ಲಕ್ಷ್ಮೀಶ್ ಹೆಗಡೆ ಸೋಂದಾ, ಇತಿಹಾಸಕಾರರಾಗಿ, ವಾಗ್ನಿಗಳಾಗಿ ನಾಡಿನ ಚಿರಪರಿಚಿತ ಹೆಸರು. ಕಳೆದ 15 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನ ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿರುತ್ತಾರೆ. ಇದುವರೆಗೂ 14 ಕೃತಿಗಳು, 400ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಸಂಶೋಧನೆಗಾಗಿ 2013ರಲ್ಲಿ ಬಸವರಾಜ ಕಟ್ಟಿಮನಿ ರಾಜ್ಯ ಪ್ರಶಸ್ತಿ ಮತ್ತು 2016ರಲ್ಲಿ ಕದಂಬ ಸೇವಾರತ್ನ ರಾಜ್ಯ ಪ್ರಶಸ್ತಿ, 2022ರಲ್ಲಿ ರವಿದಾತಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ಇವರ ಸಂಚಾಲಕತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ನಾಡಿನಲ್ಲಿ ಪ್ರಸಿದ್ದಿ ಪಡೆದಿದೆ. ಯುವ ಜನತೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ಆಸಕ್ತಿ ಮೂಡಿಸಲು ಕಳೆದ 6 ವರ್ಷಗಳಿಂದ ಇವರು ನಡೆಸಿಕೊಂಡು ಬರುತ್ತಿರುವ ಉತ್ತರ ಕನ್ನಡ ಜಿಲ್ಲಾ ಚರಿತ್ರಾ ಅಭಿಯಾನ' ಆದರ್ಶ ಸಮಾಜದ ಸ್ಥಾಪನೆಗೊಂದು ಮಾದರಿ ಯೋಜನೆಯಾಗಿದೆ. * ಅನುರಾಯ ಶಾಲ್ಮಲೆ " ಎಂಬ ಈ ಐತಿಹಾಸಿಕ ಕಾದಂಬರಿಯ ಮೂಲವಸ್ತು ಸದಾಶಿವರಾಯ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋದೆ ಎಂಬ ಪ್ರದೇಶವನ್ನು ಕ್ರಿ.ಶ 1678ರಿಂದ 1718ರ ವರೆಗೆ ಆಳ್ವಿಕೆ ಮಾಡಿದ ಪರಾಕ್ರಮಿ, ಸಾಹಿತಿ, ಸಂಗೀತ ತಜ್ಞ ಅರಸ. ಈತನ ಶ್ರೇಷ್ಠ ಸಾಧನೆಯೆಂದರೆ ಕ್ರಿಶ 1680ರಲ್ಲೇ ಭಾರತದಲ್ಲಿ ಮೊದಲ ಬಾರಿಗೆ ಬ್ರಿಟಿಷರನ್ನು ಸೋಲಿಸಿದ ಮಹೋನ್ನತ ಶ್ರೇಯ, ಈತನನ್ನ ಕಥಾವಸ್ತುವನ್ನಾಗಿಸಿಕೊಂಡು ಕೃತಿಕಾರರು ಈ ಕಾದಂಬರಿಯನ್ನು ರಚಿಸಿದ್ದಾರೆ. ఈ ఐతియౌనిక ఊరు ಕಾದಂಬರಿಯನ್ನು ಓದುಗರು ಸ್ವಾಗತಿಸುವರೆಂದು ನಂಬಿದ್ದೇನೆ. -ಪ್ರಕಾಶಕ
ಕಥೆಗಳು ನಮ್ಮ ಅಂಗಳದಲ್ಲಿಯೇ ಇರುತ್ತದೆ. ಅದನ್ನು ಕೇಳುವ ಕಿವಿಗಳು, ನೋಡುವ ಕಣ್ಣುಗಳು ಕಥೆಗಾರನದಾಗಿರಬೇಕು. ಅಂದರೆ ಕಥೆಗಳು ಜನರ ನಡುವೆಯೇ ಹುಟ್ಟಬೇಕು. ಆಗಲೇ ಅದು ಓದುಗರ ಮನಸ್ಸು ತಟ್ಟಲು ಸಾಧ್ಯ. ಕಲ್ಪನೆಯ, ಪೆಂಟಾಸಿಯ ಕಥೆಗಳು ರಂಜಿಸುತ್ತವೆ. ಆದರೆ ಮನಸ್ಸಿನ ಆಳಕ್ಕೆ ತಿಳಿಯುವುದು ಕಷ್ಟ. ರಂಜನೆ ಒಂದು ಕಥಾಂಶವಾದರೆ ಹೆಚ್ಚಿನದು ಬದುಕಿನ ವಿಸ್ತಾರವನ್ನು ಹೆಚ್ಚಿಸುವ ಕಲೆಗಾರಿಕೆ ಆಗಿರಬೇಕು. ಸರಳವಾಗಿ, ಸಂದೇಶವನ್ನ ಅದು ಹೊತ್ತಿರಬೇಕು. ಹಾಗೆಯೇ ಹಲವು ಅರ್ಥಗಳನ್ನು ಹೊಮ್ಮಿಸುವಂತಾಗಬೇಕು. ಒಟ್ಟಿನಲ್ಲಿ ರಂಜನೆಯ ಜೊತೆಗೆ ಓದುಗನ ಬೆಳವಣಿಗೆಗೆ ಕಥೆಗಳು ಸಹಕಾರಿಯಾಗಿರಬೇಕು. ಶ್ರೀಮತಿ ಸತ್ಯವತಿ ಮೂರ್ತಿಯವರ ಕಥೆಗಳು ಈ ಅಂಶಗಳನ್ನು ಸಮೃದ್ಧವಾಗಿ ಒಳಗೊಂಡಿದೆ. ಓದಿಸಿಕೊಂಡು ಹೋಗುವ ಬರಹ, ಕಲಾತ್ಮಕವಾಗಿ ಕೂಡಿಕೊಂಡ ಪದ, ವಾಕ್ಯ ಪುಂಜಗಳು. ಆಸಕ್ತಿ ಹುಚ್ಛಿಸುವ ಘಟನಾವಳಿಗಳು, ಚಿಂತಿಸುವ ಅಂಶಗಳು... ಹೀಗೆ ಸುಪುಷ್ಟವಾದ ಕಥೆಗಳು ಅವರದು. ಡಾ.ಸತ್ಯವತಿ ಮೂರ್ತಿ
ಪವನ್ ಮೌರ್ಯ ಚಕ್ರವರ್ತಿ ಅವರು ಬರೆದಿರುವ ಆನೆಗಳನ್ನು ಕುರಿತ ' ಆರಂಕುಶವಿಟ್ಟೊಡಂ... ' ಎಂಬ 16 ಲೇಖನಗಳ ಪುಸ್ತಕದಲ್ಲಿ ಆನೆಗಳಿಗೆ ಸಂಬಂಧಿಸಿದಂತೆ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗಿನ ವ್ಯಾಪ್ತಿಯನ್ನು ಇಟ್ಟುಕೊಂಡು ಅಧ್ಯಯನ ನಡೆಸಿದ್ದಾರೆ. ಇದುವರೆವಿಗೆ ಆನೆಗಳ ಬಗ್ಗೆ ಬಂದಿರುವ ಅನೇಕ ಕೃತಿಗಳನ್ನು ಓದಿ ಕ್ಷೇತ್ರ ಕಾರ್ಯ ಮಾಡಿ ಈ ಕೃತಿಯನ್ನು ರಚಿಸಿದ್ದಾರೆ. ಇದರೊಂದಿಗೆ ಸಂದರ್ಶನಗಳ ಮೂಲಕ ಪಡೆದ ಮಾಹಿತಿಯನ್ನು ಬಳಸಿ ಹೆಚ್ಚಿನ ವಿವರಗಳನ್ನು ಆನೆಗಳ ಬಗ್ಗೆ ಹಾಗೂ ಆನೆ ಪಳಗಿಸುವವರ ಬಗ್ಗೆ ಬರೆದಿದ್ದಾರೆ. ಚಕ್ರವರ್ತಿ ಅವರು ಈ ಕೃತಿ ರಚನೆಗಾಗಿ ಸಂಸ್ಕೃತ , ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಆನೆಗಳಿಗೆ ಸಂಬಂಧಿಸಿದಂತೆ ಬರೆದಿರು ಬಂದಿರುವ ಹಲವಾರು ಕೃತಿಗಳನ್ನು ಪರಾಮರ್ಶಿಸಿ ಅತ್ಯಅಮೂಲ್ಯ ಸಂಗತಿಗಳನ್ನು ಹೆಕ್ಕಿತೆಗೆದು ಬಳಸಿಕೊಂಡಿದ್ದಾರೆ. ಇವುಗಳಲ್ಲಿ ದೇಶಿಯವಾಗಿ ಆನೆಗಳನ್ನು ಸಾಕುತ್ತಿದ್ದ ವಿಧಾನ ಅವುಗಳಿಗೆ ಕಾಯಿಲೆಯಾದಾಗ ನೀಡುತ್ತಿದ್ದ ಚಿಕಿತ್ಸಾ ಪದ್ಧತಿಯನ್ನು ವಿವರವಾಗಿ ತಿಳಿಸಿದ್ದಾರೆ. ನಾರಾಯಣ ದೀಕ್ಷಿತ್ ಎಂಬುವವರು ಬರೆದಿರುವ ಗಜಗ್ರಹಣ ಕೃತಿ , ಮಲಯಾಳಂ ಭಾಷೆ ಗಜರಕ್ಷಾತಂತ್ರ , ಪಾಲಕಾಪ್ಯಮುನಿ ವಿರಚಿತ ಗಜಶಾಸ್ತ್ರ ಮುಂತಾದ ಕೃತಿಗಳಿಂದ ಪಾರಂಪರಿಕವಾಗಿ ಆನೆಗಳು ವಾಸಿಸುವ ಸ್ಥಳ , ಬದುಕುವ ರೀತಿ , ಆಮೆಗಳನ್ನು ಹಿಡಿಯುವ ಮತ್ತು ಪಳಗಿಸುವ ವಿಧಾನ ಮೊದಲಾದ ವಿವರಗಳನ್ನು ಈ ಕೃತಿಗಳಲ್ಲಿ ತಿಳಿಸಿದ್ದು , ಈ ಎಲ್ಲಾ ಮಾಹಿತಿಗಳನ್ನು ತಮ್ಮ ಕೃತಿಯಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇದಲ್ಲದೆ ಶಾಸನಗಳಲ್ಲಿ ಆನೆಗಳ ಬಗ್ಗೆ ಬಂದಿರುವ ವರ್ಣನೆ , ಯುದ್ಧಗಳಲ್ಲಿ ಅವುಗಳ ವರ್ತನೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ..... ಆನೆಗಳನ್ನು ಕುರಿತಂತೆ ಕೆಲವು ಡಾಕ್ಯುಮೆಂಟರಿಗಳು ಬಂದಿದ್ದು , ಅವುಗಳ ನಿಗೂಢ ಬದುಕನ್ನು ಜಗತ್ತಿಗೆ ತೆರೆದಿಟ್ಟಿವೆ . ಲೇಖಕರು ಬಹು ಸೂಕ್ಷ್ಮಜೀವಿ ಹಾಗೂ ಸ್ನೇಹಜೀವಿಯಾದ ಆನೆಗಳ ಬಗ್ಗೆ ಅನೇಕ ವಿವರಗಳನ್ನು ಒಂದಡೆ ತಂದು ಈ ಪುಸ್ತಕ ರೂಪದಲ್ಲಿ ನೀಡಿದ್ದಾರೆ. ಇದರೊಂದಿಗೆ ಆನೆಗಳೊಂದಿಗೆ ತಮ್ಮ ಜೀವನವನ್ನು ಕಳೆಯುತ್ತಿರುವ ಬಂಡಿಪುರ , ಮದುಮಲೈ , ನೀಲಗಿರಿಬೆಟ್ಟ ಪ್ರದೇಶ , ಬಿಳಿಗಿರಿರಂಗನ ಬೆಟ್ಟ , ಮಲೈ ಮಹದೇಶ್ವರ ಬೆಟ್ಟ ಮೊದಲಾದ ಕಡೆಗಳಲ್ಲಿ ವಾಸಿಸುವ ಜೇನು ಕುರುಬ , ಬೆಟ್ಟ ಕುರುಬ ಮೊದಲಾದ ಕಾಡಿನ ಮಕ್ಕಳು ಹಾಗೂ ಅವರ ಮತ್ತು ಆನೆಗಳ ನಡುವಿನ ಸಂಬಂಧಗಳ ಬಗ್ಗೆ ಅವರೊಡನೆ ಸಂದರ್ಶನ ಮಾಡಿ ವಿಷಯವನ್ನು ಸಂಗ್ರಹಿಸಿದ್ದಾರೆ. ಹೀಗೆ ಅಪರೂಪದ ವಿಷಯಗಳನ್ನು ತೆಗೆದುಕೊಂಡು ನಾನಾ ಆಯಾಮಗಳಲ್ಲಿ ಆನೆಗಳ ಬಗ್ಗೆ ವಿವರ ನೀಡಿ ಪುಸ್ತಕ ರಚಿಸಿರುವ ಪವನ್ ಮೌರ್ಯ ಚಕ್ರವರ್ತಿ ಅವರು ಅಭಿನಂದನಾರ್ಹರು.
ದಿ. ನೇರಂಬಳ್ಳಿ ಪ್ರಭಾಕರ ಆಚಾರ್ಯರು ತಮ್ಮ ಕಾವ್ಯಪ್ರೇಮ ಮತ್ತು ಸಾಹಿತ್ಯಾಸಕ್ತಿಗೆ ಹೆಸರಾಗಿದ್ದವರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಕಾವ್ಯ ಬೋಧನೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಛಾಪು ಮೂಡಿಸಿದವರು. ಅನೇಕ ಭಾರತೀಯ ಇಂಗ್ಲಿಷ್ ಕವಿಗಳಿಗೆ ವಿಮರ್ಶೆಯ ಒರೆಗಲ್ಲಾಗಿದ್ದವರು. 'ದ ಸುರಗಿ ಟೀ', 'ಮನು ಇನ್ ಕಿಮ್ಮಿಂದ', 'ಧ್ವನಿ ಆ್ಯಂಡ್ ಎಪಿಫನಿ' ಮತ್ತು 'ಕವಿತೆಯ ಓದು' ಕೃತಿಗಳ ಕರ್ತೃ. ಅವರ 'ಕವಿತೆಯ ಓದು' ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ. 'ಒಲವಿನ ದೈವ' ಎಂಬ ಈ ಕೃತಿ ಅವರ ಮರಣಾನಂತರ ಪ್ರಕಟಗೊಳ್ಳುತ್ತಿದೆ. ಇದು ಅವರ 'ಗಾಡ್ ಆಫ್ ಲವ್' ಕೃತಿಯ ಕನ್ನಡ ಅನುವಾದ. ಕೃಷ್ಣನ ಕತೆ ನಮಗಾರಿಗೂ ಹೊಸದಲ್ಲವಾದರೂ ಲೋಕದೊಡನೆ ಕೃಷ್ಣನ ಸಂಬಂಧ, ಎಲ್ಲ ಕಾಲಕ್ಕೂ ಅಗತ್ಯವಾದ ಪ್ರೇಮಭಾವದ ಪ್ರಸಾರಕನಾಗಿರುವ ಅವತಾರಪುರುಷನ ಅಗತ್ಯ, ಸರಿದಾರಿ ತೋರುತ್ತ ದಾರಿತಪ್ಪಿದವರನ್ನು ಶಿಕ್ಷಿಸುವ ಧೈರ್ಯ ಇವನ್ನೆಲ್ಲ ಒಳಗೊಳ್ಳುವಂತೆ ಆಚಾರ್ಯರು ಬರೆದಿರುವುದನ್ನು ಓದಿ ಸ್ವಯಂಸ್ಪೂರ್ತಿಯಿಂದ ಶಿಕ್ಷಣ ತಜ್ಞ ಪ್ರೊ. ಮಹಾಬಲೇಶ್ವರ ರಾಯರು ಕನ್ನಡಕ್ಕೆ ಸರಳ ಸುಂದರವಾಗಿ ಅನುವಾದಿಸಿದ್ದಾರೆ. ಈ ರಚನೆಗೆ ಜನಮನ್ನಣೆ ಸಿಗಲಿ. ನಾಡೋಜ ಕೆ. ಪಿ. ರಾವ್
ಕರ್ನಾಟಕ ಅಗ್ನಿವಂಶ ಕ್ಷತ್ರಿಯರು ಎಂಬ ಕೃತಿಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಂಜಗನಹಳ್ಳಿಯ ಶ್ರೀ ಮದುಸೂಧನ್ ಕೆ ಆರ್ ಅವರು ಬರೆದಿದ್ದು ಅಗ್ನಿವಂಶ ಕ್ಷತ್ರಿಯರ ಬಗ್ಗೆ ನಾನಾ ಮೂಲಗಳಿಂದ ವಿವರಗಳನ್ನು ಸಂಗ್ರಹಿಸಿದ್ದಾರೆ. ಭಾರತದಾದ್ಯಂತ ಅಗ್ನಿಯಿಂದ ನಿಷ್ಪನ್ನರಾದವರೆಂದು ಹೇಳಿಕೊಳ್ಳುವ ಅನೇಕ ಗುಂಪುಗಳಿವೆ. ಭಾರತದಲ್ಲಿ ಅಳ್ವಿಕೆ ನಡೆಸಿದ ಹಿಂದೂ ರಾಜರನ್ನು ಸಾಮಾನ್ಯವಾಗಿ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಚಂದ್ರವಂಶ' ಇನ್ನೊಂದು ಸೂರ್ಯವಂಶ', ಅಗ್ನಿವಂಶವು ಇವೆರಡರಲ್ಲಿಯೂ ಸೇರಿದೆ. ಚಂದ್ರವಂಶದವರು ಪ್ರಮುಖವಾಗಿ ಯಾದವರು ಯಾದವ ಮೂಲದಿಂದ ಬಂದವರು. ಕರ್ನಾಟಕ, ಮಹಾರಾಷ್ಟ್ರ, ಗುಜರಾತನ್ನು ಆಳಿದ ಬಹುತೇಕ ಅರಸು ಮನೆತನಗಳಿಗೆ ಮೂಲ ಪುರುಷ ಯದುರಾಯನಾಗಿದ್ದಾನೆ. ಯಾದವರ ಮೂಲ ಪುರುಷನೂ ಯದುವೇ. ಹೊಯ್ಸಳರು, ದೇವಗಿರಿ ಯಾದವರು, ಕಾಕತೀಯ ಅರಸರು, ವಿಜಯನಗರದ ಅರಸರು, ಕೊನೆಗೆ ಮೈಸೂರು ಅರಸರು ತಮ್ಮ ಮೂಲವನ್ನು ಯಧು ವಿನಿಂದಲೇ ಪ್ರಾರಂಭಿಸಿದ್ದಾರೆ. ಸೂರ್ಯವಂಶ ಅಥವಾ ಇನಾಕುಲ ಅಥವಾ ರವಿಕುಲದ ಮೂಲವನ್ನು ಹೇಳುವ ವಂಶಗಳಿಗೆ ಮೂಲ ಸೂರ್ಯ. ಇವನ ವಂಶದಲ್ಲಿ ಬಂದವನು ದಿಲೀಪ, ಕರ್ನಾಟಕದ ಕದಂಬರು, ಆಂಧ್ರದ ಇಕ್ಷಾಕುಗಳು. ತೆಲುಗು ಜೋಳ ಮನೆತನ ಮೊದಲಾದವರು ತಮ್ಮನ್ನು ಸೂರ್ಯ ಅಥವಾ ರವಿಕುಲಕ್ಕೆ ಸೇರಿದವರೆಂದು ಹೇಳಿಕೊಂಡಿದ್ದಾರೆ. ಮಧುಸೂಧನ್ ಅವರು ಇನ್ನೂ ಅನೇಕ ರಾಜವಂಶಗಳನ್ನು ಈ ಪಟ್ಟಿಯಲ್ಲಿ ಸೇರಿಸಿದ್ದಾರೆ. ಕರ್ನಾಟಕ ಜಾತಿಗಳಲ್ಲಿ ಒಂದು ಸಣ್ಣ ಗುಂಪಾದ ಅಗ್ನಿವಂಶ ಕ್ಷತ್ರಿಯರ ಬಗ್ಗೆ ಮಾಹಿತಿ ಕಲೆಹಾಕಿ ಆ ಜಾತಿಯ ಆಚರಣೆಗಳ ಬಗ್ಗೆ ಹೊರ ಪ್ರಪಂಚಕ್ಕೆ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸುತ್ತಿರುವ ಮಧುಸೂಧನ್ ಅವರ ಪ್ರಯತ್ನಕ್ಕೆ ಯಶಸ್ಸು ದೊರೆಯಲೆಂದು ಹಾರೈಸುತ್ತೇನೆ.
