nil
ವಿಜಯ್ ವೀರ್
ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ಬರೆದಿರುವ ‘ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್’ ಪುಸ್ತಕವಿದು. ಈ ಪುಸ್ತಕ ಓದುತ್ತಾ ಹೋದರೆ ಸದಾ ಕಾಡುವ ಕಲಾವಿದರ ಕಥಾನಕ ನಿಮ್ಮದಾಗುತ್ತದೆ.
ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ಬರೆದಿರುವ ‘ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್’ ಪುಸ್ತಕವಿದು. ಈ ಪುಸ್ತಕ ಓದುತ್ತಾ ಹೋದರೆ ಸದಾ ಕಾಡುವ ಕಲಾವಿದರ ಕಥಾನಕ ನಿಮ್ಮದಾಗುತ್ತದೆ. ಕನ್ನಡ ಚಿತ್ರರಂಗದ ಲೆಜೆಂಡ್ಗಳ ಕೊನೆಯ ದಿನಗಳ ಚಿತ್ರಣ ಇಲ್ಲಿದೆ. ನಿಮ್ಮ ಇಷ್ಟ ಕಲಾವಿದರ ಬಗ್ಗೆ ನೀವಿಲ್ಲಿ ಓದಿದ ಮೇಲೆ ನಮ್ಮ ಮನಸ್ಸು ಮೂಕವಾಗುತ್ತೆ. ಈ ಪುಸ್ತಕ ಭಾವಸ್ಪರ್ಶಿಯಾಗಿದೆ, ಹೃದಯಸ್ಪರ್ಶಿಯಾಗಿದೆ. ಕಲಾವಿದರ ಹೃದಯವಿದ್ರಾವಕ ಘಟನೆಗಳ ಚಿತ್ರಣ ನಮ್ಮ ಕರುಳು ಹಿಂಡಿ ಮನಕಲಕುತ್ತವೆ. ಒಂದು ಕಾಲದಲ್ಲಿ ತೆರೆಯ ಮೇಲೆ ಮಿಂಚಿದವರು ಇನ್ನೊಂದು ಕಾಲದಲ್ಲಿ ಹಲವು ಸಂಕಷ್ಟಗಳಿಂದ ನರಳುವ ಕಥಾನಕ ನಮ್ಮ ಮನ ಕರಗಿಸಿಬಿಡುತ್ತದೆ.
ಇತಿಹಾಸವನ್ನು ಯಥಾವತ್ತಾಗಿ ದಾಖಲಿಸುವುದು ಪ್ರಜ್ಞಾವಂತ ನಾಗರಿಕನ ಲಕ್ಷಣ. ಸಮಾಜೋಧಾರ್ಮಿಕ ಚಳುವಳಿಯೊಂದರ ರಾಜಕೀಯ ಮಾನ್ಯತೆಗಾಗಿ ಶತಶತಮಾನಗಳಿಂದ ನಡೆದ ಚಳುವಳಿಯ ಮುಂದುವರಿದ ಭಾಗವಾಗಿ ೨೦೧೭-೧೮ರ ಲಿಂಗಾಯತ ಚಳುವಳಿ ವಿಪ್ಲವವಾಗಿ ಮಾರ್ಪಟ್ಟು, ಮನುಕುಲದಲ್ಲಿ ವೈಚಾರಿಕತೆಯನ್ನು ಬಡಿದೆಬ್ಬಿಸಿ, ಯಶಸ್ಸು ಕಾಣುತ್ತಿರುವ ಹೋರಾಟದ ಏಳುಬೀಳುಗಳ ವಿವಿಧ ಮಜಲುಗಳನ್ನು ಓದುಗನ ಕಣ್ಣಿಗೆ ಕಟ್ಟಿದಂತೆ ಅಕ್ಷರಗಳ ಚಿತ್ರ ಚಿತ್ರಿಸುವ ಮಾಂತ್ರಿಕತೆಯ ಕಲೆ ಜಿ. ಬಿ. ಪಾಟೀಲರಿಗೆ ಸಿದ್ದಿಸಿದೆ. ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಅಲ್ಪಸಂಖ್ಯಾತ ಧರ್ಮ ಮಾನ್ಯತೆ ಪಡೆಯುವ ಹೊಸ್ತಿಲಲ್ಲಿರುವ ಈ ಜನಾಂದೋಲನದ ಇತಿಹಾಸ ದಾಖಲಿಸುವ ಈ ಕೃತಿಗೆ ಅಭಿನಂದನೆ ಸಲ್ಲಿಸುವುದು ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷನಾದ ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ಕರ್ನಾಟಕ ಸರ್ಕಾರವು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಿ, ಅದನ್ನು ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕೇಂದ್ರಕ್ಕೆ ರವಾನಿಸಿದೆ. ಸುಮಾರು ಆರು ವರ್ಷಗಳ ನಂತರ 'ಹಿಸ್ಟಾರಿಕಲ್ ಡಾಕ್ಯುಮೆಂಟರಿ' ರೂಪದಲ್ಲಿ ಈ ಗ್ರಂಥವನ್ನು ಪ್ರಕಟಿಸುತ್ತಿರುವುದು ಜಿ. ಬಿ. ಪಾಟೀಲರ ಸಾಧನೆಯ ಸಿಂಹಾವಲೋಕನದ ಬಗೆ ಹಾಗೂ ಮುಂದಿನ ಸಾಧನೆಯ ದಿಕ್ಕೂಚಿ. ಲೇಖನದ ಈ ಕೈಂಕರ್ಯ ಲಿಂಗಾಯತರಿಗೆ ಮಾತ್ರವಲ್ಲದೆ ಸರ್ವರಿಗೂ ಮಾರ್ಗದರ್ಶಿ ದೀವಿಗೆ. ಅವರನ್ನು ಬಲ್ಲ ನನಗೆ ಈ ಕಾರ್ಯ ಸಾಧನೆ ಸಂತೋಷವನ್ನುಂಟು ಮಾಡಿದೆ ಎನ್ನುತ್ತ ಶುಭಹಾರೈಸುವೆ. - ಬಸವರಾಜ ಹೊರಟ್ಟಿ ( ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು )
#
ಲೇಖಕಿ ಅಕ್ಷಥಾ ಪಾಂಡವಪುರ ಅವರ ಕತಾಸಂಕಲನ ಲೀಕ್ಔಟ್. ಈ ಸಂಕಲನದಲ್ಲಿ 11 ಕತೆಗಳಿವೆ. 2010 ರಿಂದ ಬರೆದಂತದ ಕಥೆಗಳು ಈ ಪುಸ್ತಕದಲ್ಲಿದ್ದು ಹೆಣ್ಣಿನ ಆಸೆ ಅಕಂಶೆ, ತಳಮಳ, ಬದುಕಿನ ಸಂಘರ್ಷ. ಸಂಬಂಧಗಳ ಏಣಿಗೆ ಎಷ್ಟು ಕಾಲಿಗಳು ಎಂಬ ಲೆಕ್ಕಾಚಾರದಲ್ಲಿರುವ ಈ ಕಥೆಗಳು ಕೆಲವು ವಾಸ್ತವಕ್ಕೆ ಹತ್ತಿರವಿದೆ ಎನ್ನಿಸಿದರೆ ಕೆಲವ ರಂಜನಿಯವಾಗಿವೆ. ಮುಖವಾಡಗಳ್ಳನ್ನು ಧರಿಸಿ ತುಂಬಾ ಸೀರಿಯಸ್ ಆಗಿ ಬದುಕು ನಡೆಸುವ, ಸದಾ ನಗುಮುಖವನ್ನು ಸಮಾಜಕ್ಕೆ ತೋರಬಯಸುವ ಎಲ್ಲರೂ ಕಾಣುವ ಕನಸುಗಳ ಸಂಖ್ಯೆಯಲ್ಲಿ fantasy ಯೇ ಹೆಚ್ಚು.... ಹಾಗೆ ಇಲ್ಲಿಯೂ ಸಹಾ ಜೀವನ & ಕನಸುಗಳ ಸಂಘರ್ಷದಲ್ಲಿ ಪಾತ್ರಗಳು ಹೇಗೆ ಕಾಣುತ್ತವೆ ಎಂಬುದನ್ನು ಹೆಚ್ಚು ಕಥೆಗಳಲ್ಲಿ ಕಾಣಬಹುದು..
ಬೇರೆಯವರಿಗೆ ಕತೆ ಹೇಳುವ, ಬೇರೆಯವರ ಕತೆ ಕೇಳಿಸಿಕೊಳ್ಳುವ ಕಲೆ ಸಿದ್ಧಿಸಿಕೊಂಡಿರುವ ಏಕೈಕ ಪ್ರಾಣಿ ಮನುಷ್ಯ. ಕತೆಗಳಿರುವವರೆಗೂ ಮನುಷ್ಯನಿರುತ್ತಾನೆ. ಈಗ ಸ್ಮಾರ್ಟ್ ಯುಗ. ಎಲ್ಲರ ಕೈಯಲ್ಲೊಂದು ಸ್ಮಾರ್ಟ್ ಫೋನು. ಎಲ್ಲರ ಎದೆಯೊಳಗೆ ಕತೆಗಳಿರುವ ಕಾಲ. ಇಂತಹ ಕತೆಗಳನ್ನು ಸಶಕ್ತವಾಗಿ ದಾಟಿಸುವ ಮಾಧ್ಯಮ ದೃಶ್ಯಮಾಧ್ಯಮ. ಬನ್ನಿ ನಿಮ್ಮೊಳಗಿನ ಕತೆಗಳನ್ನು ದೃಶ್ಯಮಾಧ್ಯಮಕ್ಕೆ ತರೋಣ, ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ!
