದ)
Showing 721 to 750 of 780 results