ಸದಾ ನಿಸರ್ಗದ ನಿಯಂತ್ರಣಕ್ಕೆ ಒಳಪಟ್ಟ ಕಾಡೊಂದರ ಅಭಿವೃದ್ಧಿಯ ಹಿಂದಿನ ರೂವಾರಿಗಳ ಶ್ರಮ, ಪ್ರತಿಭೆಗಳು ಸಾಮಾನ್ಯವಾಗಿ ಕಾಡಿನ ಗರ್ಭದಲ್ಲೇ ಕಣ್ಮರೆಯಾಗುವುದುಂಟು. ಇಡೀ ಜೀವನವನ್ನು ಅರಣ್ಯಗಳ ಏಳಿಗೆಗಾಗಿಯೇ ಮೀಸಲಿರಿಸಿ ಎಲೆಮರೆಯಲ್ಲೇ ಕಾಯಾಗಿ ನೇಪಥ್ಯಕ್ಕೆ ಸರಿದ ಮಹನೀಯರೆಷ್ಟೋ ಮಂದಿ ನಮ್ಮಲ್ಲಿದ್ದಾರೆ. ಇಂಥ ಕೆಲವೇ ವ್ಯಕ್ತಿತ್ವಗಳಲ್ಲಿ ಅರಣ್ಯಾಧಿಕಾರಿ ಮಾರಪ್ಪನವರೂ ಒಬ್ಬರು. ಅರಣ್ಯದ ಕಿರು ಉತ್ಪನ್ನವೆಂದೇ ಪರಿಗಣಿಸಲಾದ ಹುಣಸೆ ಮೂಲಕವೇ ಬರಡು ಜಿಲ್ಲೆಯೊಂದರ ಜನಸಮುದಾಯದ ಆರ್ಥಿಕ ಉನ್ನತಿ ಸಾಧಿಸುವ ಕನಸು ಕಂಡ ಮಾರಪ್ಪನವರ ದೂರದೃಷ್ಟಿ, ಆಶಯಗಳನ್ನು ಈ ಪುಸ್ತಕದಲ್ಲಿ ಪರಿಚಯಿಸಲು ಯತ್ನಿಸಲಾಗಿದೆ. ಅಧಿಕಾರದ ನಡುವೆಯೂ ಜನಸಮುದಾಯದ ಬಗ್ಗೆ ಸಹಜಪ್ರೀತಿ, ಅರಣ್ಯ, ಪರಿಸರಗಳ ಬಗ್ಗೆ ಸಾಮಾಜಿಕ ಎಚ್ಚರ ಎರಡನ್ನು ಹೊಂದಿದ್ದ ಮಾರಪ್ಪನವರಂಥ ವ್ಯಕ್ತಿಯೊಬ್ಬರನ್ನು ಇಂದಿನ ಪೀಳಿಗೆಯವರಿಗೆ ಪರಿಚಯಿಸುವುದೇ ಒಂದು ಸಾಮಾಜಿಕ ಜವಾಬ್ದಾರಿ. ಈ ಕಾರ್ಯವನ್ನು ಈ ಕೃತಿಯಲ್ಲಿ ಎಚ್.ಎ. ಪುರುಷೋತ್ತಮರಾವ್ ಪ್ರೀತಿಯಿಂದ ನಿರ್ವಹಿಸಿದ್ದಾರೆ. ವೃತ್ತಿಯಿಂದ ಅರಣ್ಯ ಇಲಾಖೆಯ ಉದ್ಯೋಗಿಯಾಗಿ ನಿವೃತ್ತರಾಗಿರುವ ಎಚ್.ಎ. ಪುರುಷೋತ್ತಮರಾವ್ ಪ್ರವೃತ್ತಿಯಿಂದ ಲೇಖಕರು. ಸಾಹಿತ್ಯಾಭಿರುಚಿಯುಳ್ಳ ಇವರು ನಮ್ಮ ನಿತ್ಯಬದುಕಿಗೆ ಸಂಬಂಧಿಸಿದಂತೆ ಹಲವಾರು ವಿಜ್ಞಾನ ಬರಹಗಳನ್ನು ಬರೆದಿದ್ದಾರೆ. 'ಕಿವುಡನಮಾಡಯ್ಯ ತಂದೆ', 'ಭೂರಮೆಗೆ ಸೈಥೋಸ್ಕೋಪ್', 'ಗಾಳಿ ಬೇರುಗಳು', 'ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು' ಇನ್ನೂ ಮುಂತಾದ ಕೃತಿಗಳನ್ನು ಈಗಾಗಲೆ ಪ್ರಕಟಿಸಿದ್ದಾರೆ. ನಾಡು ಮರೆತ ಕಾಡು ಪ್ರತಿಭೆ ಮಾರಪ್ಪನವರ ಜೀವನ, ಸಾಧನೆ ಕುರಿತಂತೆ ಇಂಥದ್ದೊಂದು ವಿಶಿಷ್ಟ ಕೃತಿಯನ್ನು ರಚಿಸಿರುವ ಪುರುಷೋತ್ತಮರಾವ್ ಅಭಿನಂದನಾರ್ಹರು. -ಪ್ರಕಾಶಕ
ಮಲೆನಾಡಿನ ಶ್ರೀಮಂತ ಜಮಿನ್ದಾರಿ ಕುಟುಂಬ ಶತಮಾನಗಳ ಕಾಲ ಪಾಳೆಗಾರರಾಗಿ ಸ್ವಂತ ಸೈನ್ಯವನ್ನು ಹೊಂದಿ ಸಾವಿರಾರು ಎಕರೆ ಭೂ ಮಾಲಿಕರಾಗಿ ಆಳು ಕಾಳು ಒಕ್ಕಲು ಹತ್ತಾರು ಗ್ರಾಮದ ಪಟೇಲ್ ಜವಬ್ದಾರಿ ಘರ್ವದಿಂದ ಗತ್ತಿನಿಂದ ಎಂತವರಿಗು ಅವರ ಆಡಳಿತ ಮತ್ತು ಶ್ರೀಮಂತಿಕೆ ಬೆರುಗು ತರುವಂತಿತ್ತು. ಇಲ್ಲಿ ಬರುವ ಪಟೇಲರು ಒಮ್ಮೆ ಹೈದರಾಲಿ ಆತನ ಮಗ ಟಿಪ್ಪು ವಿರುದ್ಧ ಬ್ರಿಟೀಷರ ಸಹಾಯ ಪಡೆದು ಸಮರ ಸಾರಿದವರು. ಒಮ್ಮೊಮ್ಮೆ ಗೆಲುವು ಕಂಡವರು. ಹೈದರ್ ಮತ್ತು ಟಿಪ್ಪು ಸಂತತಿ ಅಳಿದ ನಂತರ ಬ್ರಿಟೀಷರ ಕಾನೂನು ಮತ್ತು ಮತಾಂತರದ ವಿರುದ್ಧ ಸಮರ ಸಾರಿದವರು. ಹೀಗೆ ಹಲವಾರು ಘಟನೆಗಳ ಚಿತ್ರಣವನ್ನು ಈ ಕಾದಂಬರಿಯಲ್ಲಿ ಸೆರೆ ಹಿಡಿಯಲಾಗಿದೆ. ಒಮ್ಮೊಮ್ಮೆ ಕೆಲವು ಕಡೆ ಉತ್ತೇಕ್ಷೆಯಂತೆ ಕಂಡರು ಕೆಲವು ಕಡೆ ಗೊಂದಲವಾಗಿಯೂ ಕಂಡು ಬರಬಹುದು. ಅದೆಲ್ಲದಕ್ಕು ಕೂನೆಯಲ್ಲಿ ಉತ್ತರ ದೊರೆತಂತೆ ಕಾಣುತ್ತದೆ. ನಾನು ಹೇಳಬೇಕಾದ ಕೆಲವು ವಿಚಾರಗಳನ್ನು ಕಥಾ ನಾಯಕರ ಬಾಯಿಯಿಂದ ಹೇಳಿಸುವ ಪ್ರಯತ್ನ ಮಾಡಿದ್ದೇನೆ ಎನ್ನುವುದು ಸತ್ಯ. ಈ ಕೃತಿ ಓದಿ ತಾವು ಪ್ರಾಮಾಣಿಕ ಅಭಿಪ್ರಾಯವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತೀರೆಂದು ನಂಬಿದ್ದೇನೆ.
