nil
ಹಿರಿಯರಾದ ಕೊಡಸೆ ಸರ್. ನಾನು ಅದೆಷ್ಟೋ ಸಲ ನನ್ನಲ್ಲಿಯೇ ಅಂದುಕೊಂಡದ್ದಿದೆ. ಪ್ರತಿಭೆ ಮತ್ತು ಕಠಿಣ ಶ್ರಮ ಎರಡೂ ಒಟ್ಟಿಗೇ ಸೇರಿದರೆ ಏನಾಗಬಹುದು ಎಂಬುದಕ್ಕೆ ನೀವೊಂದು ತಾಜಾ ಉದಾಹರಣೆಯಾಗಿ ನಿಲ್ಲಬಲ್ಲರಿ!! ನೀವು ಪತ್ರಿಕಾ ಕ್ಷೇತ್ರದಲ್ಲಿ ನಿಮ್ಮ ಬರವಣಿಗೆಯಿಂದ, ಪ್ರಾಮಾಣಿಕ ಕೆಲಸದಿಂದ, ಕರ್ತೃತ್ವಶಕ್ತಿಯಿಂದ, ಜಾಣ್ಯ, ದಕ್ಷತೆಗಳಿಂದ, ಹುರುಪು, ಹುಮ್ಮಸ್ಸಿನಿಂದ, ನಿರಂತರ ಚಿಂತನಶೀಲತೆಯಿಂದ, ಕಳಕಳಿ-ಕಾಳಜಿಯಿಂದ. ಕರ್ತವ್ಯ ನಿಷ್ಠೆಯಿಂದ ಮಾಡಿರುವ ಸೇವೆ ಅನುಪಮವಾದುದು. ಪ್ರೊ. ಓಂಕಾರ ಕಾಕಡೆ
#
ಕನ್ನಡದ ಸಾಮಾನ್ಯ ಜನರಿಗೆ ಕನ್ನಡ ಭಾಷೆ- : ಕಲಿಯಲಿಚ್ಚಿಸುವವರಿಗೆ, ವಿಶೇಷವಾಗಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಪುಸ್ತಕ ರಚಿಸಲಾಗಿದೆ. ಅವರಲ್ಲಿ ಕನ್ನಡದ ಬಗ್ಗೆ ಆಸಕ್ತಿ ಹುಟ್ಟಿಸಿ, ಚಿಂತನೆಗೆ ತೊಡಗಿಸಿ ತನ್ಮೂಲಕ ಪದಗಳ : ಬಳಕೆ ಹೆಚ್ಚಿಸಿ ಕನ್ನಡವನ್ನು ಉಳಿಸಿ ಬೆಳೆಸುವ ಸದುದ್ದೇಶ ಈ ಪುಸ್ತಕದ್ದು,
ಅ.ನಾ. ಪ್ರಹ್ಲಾದರಾವ್
ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ, ಕ್ರೀಡೆ ಹೀಗೆ ಹತ್ತು ಹಲವಾರು ಕ್ಷೇತ್ರದ ವಿಷಯಗಳ ಬಗ್ಗೆ ಮತ್ತು ಈ ಕ್ಷೇತ್ರಗಳ ಸಾಧಕರ ವಿವರಗಳನ್ನು ಸುಳಿವುಗಳಲ್ಲಿ ಅಳವಡಿಸಲಾಗಿದೆ. ಈ ಸುಳಿವುಗಳನ್ನು ಓದಿ ಸೂಕ್ತ ಉತ್ತರ ಕಂಡುಹಿಡಿಯಬೇಕು. ಸಾಮಾನ್ಯ ಬಳಕೆಯ ಪದಗಳ ಜೊತೆಗೆ ಅಷ್ಟೇನೂ ಬಳಕೆಯಲ್ಲಿಲ್ಲದ ಗ್ರಾಂಥಿಕ ಪದಗಳು ಮತ್ತು ಕೆಲ ಪ್ರಾಂತೀಯ ಪದಗಳೂ ಸೇರಿಕೊಂಡಿವೆ.
ಶಾಲಿನಿಯದ್ದು ರಕ್ತಗತೆ ಪ್ರತಿಭೆ. ಅಪ್ಪನಂತೆ ಅಕ್ಷರಗಳ ಜತೆ, ವಾಕ್ಯಗಳ ಜತೆ ಪದಗಳ ಜತೆ ಸರಸವಾಡುವ ಚತುರೆ ಕೀ ಬೋರ್ಡ ಮೇಲೆ ಬೆರಳಾಡಿಸಲು ಹೊರಟರೆ ಒಂದು ಸಶಕ್ತ ಲೇಖನ ಸಿದ್ಧವಾದಂತೆಯೇ ಹಾಗೆಯೇ ಹೊಂಚು ಹಾಕಿ ಕಥೆ ಬರೆಯಲು ಹೊರಟರೆ ಜೀವನನ್ಯುಸ್ ವಿಷಯಗಳು ಕೂಡ ರೂಪ ಪಡೆಯುವ ಚಮತ್ಕಾರವನ್ನೊಮ್ಮೆ ನೀವು ನೋಡಬೇಕು. - ಗಣೇಶ್ ಕಾಸರಗೋಡು ಖ್ಯಾತ ಸಿನಿ ಪತ್ರಕರ್ತರು, ಲೇಖಕರು.
ಇದು ಪುರಾಣ ಗ್ರಂಥವಲ್ಲ, ಪ್ರಮಾಣ ಗ್ರಂಥ. ಪ್ರಪಂಚೀಕರಣದ ಪ್ರವಾಹದಲ್ಲಿ ಸಹಜ ಜೀವನದ ಮೌಲ್ಯಗಳೇ ಸಾಮೂಹಿಕವಾಗಿ ಆತಂಕಕ್ಕೆ ಒಳಗಾಗಿರುವ ಇಂದಿನ ಕಳವಳಕಾರಿ ಸನ್ನಿವೇಶದಲ್ಲಿ ಇಂತಹ ಚಿಂತನಶೀಲ ಗ್ರಂಥಗಳು ನಮಗೆ ಸಾಂತ್ವನ ನೀಡುತ್ತವೆ. ಈ ಗ್ರಂಥದ ಲೇಖಕರು ಇದನ್ನು ಬರೆಯುವ ಲೇಖನಿಯಲ್ಲಿ, ಕಾಗದದ ಹಾಳೆಯಲ್ಲಿ ಲಿಂ.ಪೂಜ್ಯಶ್ರೀಗಳನ್ನೇ ಕಂಡಿದ್ದಾರೆ. ತಾವು ಕಂಡ ಆ ಮಹಾದಾರ್ಶನಿಕ ಗುರುವಿನ ದರ್ಶನ ಓದುಗರಿಗೂ ದೊರೆಯುವಂತೆ ಮಾಡಿದ್ದಾರೆ.
ಜರಗನಹಳ್ಳಿ ಶಿವಶಂಕರ್
Showing 1921 to 1950 of 3771 results