ಬೇರೆಯವರಿಗೆ ಕತೆ ಹೇಳುವ,ಬೇರೆಯವರ ಕತೆ ಕೇಳಿಸಿಕೊಳ್ಳುವ ಕಲೆ ಸಿದ್ಧಿದಿಸಿಕೊಂಡಿರುವ ಏಕೈಕ ಪ್ರಾಣಿ ಮನುಷ್ಯ.
ಸೋತವರಿಗೆ, ಗೆಲುವನ್ನು ಎದುರು ನೋಡುವವರಿಗೆ, ಸಮಾನ ಮನಸ್ಕರಿಗೆ ಉಡುಗೊರೆಯಾಗಿ ನೀಡಲು ಈ ಕೃತಿ ಬೆಸ್ಟ್ ಆಯ್ಕೆ. ನಮ್ಮ ಬದುಕು ಹುಟ್ಟಿನಿಂದಲೇ ಶುರುವಾಗಬಹುದು. ಆದರೆ ಸೋಲು-ಗೆಲುವುಗಳು ನಿರ್ಧಾರವಾಗುವುದು ನಮ್ಮ ಆಲೋಚನೆಗಳ ಮೇಲೆಯೇ.. ಆಲೋಚನೆಗಳು ಇಲ್ಲದೆ ಬದುಕಿಲ್ಲ! ಬದುಕಿನ 360 ಕೋನದಲ್ಲೂ ಯೋಚಿಸುವಂತಹ ಶಕ್ತಿಯನ್ನು ನಾವು ಗಳಿಸದಿದ್ದರೆ ಖಂಡಿತ ಸ್ಪರ್ಧೆಯ ಸಾಲಿನಿಂದ ತುಂಬಾ ಹಿಂದೆ ಉಳಿದುಬಿಡುತ್ತೇವೆ. ಇವತ್ತು ಯಾರಿಗೂ ಹಿಂದೆ ಉಳಿಯಲು ಇಷ್ಟವಿಲ್ಲವಾದ್ದರಿಂದ ಆಲೋಚನಾಕ್ರಮದ ಬಗ್ಗೆ ಈ ಕೃತಿ ನಿಮಗೆ, ನಿಮ್ಮ ಗೊಂದಲಗಳಿಗೆ ಉತ್ತರಿಸುತ್ತಲೇ ನಿಮ್ಮ ಯಶಸ್ಸಿನ ದಾರಿಗೆ ನೆರವಾಗಬಲ್ಲದು..
ರವೀಂದ್ರ ವೆಂಶಿಯವರ ಲೈಫ್ ಸಖತಾಗಿತ್ತು ಕಣ್ರೀ ಪುಸ್ತಕದಲ್ಲಿನ ಬರಹಗಳನ್ನು ಓದಿದ ಮೇಲೆ ನನ್ನ ಬಾಲ್ಯದ ಹಲವಾರು ಘಟನೆಗಳು ನೆನಪಾದದ್ದು ಸತ್ಯ. ಓದುವಾಗ ನನಗೆ ಇದು ಕಥೆಯಾ..? ಆತ್ಮಚರಿತ್ರೆಯಾ..? ಸುಲಲಿತ ಪ್ರಬಂಧವಾ..? ಎನ್ನುವ ಪ್ರಶ್ನೆ ಕಾಡುತ್ತಲೇ ಓದಿಸಿಕೊಂಡಿತು. ಓದಿಯಾದ ಮೇಲೆ ನನಗನ್ನಿಸಿದ್ದು ಇದು ಎಲ್ಲವೂ ಹೌದು ಎಂದು. ಭಾಗ-1ರಲ್ಲಿನ ಬರಹಗಳಲ್ಲಿ ತಿಳಿ ಹಾಸ್ಯದ ಮೂಲಕ ಘಟನೆಗಳನ್ನು ಕಟ್ಟಿಕೊಡುತ್ತಾ ನಿಧಾನಕ್ಕೆ ನಮ್ಮನ್ನು ಬರಹದೊಳಕ್ಕೆ ಸೆಳೆದುಕೊಂಡು ಬಿಡುತ್ತಾರೆ ಲೇಖಕರು. ಇಸ್ತ್ರೀಪೆಟ್ಟಿಗೆಯ ಪ್ರಸಂಗ, ಹೇರ್ ಕಟ್ ಸುತ್ತಲಿನ ವೃತ್ತಾಂತಗಳು, ಸಿನಿಮಾಗಳನ್ನು ಟೆಂಟ್ ನಲ್ಲಿ ನೋಡುವ ಸೊಬಗು - ಇವುಗಳನ್ನು ಲಘುಹಾಸ್ಯಮಯವಾಗಿ ಬರೆಯುತ್ತಾ, ಕಲಿಸಿದ್ದು ಕಲಿತದ್ದು ಲೇಖನದ ಮೂಲಕ ಚಿಂತನೆಗೆ ದೂಡುತ್ತಾರೆ. ಭಾಗ-2 ರಲ್ಲಿ ಕತೆಗಳ ಸ್ವರೂಪದಲ್ಲಿ ಬದುಕನ್ನು ತೆರೆದಿಡುತ್ತಾರೆ. ಒಂದೊಂದು ಕತೆಯೂ ಬೇರೆ ಬೇರೆಯದೇ ಆದ ದ್ರವ್ಯ, ನಿರೂಪಣೆ ಮತ್ತು ಭಾಷೆಯನ್ನು ಹೊಂದಿರುವುದು ರವೀಂದ್ರ ವೆಂಶಿಯವರ ವಿಶೇಷವೆನಿಸುವ ವಸ್ತುಗ್ರಹಿಕೆ ಮತ್ತು ಕತೆಯ ಕಟ್ಟುವಿಕೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಸರಳವಾದ, ಅರ್ಥಪೂರ್ಣವಾದ, ನಮ್ಮದೇ ಬದುಕಿನ ಸನ್ನಿವೇಶಗಳು ಎನ್ನುವ ಆತ್ಮೀಯತೆ ಬೆಳೆಸುವ ಬರವಣಿಗೆಯ ಈ ಹೊತ್ತಗೆ ಪ್ರತಿಯೊಬ್ಬರೂ ಓದಲೇಬೇಕಾದದ್ದಾಗಿದೆ.
'ಲೋಕ ರಾವಣ' ಲಂಕಾಧಿಪತಿಯಾದ ದಶಕಂಠ ರಾವಣನನ್ನು ಕುರಿತ ಕಾದಂಬರಿ. ಲೋಕ ಲೋಕಗಳನ್ನು ನಡುಗಿಸಿದ. ಪರಸ್ತ್ರೀ ಅಪಹಾರಕನಾದ ದುಷ್ಟನೆಂದು ರಾಮಾಯಣದಲ್ಲಿ ಚಿತ್ರಣಗೊಂಡಿರುವ ಪಾತ್ರ ಅದು. ಹುಟ್ಟಿನಿಂದ ಮಹಾ ತಪಸ್ವಿಯಾದ ವಿಶ್ರವಸ್ಸಿನ ಮಗ, ವೇದಾದಿಗಳನ್ನು ಓದಿದವನು. ಬ್ರಹ್ಮ, ಪರಮೇಶ್ವರರ ಅನುಗ್ರಹಕ್ಕೆ ಪಾತ್ರನಾದವನು. ಶಿವಭಕ್ತ. ಇಷ್ಟಿದ್ದೂ ರಾವಣನಂತಹ ಮೇಧಾವಿ ಯಾಕೆ ದುಷ್ಟನಾದ? ಲೋಕಪೀಡಕನಾದ ಅದಕ್ಕೆ ಕಾರಣವಾದುದು ಅವನ ಹುಟ್ಟಿ? ಸಂಸ್ಕಾರವೆ? ಅವನಿಗಾದ ಕಹಿ ಅನುಭವಗಳೆ? ಅಥವಾ ಅವನ ವ್ಯಕ್ತಿತ್ವವೇ ಆ ರೀತಿಯೆ? ಅವನ ಅಂತರಂಗವನ್ನು ಪ್ರವೇಶಿಸದೆ ಉತ್ತರ ದೊರೆಯಲಾರದು. ರಾವಣನ ಅಂತರಂಗವನ್ನು ಬಗೆಯುವ ಅಂತಹ ಒಂದು ಪ್ರಯತ್ನವೇ ಈ ಕಾದಂಬರಿ.. 'ಲೋಕ ರಾವಣ'
Showing 2731 to 2760 of 3552 results