ಮೋಹನದಾಸ ಕರಮಚಂದ್ ಗಾಂಧಿಯವರನ್ನು ಕುರಿತು ಹೊಸ ತಲೆಮಾರು ಪ್ರೀತಿ ದ್ವೇಷದ ಭಾವನೆಯನ್ನು ಬೆಳೆಸಿಕೊಂಡಿದೆ. ಹಳೆಯ ಕಾಲದ ಆರಾಧನೆ ಹಿಂದೆ ಸರಿದು ವಸ್ತು ನಿಷ್ಠವಾಗಿ, ನಿರ್ದಾಕ್ಷಿಣ್ಯವಾಗಿ, ಕೆಲವೊಮ್ಮೆ ತೀರ ಕಟುವಾಗಿ ಗಾಂಧಿ ಜೀವನ ಮತ್ತು ದರ್ಶನವನ್ನು ವಿಮರ್ಶಿಸುವ ಪರಿಪಾಠ ಬೆಳೆದಿದೆ. ಅಂತೆಯೇ ಮುಸಲ್ಮಾನರ ಪರ, ಹಿಂದೂ ವಿರೋಧಿ ಎಂಬ ನೆಲೆಯಲ್ಲಿ ಗಾಂಧಿಯವರ ಬಗ್ಗೆ ಕಡುದ್ವೇಷವನ್ನು ಬೆಳೆಸುವ ಮತ್ತು ಹಂತಕ ಗೋಡೆಯನ್ನು ಆರಾಧಿಸುವ ಪರಂಪರೆಗೆ ಚಾಲನೆ ನೀಡಲಾಗಿದೆ. ಡಾ. ಮಹಾಬಲೇಶ್ವರ ರಾವ್ ಈ ಎರಡೂ ಚಿಂತನಧಾರೆಗಳನ್ನು ಮತ್ತು ಗಾಂಧಿ ಪ್ರತಿಪಾದಿಸಿದ ಸತ್ಯಾಗ್ರಹ, ಅಹಿಂಸೆ, ಸ್ವದೇಶಿ, ಸ್ವರಾಜ್ಯ, ಚರಕ ಮೊದಲಾದ ಪರಿಕಲ್ಪನೆಗಳನ್ನು ಪರಾಮರ್ಶಿಸುತ್ತಾರೆ. ಗಾಂಧಿ ಕೊಲೆಯ ಆರಂಭಿಕ ವಿಫಲಯತ್ನಗಳು ಮತ್ತು ಹತ್ಯೆಯ ಹಿಂದಿನ ಕಾರಣಗಳ ಮೇಲೆ ಕ್ಷಕಿರಣ ಬೀರುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಸಂಘರ್ಷದ ಸಂವಾದದ ಸಂಬಂಧವನ್ನು ವಿವರಗಳ ಮೂಲಕ ಕಟ್ಟಿಕೊಡುತ್ತಾರೆ. ಈ ಸಂಕಲನ ಗಾಂಧಿಚಿಂತನ ಸಂಕಥನಗಳ ಮಾಲೆಗೆ ಡಾ. ಮಹಾಬಲೇಶ್ವರ ರಾವ್ ನೀಡಿರುವ ಸಮದರ್ಶಿತ್ವದ ಕೊಡುಗೆ.
ಭಾರತ ಕಂಡ ಅದ್ಭುತ ನಾಯಕ, ಪಿತಾಮಹ ಹಾಗೂ ಬಹುಮುಖ ಪ್ರತಿಭೆ, ಬಹುಮುಖ ಚಿಂತಕ, ಶಾಂತಿಯುತ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರು ತಮ್ಮ ಸ್ವಂತ ಅನುಭವದಿಂದ ಕೈ, ತಲೆ ಮತ್ತು ಹೃದಯಗಳಿಗೆ ಆದ್ಯತೆಯನ್ನು ನೀಡಿ ಶಿಕ್ಷಣದಲ್ಲಿ ಇವುಗಳ ಬೆಳವಣಿಗೆಗೆ ಆದ್ಯತೆ ನೀಡಿದಾಗ, ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಅಲ್ಲದೆ ಮಾತೃಭಾಷಾ ಶಿಕ್ಷಣ, ಆಧ್ಯಾತ್ಮಿಕ ಶಿಕ್ಷಣ, ಪರಿಸರ ಶಿಕ್ಷಣ. ವಾರ್ಧಾಶಿಕ್ಷಣ ಹಾಗೂ ರಾಷ್ಟ್ರೀಯಶಿಕ್ಷಣದ ರೂಪುರೇಷೆಗಳ ಬಗೆಗೆ ವಿಭಿನ್ನ ನೆಲೆಗಳಲ್ಲಿ ಚಿಂತಿಸಿದ ಮಹಾತ್ಮ .. ಗಾಂಧೀಜಿಯವರ ಸಮಗ್ರ ಶೈಕ್ಷಣಿಕ ಚಿಂತನೆಗಳ್ಳುಳ್ಳ ಈ ಕೃತಿಯನ್ನು ಸಹೃದನು ಓದುಗರು ಓದಿ ಲೇಖಕರ ಮತ್ತು ಸಂಪಾದಕರ ಕೈಬಲಪಡಿಸಬೇಕಾಗಿ ಮನವಿಮಾಡಿಕೊಳ್ಳುತ್ತೇನೆ. ಡಾ. ವೆಂಕೋಬರಾವ್ ಎಂ. ಹೊಸಕೋಟೆ ಎಂ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯ ರಾಜಾಜನಗರ, ಬೆಂಗಳೂರು.
ಮಕ್ಕಳಿಗೆ ಇಷ್ಟವಾಗುವಂತಹ ಕುತೂಹಲದಾಯಕವಾದ ನೀತಿ ಕಥೆಗಳ ಸಂಗ್ರಹವೇ ಈ ಚಿಣ್ಣರ ಚಿತ್ತಾರ. ಪುಟ್ಟ ಮಕ್ಕಳಿಗೆ ಕಥೆಗಳೆಂದರೆ ಇಷ್ಟ. ಈ ಕೃತಿಯು ಅಂತಹ ಪುಟ್ಟ ಮಕ್ಕಳಿಗೆಂದೇ ರಚಿಸಿರುವ ಪುಟ್ಟ ಪುಟ್ಟ ಕಥೆಗಳ ಸಂಗ್ರಹ. ಈ ಕಥೆಗಳು ಚಿಕ್ಕ ಮಕ್ಕಳಿಗೆ ಖುಷಿಪಡಿಸುವುದರೊಂದಿಗೆ ಅದರಿಂದ ತಿಳಿಯಬೇಕಾದ ನೀತಿಯನ್ನೂ ಸಾರುತ್ತದೆ.
ಆತ್ಮೀಯರೆ, ನಾನು ತನಾಶಿ. ಜ್ಞಾನೇಶ್ವರನು ಪರಿಷ್ಕರಿಸಿದ 125 ಕಂದಪದ್ಯಗಳ ಚೂಡಾರತ್ನ ಶತಕವನ್ನು ನಿಮ್ಮ ಮುಂದೆ ತಂದಿದ್ದೇನೆ. ನಿತ್ಯವೂ ನೆನೆಯಬೇಕಾದ ನೀತಿಶತಕವಿದು.ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರಬೇಕಾದ ಭಾವನೆಗಳ ಗೊಂಚಲು ಇಲ್ಲಿದೆ. ಸತ್ವದ ಝೇಂಕಾರವಿದೆ. ಸತ್ಯದ ಓಂಕಾರವಿದೆ. ನೀತಿಯ ಸಾಕಾರವಿದೆ. ಬದುಕಿನ ವೈವಿಧ್ಯಗಳ ಆಕಾರವಿದೆ. ಕಣ್ಣಿಗೊತ್ತಿಕೊಂಡು ಓದುವ, ಎದೆಯಲಿಟ್ಟು ಆಸ್ವಾದಿಸುವ ಸಾರಸತ್ವಗಳ ಹೂರಣವಿದೆ. ಸಹೃದಯ ಬಂಧುಗಳೇ ನೀವು ಸವಿದು ನಿಮ್ಮ ಅಮೃತವಾಣಿಗಳಿಂದ ಜಗವನ್ನೂ ತಣಿಸಿರಿ. ನಿಮ್ಮನ್ನೇ ನೀವು ಕಾಣುವ ಕನ್ನಡಿಯ ತೆರದಿ ಇದನ್ನೂ ಕಾಣಿರಿ. ಆಸ್ವಾದಿಸಿ ಹಾರೈಸಿರಿ. ನಿಮ್ಮವ ತನಾಶಿ
"ಬಾಸ್, ಆ ಮುಗ್ಧ ಹುಡುಗಿ ಇಂಪನಾ ಇದ್ದಾಳಲ್ಲಾ ನೋಡೋದಿಕ್ಕೂ ಚೆಲುವೆ. ನಮ್ಮ ಈ ಯೋಜನೆಗೆ ಅವಳೇ ಸರಿಯಾದ ಆಯ್ಕೆ" “ಸರಿ, ಹಾಗಾದ್ರೆ ಇವತ್ತು ಸಂಜೆ ಅವಳನ್ನು ಭೇಟಿಯಾಗು" ಅವನು ಒಪ್ಪಿಯಿಗೆಯಿತ್ತ ಇಂಪನಾ ಕೆಲಸಕ್ಕೆ ಹೊರಡುವ ಆತುರದಲ್ಲಿ ಬೆಳಿಗ್ಗೆ ಒಬ್ಬಳೇ ನಿರ್ಜನ ರಸ್ತೆಯಲ್ಲಿ ಬರುತ್ತಿರುವಾಗ ಗಕ್ಕನೆ ಕಾರೊಂದು ಬಂದು ಅವಳ ಹತ್ತಿರವೇ ನಿಂತಿತು. "ಮೇಡಂ, ಬನ್ನಿ ನಿಮಗೆ ಇನ್ನು ಬಸ್ಸು ಸಿಗೊಲ್ಲ. ನಾನೇ ನಿಮ್ಮನ್ನು ಡ್ರಾಪ್ ಮಾಡ್ತೀನಿ" ಪರಿಚಿತ ಧ್ವನಿ ಕೇಳಿದಂತಾಯಿತು. ಅವಳು ಹಿಂದೆ ಮುಂದೆ ಆಲೋಚಿಸದೆ ತೆರೆದ ಕಾರಿನ ಬಾಗಿಲೊಳಗೆ ತೂರಿಕೊಂಡಳು. ಬಾಗಿಲು ಕಾರು ರೊಯ್ಯನೆ ಮುಂದಕ್ಕೋಡಿತು... ಅವನು ಪಕ್ಕದಲ್ಲಿ ಕುಳಿತವಳತ್ತ ವಿಚಿತ್ರ ನೋಟ ಹರಿಸಿದ ಮುಂದೆ...? ನೀವೇ ಓದಿ ನೋಡಿ... 'ತೂಗುದೀಪ' ವಿಭಿನ್ನ ಕಥಾಹಂದರದ ಕುತೂಹಲಭರಿತ ಪತ್ತೇದಾರಿ ಕಿರು ಕಾದಂಬರಿ.
ತೆರೆದ ಮನಸ್ಸಿನ ಪುಟಗಳು 25 ಕಥೆಗಳುಳ್ಳ ಕಥಾ ಸಂಕಲನ ಇದರಲ್ಲಿನ ಕಥೆಗಳಲ್ಲಿ ಕೆಲವು ಕಾಲ್ಪನಿಕವಾದರೆ, ಮತ್ತೆ ಕೆಲವು ನೈಜ ಘಟನೆಗಳನ್ನು ಆಧರಿಸಿ ಬರೆದಂತವು. ಹೆಚ್ಚಿನ ಕಥೆಗಳು ಮಹಿಳಾ ಪ್ರಧಾನ ಕಥೆಗಳು. ವರದಕ್ಷಿಣೆ, ಗಂಡು ಮಗುವಿನ ಮೋಹ, ನಶಿಸಿ ಹೋಗುತ್ತಿರುವ ಸಂಬಂಧಗಳ ಮೌಲ್ಯ, ಹಣದ ವ್ಯಾಮೋಹ ಮೊದಲಾದ ಸಾಮಾಜಿಕ ಸಮಸ್ಯೆಗಳ ಕುರಿತಾಗಿರುವ ಕಥೆಗಳಲ್ಲಿ ನೀತಿ ಪಾಠವಿದೆ. ಅಮ್ಮ. ಬಲಿದಾನ, ಮನೆಯ ಅದೃಶ್ಯ ಕಂಬಗಳು ನಮ್ಮಲ್ಲೇ ಎಲ್ಲೋ ನಡೆದಿರಬಹುದಾದ ಕಥೆಗಳು. ಸುಂದರಗೊಂದಲ, ಮ್ಯಾಜಿಕ್ ಲ್ಯಾಂಪ್, ಅದಲು ಬದಲು ಕಥೆಗಳು ಗಂಭೀರ ಕಥೆಗಳ ನಡುವೆ ತಿಳಿ ಹಾಸ್ಯ ಹೊಂದಿದೆ. ಜೊತೆಗೆ ಹೆಚ್ಚಿನ ಕಥೆಗಳು ಯುವ ಜನತೆಗೆ ಪಾಠವಾಗಬಲ್ಲ ಕಥೆಗಳು.
ಮನುಷ್ಯ ತನ್ನನ್ನು ತಾನು ಕಂಡುಕೊಳ್ಳಬೇಕು. ಬೇರೆ ಗ್ರಹಗಳಿಗೆ ಹೋಗುವುದಕ್ಕಿಂತ, ತನ್ನೊಳಗೆ ತಾನು ತೂರಿ ಹೋಗುವ ಪ್ರಯತ್ನ ಮಾಡಬೇಕು. ಪರಮಾತ್ಮನನ್ನು ನೋಡುವ ಹಂಬಲಕ್ಕಿಂತ, ತನ್ನ ಅತ್ಯವನ್ನೊಮ್ಮೆ ಭೇಟಿ ಮಾಡುವ ಹುಮ್ಮಸ್ಸಿರಬೇಕು. ಅಗಾಧ ಪಾಂಡಿತ್ಯವಿದ್ದೂ, ಏನೂ ಗೊತ್ತಿರದಂತೆ ಮೂಕನಾಗಿರಬೇಕು. ಜಾತ್ರೆಯ ಜನಜಂಗುಳಿ. ದೇವಾಲಯದ ಘಂಟಾಘೋಷ, ಸಿಡಿಲು ಗುಡುಗಿನ ಆರ್ಭಟದ ಮಧ್ಯೆಯೂ ತನ್ನ ಹೃದಯದ ಢಕ್-ಡಕ್ ಎಂಬ ಸಣ್ಣ ಮಿಡಿತ ತನ್ನ ಕಿವಿಗೆ ಕೇಳಿಸುವಂತಿರಬೇಕು, ಹೌದು! ನಾವೆಲ್ಲ ಆಗಾಗ ಒಮ್ಮೆ ಈ ಸ್ಥಿತಿಗೆ ಜಾರುತ್ತಿರಬೇಕು. ಮೂಕನಾಗಿರಬೇಕು. ಏಕಾಂಗಿಯಾಗಿರಬೇಕು. ಮೌನಿಯಾಗಿರಬೇಕು. ಮೇಲಾಗಿ ತಾನಾರು? ಎಂದು ತನ್ನನ್ನು ತಾನು ಅನ್ವೇಷಿಸಿಕೊಳ್ಳಬೇಕು. ತನ್ನನ್ನು ತಾನು ಅನ್ವೇಷಿಸಿಕೊಳ್ಳಲಕ್ಕಾದರೂ ಬಲವಂತವಾಗಿಯಾದರೂ ನಮ್ಮ ಮನಸ್ಸನ್ನು ಮೌನಕ್ಕೆ ತಳ್ಳಬೇಕು. ದೇಹ ಎಚ್ಚರವಾಗಿದ್ದಲೇ. ಪ್ರಜ್ಞೆಯನ್ನು ನಿದ್ರಾವಸ್ಥೆಗೆ ದೂಡಬೇಕು. ಮೈ ಮನಗಳನ್ನು ಹಗುರವಾಗಿ, ನೀಲ ನಭದಲ್ಲಿ ಸ್ವಚ್ಛಂದದಲ್ಲಿ ಹಾರಾಡುವ ಹಕ್ಕಿಗಳಂತೆ ಹಾರಿಬಿಡಬೇಕು. ಆತ್ಮವನ್ನು ಒಂಟಿತನದಿಂದ ಏಕಾಂತದೆಡೆಗೆ, ಮನಸ್ಸನ್ನು ಕಲ್ಮಶದಿಂದ ನಿರ್ಮಾನುಷ್ಯದೆಡೆಗೆ ಜಾರಿಸಿಬಿಡಬೇಕು. ಉತ್ತಟ ಆನಂದದ ತುತ್ತತುದಿಯನ್ನು ಮುಟ್ಟಿ, ಪ್ರಶಾಂತತೆಯ ಸಾಗರದ ಕಡಲ ತಡಿಯನ್ನು ಈಜಬೇಕು. ಈ ಮೂಲಕ ಪ್ರತಿಯೊಬ್ಬ ಮನುಜನೂ ತನ್ನನ್ನು ತಾನು ಸಾಕ್ಷಾತ್ಕರಿಸಿಕೊಳ್ಳಬೇಕು. ಅದೂ ಏಕಾಂತವಾಗಿ, ನಾನು-ಶೆಫಾಲಿ ಆ ಏಕಾಂತದಲ್ಲಿ ಈಗ ವಿಹರಿಸುತ್ತಿದ್ದೇವೆ. ಶೆಫಾಲಿ ತನ್ನ ಮುಂದಿನ ಜೀವನವನ್ನು ನೆನೆಯುತ್ತಾ... ನಾನು ನನ್ನ ಹಿಂದಿನ ಜೀವನವನ್ನು ಮರೆಯುತ್ತಾ...
ಅಪಾರ ಅಧ್ಯಯನ, ಅಧ್ಯಾಪನ, ಅನುಭವಗಳಿಂದ ಮೂಡಿಬಂದ ನೇರ ಹಾಗೂ ಸರಳ ನಿರೂಪಣೆ, ಅಗತ್ಯ ವಿವರಗಳು, ಅಲ್ಲಲ್ಲಿ ಶೋಭಿಸುವ ಗಾದೆ ಮಾತುಗಳು ಲೇಖನಗಳ ವಾಚ್ಯಾಸಕ್ತಿಯನ್ನು ಹೆಚ್ಚಿಸುತ್ತವೆ. ಬದುಕನ್ನು ಬಂದಹಾಗೆ ಸ್ವೀಕರಿಸುವ ಆಲೋಚನೆ, ಬರೆದಿದ್ದು ಕಮ್ಮಿ ಬರೆಯಬೇಕಾದ್ದು ಇನ್ನೂ ಇದೆ ಎಂಬ ಆಸೆ ಎಲ್ಲವೂ ಲೇಖಕಿಯ ಘನಾತ್ಮಕ ಅಂಶಗಳು. ಈಗಾಗಲೇ ಹಲವಾರು ಸಾಂದರ್ಭಿಕ ಲೇಖನಗಳು, ಕಥೆ, ಕವನ, ವಿಮರ್ಶೆ, ನಾಟಕ, ಅನುವಾದಗಳ ಮೂಲಕ ಹೆಸರಾಗಿರುವ ಡಾ.ಸತ್ಯವತಿ ಮೂರ್ತಿ ಅವರು ರಚಿಸಿರುವ 'ನಾನೂ ಮತ್ತು ನನ್ನವರ ಸ್ವೀಟಿ ಮತ್ತು ಇತರ ಪ್ರಬಂಧಗಳು ಸಂಕಲನವನ್ನು ಓದಿ ನನ್ನ ಅರಿವು,ಆಲೋಚನೆಗಳ ಮಿತಿಯಲ್ಲಿ ಒಂದಿಷ್ಟು ಅಭಿಪ್ರಾಯಗಳನ್ನು ಇಲ್ಲಿ ನೀಡಿದ್ದೇನೆ.ಈ ಮೂಲಕ ಅವರಿಗೆ ಶುಭ ಹಾರೈಸುತ್ತ,ಅವರಿಂದ ಇನ್ನಷ್ಟು ಮತ್ತಷ್ಟು ಸಾಹಿತ್ಯ ಕೈಂಕರ್ಯ ನಡೆಯಲೆಂದು ಆಶಿಸುತ್ತೇನೆ ಕೆ.ಎನ್.ಭಗವಾನ್
ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದ ವಿವಿಧ ಸಮಸ್ಯೆಗಳು ಹಾಗೂ ಒಲವುನಿಲುವುಗಳ ಬಗ್ಗೆ ಅನನ್ಯವಾದ ರೀತಿಯಲ್ಲಿ ಬರವಣಿಗೆ ಮತ್ತು ಸಾರ್ವಜನಿಕ ಸಂಕಥನಗಳಲ್ಲಿ ನಾಡಿನ ಹೆಸರಾಂತ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ, ಪಠ್ಯಪುಸ್ತಕಗಳ ರಚನೆ, ಶಿಕ್ಷಕರ ಶಿಕ್ಷಣ, ಮೌಲ್ಯ ಶಿಕ್ಷಣ, ಡಿಜಿಟಲ್ ಮಾಧ್ಯಮ ಇವೇ ಮೊದಲಾದ ಚರ್ಚಾರ್ಹ ವಿಚಾರಗಳಿಗೆ ಅಭಿಮುಖವಾಗಿ ಏನಾಗಿದೆ? ಏನಾಗಬೇಕಾಗಿದೆ ಎಂಬುದನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿ ಅತ್ಯಂತ ಖಚಿತವಾಗಿ ತಮ್ಮ ನಿಲುವುಗಳನ್ನು ಡಾ.ರಾವ್ ಇಲ್ಲಿ ಮಂಡಿಸಿದ್ದಾರೆ. ನಾವು ಅಷ್ಟಾಗಿ ಗಮನ ಕೊಡದ ಜಿಡ್ಡು ಕೃಷ್ಣಮೂರ್ತಿ, ಡಾ. ಅಂಬೇಡ್ಕರ್, ಡಾ. ಜೆಪಿ ನಾಯ್ಕ ಮುಂತಾದ ಚಿಂತಕರ ಶಿಕ್ಷಣ ದರ್ಶನಗಳ ಮೇಲೆ ವಿಶ್ಲೇಷವಾದ ಬೆಳಕು ಚೆಲ್ಲಿ ಸದ್ಯದ ಸಂದರ್ಭದಲ್ಲಿ ಅವರ ಮಹತ್ತ್ವವನ್ನು ಮನಗಾಣಿಸಿದ್ದಾರೆ. ಆಧುನಿಕೋತ್ತರ ಸಂದರ್ಭದಲ್ಲಿ ನಾಡಿನ ಶೈಕ್ಷಣಿಕಪ್ರಗತಿ ಹೇಗಾಗಬೇಕು, ಬೋಧನೆ ಕಲಿಕೆ ಹೇಗೆ ಉತ್ಕೃಷ್ಟಗೊಳ್ಳಬೇಕು ಮತ್ತು ಬಹಳ ಮುಖ್ಯವಾಗಿ ಶೈಕ್ಷಣಿಕ ಪ್ರಕ್ರಿಯೆಯ ಹೃದಯವೇ ಆಗಿರುವ ಶಿಕ್ಷಕರು ಹೇಗೆ ಬದಲಾಗಬೇಕು ಎಂಬುದನ್ನು ಡಾ. ರಾವ್ ಈ ಸಂಕಲನದ ಲೇಖನಗಳಲ್ಲಿ ಮಾರ್ಮಿಕವಾಗಿ ಪ್ರತಿಪಾದಿಸಿದ್ದಾರೆ. ಅಪಾರ ಅನುಭವ ಮತ್ತು ಅಧ್ಯಯನದ ಸಂಗಮವಾದ ಈ ಕೃತಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಅದರಲ್ಲೂ ಪ್ರಮುಖವಾಗಿ ಶಿಕ್ಷಕರ ಮತ್ತು ಶಿಕ್ಷಣದ ವಿದ್ಯಾರ್ಥಿಗಳ ಕಣ್ಣು ತೆರೆಸುವ ಬೆಳಕಿನ ಹಾದಿ.
ಡಾ. ಸಿ ಆರ್ ಚಂದ್ರಶೇಖರ್ ನಿವೃತ್ತ ಮನೋವೈದ್ಯ ಪ್ರಾಧ್ಯಾಪಕರು ನಿಮಾನ್ಸ್ ಬೆಂಗಳೂರು ಲೇಖಕರು 300+ ಕನ್ನಡ ಪುಸ್ತಕಗಳು 50+ ಇಂಗ್ಲಿಷ್ ಪುಸ್ತಕಗಳು ಸಮಾಧಾನ ಕೇಂದ್ರದಲ್ಲಿ ಉಚಿತ ಸಲಹೆ ಚಿಕಿತ್ಸೆ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ಆಪ್ತ ಸಮಾಲೋಚನೆ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ವಿಶ್ವ ಆರೋಗ್ಯ ಸೇವಾ ಸಂಸ್ಥೆಯ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ
ಕನ್ನಡದಲ್ಲಿ ಮಕ್ಕಳ ಕಾವ್ಯ ಬೆಲ್ಲದಚ್ಚಿನಂತೆ ಒಂದು ಚೌಕಟ್ಟಿಗೆ ಒಳಪಟ್ಟಿತ್ತು. ಯಾವ ಆಲೆಮನೆಯಲ್ಲಿ ತಯ್ಯಾರಾದರೂ, ಕಂಡರೂ ಒಂದೇ ತರಹ; ತಿಂದರೂ ಒಂದೇ ರುಚಿ. ಆಗ ಮಕ್ಕಳೂ ಅದನ್ನೇ ಇಷ್ಟಪಟ್ಟು ತಿನ್ನುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ; ಮಕ್ಕಳೂ ಬದಲಾಗಿದ್ದಾರೆ ಈಗಿನ ಕಾಲದ ಮಕ್ಕಳ ಪರಿಸರ, ದೃಷ್ಟಿ, ಆಶಯ, ಚಿಂತನೆ ಎಲ್ಲವೂ ನಮಗೆ ನಿಲುಕದ್ದು. ಇಂಥ ಕಾಲಘಟ್ಟದಲ್ಲಿ ಸಹೃದಯ ಮಿತ್ರರಾದ ಸುರೇಶ ಕಂಬಳಿಯವರು ಮಕ್ಕಳ ಕೈಗೆ 'ನೀಲಿಕೊಡೆ' ಎಂಬ ಕವನ ಸಂಕಲನ ನೀಡಿ ಸಂತುಷ್ಟಗೊಳಿಸಲು ಹೊರಟಿದ್ದಾರೆ. ಏನೋ ಹೊಸತನ್ನು ಕೊಡಬೇಕೆಂಬ ಮನಸ್ಸು ಮಾಡಿದ್ದಾರೆ. ಅವರ ಪ್ರಯತ್ನ ಯಶದ ಹಾದಿಯಲ್ಲಿದೆ. ಆರಂಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ. ಈಗ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿರುವ ಕಂಬಳಿಯವರಿಗೆ ಸದಾ ಮಕ್ಕಳ ಒಡನಾಟದ ಸೌಭಾಗ್ಯವಿದೆ. ಈಗಾಗಲೇ ಎರಡು ಮಕ್ಕಳ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಈ ಹೊಸ ಸಂಕಲನದಲ್ಲಿ ಅವರ ಕಾವ್ಯದ ವಸ್ತುಗಳು ಹಳೆಯದಾಗಿ ತೋರಿದರೂ ವಿಶಿಷ್ಟ ಶೈಲಿಯಿಂದ ಗಮನ ಸೆಳೆಯುತ್ತವೆ. ಚಂದ ಚಂದ ಮಾತನಾಡುವ 'ಮುದ್ದು ತಂಗಿ', ಮಕ್ಕಳಾಟಿಕೆ ಅಡ್ಡಿಪಡಿಸಿಯೂ ಖುಷಿ ಕೊಡುವ 'ಮಳೆ'ಯಂತಹ ಸೆಳೆಯುವ ಕವಿತೆಗಳೂ ಇಲ್ಲಿವೆ. ನಾಟಕ, ಚಿತ್ರಗೀತೆ, ಕಿರುಚಿತ್ರ ನಿರ್ದೇಶನ, ಮಕ್ಕಳ ಸಾಹಿತ್ಯ ಎಲ್ಲ ಕಡೆ ಕೈ ಹಾಕುತ್ತ ಮುಂದೆ ಸಾಗುತ್ತಿರುವ ಸುರೇಶ ಕಂಬಳಿಯವರು ಮಕ್ಕಳ ಸಾಹಿತ್ಯದತ್ತ ಹೆಚ್ಚು ಒಲವು ತೋರಲಿ. ಹಳೆಯ ಸರಕುಗಳ ಸುತ್ತವೇ ಗಿರಕಿ ಹೊಡೆಯುತ್ತ ಸೊರಗುತ್ತಿರುವ ಮಕ್ಕಳ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿ ಮಕ್ಕಳ ಕಣ್ಮಣಿ ಆಗಲಿ ಎಂದು ಆಶಿಸುವೆ.
"ನಾನು ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬಡವರ ಜತೆ ಬೆಳೆದೆ. ಥಂಡಿ ನೆಲದಲ್ಲಿ ಗೋಣಿ ತಾಟಿನ ಮೇಲೆ ಬಡವರು ಮಲಗುವ ಹಾಗೆ ನಾನೂ ಥಂಡಿ ನೆಲದಲ್ಲಿ ಮಲಗಿದೆ; ಅವರ ದುಃಖದಲ್ಲಿ ಭಾಗಿಯಾದೆ. ನನ್ನ ಸೋದರರ ಬಗೆಗಿನ ಮತ್ತು ಜಗದ ಬಗೆಗಿನ ನನ್ನ ಧೋರಣೆಗಳು ಎಂದಿಗೂ ಬದಲಾಗುವುದಿಲ್ಲ. ನಾನು ಹುಟ್ಟಿ ಬೆಳೆದ ವರ್ಗ ಅನುಭವಿಸಿದ ಅಮಾನವೀಯ ಕ್ರೌರ್ಯ ಮತ್ತು ಅನ್ಯಾಯವನ್ನು ತೊಡೆದುಹಾಕಲು ವಿಫಲನಾದಲ್ಲಿ ಗುಂಡಿಟ್ಟುಕೊಂಡು ಸಾಯುವೆ. ನಾನು ನನ್ನ ಸಮುದಾಯವನ್ನು ಯಾವತ್ತೂ ಬಿಟ್ಟುಕೊಟ್ಟಿಲ್ಲ. ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ. ಇದೇ ನೀವು ನನ್ನ ಬದುಕಿನಿಂದ ಕಲಿಯುವ ಪಾಠ. ನನ್ನ ಬದುಕು ನಿಮಗೆಲ್ಲರಿಗೂ ತೆರೆದ ಪುಸ್ತಕ." ಡಾ. ಬಿ. ಆರ್. ಅಂಬೇಡ್ಕರ್
ಯಾವುದೇ ಇತಿಹಾಸ ರಚಿಸುವಾಗ ಸಾಮಾನ್ಯವಾಗಿ ಪುರುಷ ಪ್ರಧಾನವಾದ ಇತಿಹಾಸಕ್ಕೇ ಒತ್ತು ನೀಡುತ್ತೇವೆ ರಾಜರು ಹಾಗೂ ಅವರ ಮಾಂಡಳಿಕರು ಹಾಕಿಸಿರುವ ಶಾಸನಗಳು, ಬರೆಸಿರುವ ಬರಹಗಳಲ್ಲಿ ಶ್ರೀ ಅಡಳಿತಗಾರರ ಬಗ್ಗೆ ಮಾಹಿತಿ ದೊರೆಯದಿರುವುದು. ಆಕರ ಸಾಮಗ್ರಿಯ ಕೊರತೆಯಾಗಿದೆ. ಡಾ. ಸಂದ್ಯಾ ಅವರು ಅಂತಹ ಕಾಲದ ಸ್ತ್ರೀಯರು ಹೇಗೆ ಬಾಳಿ-ಬದುಕಿದರೆಂಬ ಬಗ್ಗೆ ಪ್ರಾಚೀನ ಕರ್ನಾಟಕದ ಮಹಿಳಾಲೋಕ ಕೃತಿಯಲ್ಲಿ ತೋರಿಸಲು ಶ್ರಮಿಸಿದ್ದಾರೆ. ಇದರಲ್ಲಿಯೂ ಚೆನ್ನಾಗಿ ಆಡಳಿತ ನಡೆಸಿದ, ರಾಜಕೀಯದಲ್ಲಿದ್ದ ಶ್ರೀಯರ ಉಲ್ಲೇಖವೇ ಹೆಚ್ಚಾಗಿದೆ. ಮಕ್ಕಳಿಲ್ಲದೆ ರಾಜ ಸತ್ತಾಗ ರಾಜ್ಯದ ಜವಾಬ್ದಾಲ ಹೊತ್ತ ಮಹಿಳೆಯರು ಅಸ್ತಿತ್ವವನ್ನು ಉಳಿಸಲು ಪಟ್ಟ ಕಷ್ಟ-ನಷ್ಟಗಳನ್ನು, ಕರ್ನಾಟಕದಲ್ಲಿ ರಾಣಿಯರ ದತ್ತಕಗಳು ಅಧ್ಯಾಯದಲ್ಲಿ ವಿವರಿಸಿದ್ದಾರೆ. ಹಾಗೆಯೇ ಪೆಣ್ಣುಯ್ಯಲ್, ಸಂಗೀತ-ನೃತ್ಯಕಲೆಗಳಿಗೆ ಪ್ರಾಚೀನ ಅರಸಿಯರ ಕೊಡುಗೆ, ಮಹಿಳೆಯರ ಸಾಹಸ, ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಮೊದಲಾದ ಅಧ್ಯಾಯಗಳಲ್ಲಿ ಮಹಿಳೆಯರು ತಮ್ಮನ್ನು ಹೇಗೆ ತೊಡಗಿಸಿಕೊಂಡಿದ್ದರೆಂಬ ಬಗ್ಗೆ ವಿವರಿಸಿದ್ದಾರೆ. ಹೆಚ್ಚಿಗೆ ಶಾಸನಗಳನ್ನಾಧರಿಸಿ ಬರೆದಿರುವ ಈ ಲೇಖನಗಳ ಗುಚ್ಛ ಒಂದು ಅಧಿಕೃತ ಕೃತಿಯಾಗಿದೆ. ಇಲ್ಲಿ ಊಹಾ ಪೋಹಗಳಾಗಲೀ, ಕಲ್ಪಿತ ವಿಷಯಗಳಿಗಾಗಲೀ ಸ್ಥಳವಿಲ್ಲ. ಹೀಗಾಗಿ ಪ್ರಾಚೀನ ಕರ್ನಾಟಕದ ಮಹಿಳೆಯರ ಬಗ್ಗೆ ತಿಳಿದುಕೊಳ್ಳಲು ಇದೊಂದು ಅಧಿಕೃತ ಮಾಹಿತಿಯುಳ್ಳ ಗ್ರಂಥ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಇಂತಹ ಅಧಿಕೃತ ಮಾಹಿತಿಯುಳ್ಳ ಗ್ರಂಥ ರಚಿಸಿದ ಶ್ರೀಮತಿ ಸಂಧ್ಯಾ ಅವರು ಅಭಿನಂದನಾರ್ಹರು. -ದೇವರಕೊಂಡಾರೆಡ್ಡಿ
ಲಕ್ಷ್ಮೀಶ್ ಹೆಗಡೆ ಸೋಂದಾ, ಇತಿಹಾಸಕಾರರಾಗಿ, ವಾಗ್ರಿಗಳಾಗಿ ನಾಡಿನ ಚಿರಪರಿಚಿತ ಹೆಸರು. ಕಳೆದ 15 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನ ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿರುತ್ತಾರೆ. ಇದುವರೆಗೂ 13 ಕೃತಿಗಳು, 400 ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಸಂಶೋಧನೆಗಾಗಿ 2013 ರಲ್ಲಿ ಬಸವರಾಜ ಕಟ್ಟಿಮನಿ ರಾಜ್ಯ ಪ್ರಶಸ್ತಿ ಮತ್ತು 2016 ರಲ್ಲಿ ಕದಂಬ ಸೇವಾರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ಇವರ ಸಂಚಾಲಕತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ನಾಡಿನಲ್ಲಿ ಪ್ರಸಿದ್ದಿ ಪಡೆದಿದೆ. ಯುವ ಜನತೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ಆಸಕ್ತಿ ಮೂಡಿಸಲು ಕಳೆದ 6 ವರ್ಷಗಳಿಂದ ಇವರು ನಡೆಸಿಕೊಂಡು ಬರುತ್ತಿರುವ 'ಉತ್ತರ ಕನ್ನಡ ಜಿಲ್ಲಾ ಚರಿತ್ರಾ ಅಭಿಯಾನ' ಆದರ್ಶ ಸಮಾಜದ ಸ್ಥಾಪನೆಗೊಂದು ಮಾದರಿ ಯೋಜನೆಯಾಗಿದೆ. ಪ್ರಸ್ತುತ ಮಂಗಳೂರಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು 'ಬನವಾಸಿ ಮತ್ತು ಕದಂಬರ ಇತಿಹಾಸ" ಎಂಬ ಈ ಕೃತಿಯಲ್ಲಿ ಬನವಾಸಿ ಪ್ರದೇಶದ ಐತಿಹಾಸಿಕ ಹಿನ್ನೆಲೆ ಹಾಗೂ ಕನ್ನಡದ ಪ್ರಥಮ ಸಾಮ್ರಾಜ್ಯ ಸ್ಥಾಪಕರೆನಿಸಿದ ಕದಂಬರ ಕುರಿತು ಸಮಗ್ರ ಮಾಹಿತಿಯನ್ನು ವಸ್ತುನಿಷ್ಠವಾಗಿ ಉಲ್ಲೇಖಿಸಿರುತ್ತಾರೆ. ಈ ಕೃತಿಯಲ್ಲಿ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಕುರಿತಾಗಿದ್ದ ಪೂರ್ವಾಗ್ರಹಗಳು, ಗೊಂದಲಗಳನ್ನು ನಿವಾರಿಸಿ ಸ್ಪಷ್ಟತೆಯ ಆವರಣಕ್ಕೊಳಪಡಿಸಿದ್ದಾರೆ. ಅಂತೆಯೇ ಕದಂಬರ ರಾಜಕೀಯ ಇತಿಹಾಸ, ಬನವಾಸಿಯಲ್ಲಿ ನಡೆದ ಉತ್ಪನನಗಳು, ಕದಂಬರ ಶಾಸನಗಳ ಕುರಿತು ಈ ಕೃತಿಯಲ್ಲಿ ಮಾಹಿತಿಗಳಿವೆ. ಕನ್ನಡ ನಾಡನ್ನು ಪ್ರೀತಿಸುವ, ಆರಾಧಿಸುವ ಪ್ರತಿಯೊಬ್ಬರ ಮನೆ ಮತ್ತು ಮನಗಳಲ್ಲಿ ಇರಬೇಕಾದ ಕೃತಿ ಇದಾಗಿದೆ. ಪ್ರಕಾಶಕರು
ಜೆ.ಎನ್. ಜಗನ್ನಾಥ್ ಅವರ ಖಜಾನೆ ವ್ಯವಸ್ಥಾಪನೆ/ನಿರ್ವಹಣೆ ಕುರಿತಾದ ಈ ಪುಸ್ತಕ ಕನ್ನಡದಲ್ಲಿ ಒಂದು ವಿಶೇಷ ಪ್ರಯತ್ನವಾಗಿದೆ. ಸಾಮಾನ್ಯರಿಗೂ ಅರ್ಥವಾಗುವಂತೆ ವಿದೇಶೀ ವಿನಿಮಯ, ಖಜಾನೆ ನಿರ್ವಹಣೆಯಂತಹ ವಿಷಯಗಳನ್ನು ತಿಳಿಸುವುದರಲ್ಲಿ ಈ ಕೃತಿ ಯಶಸ್ವಿಯಾಗಿದೆ. ಜೆ.ಎನ್. ಜಗನ್ನಾಥ್ ಅವರು ಎಂಕಾಂ, ಎಂಬಿಎ, ಎಂಎ, ಸಿಎಐಐಬಿ, ಖಜಾನೆ ವ್ಯವಸ್ಥಾಪನದಲ್ಲಿ ಡಿಪ್ಲೋಮೋ, ಮಾನವ ಸಂಪನ್ಮೂಲ ವ್ಯವಸ್ಥಾಪನದಲ್ಲಿ ಡಿಪ್ಲೋಮೋ ಹಾಗೂ ಫ್ಲಾರಿಡಾದ ವಿಶ್ವವಿದ್ಯಾನಿಲಯದಿಂದ ಖಜಾನೆ ವ್ಯವಸ್ಥಾಪನ ವಿಷಯದಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. 25ವರ್ಷಗಳ ಕಾಲ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು, ಆರು ವರ್ಷಗಳ ಕಾಲ ಖಜಾನೆ ವ್ಯವಸ್ಥಾಪನದ ವಹಿವಾಟು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು. ನಂತರ ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯಲ್ಲಿ 14 ವರ್ಷಗಳ ಕಾಲ ತರಬೇತಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 50ಕ್ಕೂ ಹೆಚ್ಚು ದೇಶಗಳಿಗೆ ಭೇಟಿಕೊಟ್ಟು ತಮ್ಮ ಕಂಪನಿಯ ಬ್ಯಾಂಕಿಂಗ್ ತಂತ್ರಾಂಶದ ಕುರಿತು ತರಬೇತಿ ನೀಡಿದ್ದಾರೆ.
ಮಕ್ಕಳು ದೇಶದ ಸಂಪತ್ತು, ಯುವಕರು ದೇಶದ ಮಹಾನ್ ಶಕ್ತಿ ಹಾಗೂ ಹಿರಿಯರು ದೇಶದ ಅಮೂಲ್ಯ ಅನುಭವ, ಈ ತ್ರಿವೇಣಿ ಸಂಗಮ ದೇಶದ ಪ್ರಗತಿಗೆ, ಅಭಿವೃದ್ಧಿಗೆ, ಸರ್ವರ ಸುರಕ್ಷತೆಗೆ ಮತ್ತು ಜಾತಿ-ಧರ್ಮ, ಪ್ರದೇಶ-ಭಾಷೆ ಮತ್ತು ಎಲ್ಲ ವರ್ಗಗಳ ನಡುವೆ ಪರಸ್ಪರ ಸೌಹಾರ್ದತೆ ಹಾಗೂ ಸಹಿಷ್ಣುತೆಗೆ ಅತ್ಯಂತ ಮಹತ್ವದ ಕೊಡುಗೆ ಆಗಬಲ್ಲದು. ಯಾವುದೇ ನಾಗರಿಕ ಸಮಾಜ ಅಥವಾ ದೇಶ ಶಿಕ್ಷಣಕ್ಷೇತ್ರವನ್ನು ನಿರ್ಲಕ್ಷಿಸುವಂತಿಲ್ಲ. ಹಾಗೇನಾದರೂ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಮಕ್ಕಳು ದೇಶದ ಬುನಾದಿ-ಭವಿಷ್ಯ ಎಂದ ಮೇಲೆ ಅವರನ್ನು ನಿರ್ಲಕ್ಷಿಸಿದರೆ ಅಥವಾ ಯೋಗ್ಯ ಶಿಕ್ಷಣ ಕೊಡದಿದ್ದರೆ ದೇಶದ ಭವಿಷ್ಯವನ್ನೇ ಕಡೆಗಣಿಸಿದಂತಾಗುತ್ತದೆ ಎಂಬುದು ಸಂಬಂಧಪಟ್ಟ ಎಲ್ಲರಿಗೂ, ಅದರಲ್ಲೂ ಮಕ್ಕಳ ಪಾಲಕರಿಗೆ/ಪೋಷಕರಿಗೆ ಮನದಟ್ಟಾಗಬೇಕು. ಕಾರಣ "ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಅಸ್ತಿಯನ್ನಾಗಿ ಮಾಡುವುದು ಮೇಲು" ಹಾಗಾದಾಗ ಅವರು ಸ್ವತಃ, ಹೆತ್ತವರಿಗೆ, ಸಮಾಜಕ್ಕೆ ಹಾಗೂ ದೇಶಕ್ಕೆ ಆಸ್ತಿಯಾಗುತ್ತಾರೆ. ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡುವುದು ವ್ಯರ್ಥ ಖರ್ಚು ಅಲ್ಲ, ಅದು ಗುಣಮಟ್ಟದ ವಿದ್ಯಾಭ್ಯಾಸದಲ್ಲಿ ಮಾಡುವ ಸದ್ವಿನಿಯೋಗ. ಈ ನಿಟ್ಟಿನಲ್ಲಿ ತಂದೆ-ತಾಯಿಗಳು, ಪಾಲಕರು-ಪೋಷಕರು, ಗುಣಮಟ್ಟ ಹೊಂದಿದ ಶಾಲಾ ಕಾಲೇಜುಗಳು, ಉತ್ತಮ ಶಿಕ್ಷಣ ಸಂಸ್ಥೆಗಳು ಮತ್ತು ಸಮರ್ಥ ಶಿಕ್ಷಕರು ಮಹತ್ವದ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಪ್ರಜ್ಞಾವಂತ ಪ್ರಜೆ ಮತ್ತು ಜವಾಬ್ದಾರಿ ನಾಗರಿಕರನ್ನಾಗಿ ಮಾಡುವ ಶಾಲಾ ಕಾಲೇಜುಗಳ ಸಂಖ್ಯೆ ಕಡಿಮೆ, ಆದುದರಿಂದ ಈ ಸಂಖ್ಯೆ ಬೆಳೆಯಬೇಕು, ಆಗ ಒಳ್ಳೆಯವರ ಸಂಖ್ಯೆ ಬೆಳೆಯುತ್ತದೆ. ಹಾಗಾದಾಗ ದೇಶದ ಒಳಿತಾಗುತ್ತದೆ. - ನ್ಯಾಯಮೂರ್ತಿ ಡಾ. ಶಿವರಾಜ. ವಿ. ಪಾಟೀಲ್.
ಕನ್ನಡದಲ್ಲಿ ತನಗ ಅವತರಿಸಿದ ಗಳಿಗೆ ವಿಶಿಷ್ಟವಾದದ್ದು ಎಂದು ಹೇಳಬೇಕು. ಹಲವರು ಈ ಪ್ರಕಾರದಲ್ಲಿ ಬರೆಯುತ್ತಿದ್ದಾರೆ. ಸಂಕಲನಗಳು ಬಂದಿವೆ. ಕಳೆಯ ನಡುವೆ ಬೆಳೆ ಕಾಣದಾಗುತ್ತಿದೆ ಎಂಬ ಆತಂಕವನ್ನು ಕಳೆಯುವಂತೆ ಭರವಸೆಯ ಬೆಳೆ ತೆಗೆದಿದ್ದಾರೆ ಸುನೀಲ ಹಳೆಯೂರು ಅವರು. ಓದಿದ್ದು ವಾಣಿಜ್ಯ ವೃತ್ತಿಯಲ್ಲಿ ಸಂಸ್ಥೆಯೊಂದರ ಹಿರಿಯ ಮಾರಾಟ ವ್ಯವಸ್ಥಾಪಕ. ಒಲಿದಿದ್ದು ಕಾವ್ಯಕ್ಕೆ: ಕಾವ್ಯದ ಆಂತರ್ಯದ ಪರಿಶೋಧನೆಯಲ್ಲಿ ವಿಶೇಷ ಆಸಕ್ತಿ. ಇದು ಸುನೀಲರ ಅನನ್ಯತೆ. ಕಾವ್ಯವನ್ನು ರಮಣೀಯವಾಗಿಸುವುದು ಅವರಿಗೆ ಮುಖ್ಯವಲ್ಲ.
ಯಂತ್ರ ಕಥೆ ಯಂತ್ರ ಸಾಧನಗಳ ಉಗಮ, ಇತಿಹಾಸ ಹಾಗೂ ದೈನಂದಿನ ಬದುಕಿನಲ್ಲಿ ಅವುಗಳ ಪಾತ್ರವನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಒಂದು ಪ್ರಯತ್ನ. ವಿಜ್ಞಾನದ ಪ್ರಗತಿಯಲ್ಲಿ ಯಂತ್ರಗಳ ಪಾತ್ರ ಮಹತ್ತರ. ಪ್ರತಿಯೊಂದು ಯಂತ್ರವೂ ವಿಕಾಸದ ಹಾದಿಯಲ್ಲಿ ತನ್ನ ವಿಶಿಷ್ಟ ಕೊಡುಗೆ ನೀಡಿದೆ. ಯಂತ್ರೋಪಜೀವಿ ಮಾನವನಿಗೆ ಈ ಪರಂಪರೆಯ ಅಧ್ಯಯನ ಅನಿವಾರ್ಯ, ಲಾಭದಾಯಕ. ಈ ಪುಸ್ತಕದ ಲೇಖಕರಾದ ಶ್ರೀ ಎಂ. ಶಿವಕುಮಾರ್ ಸ್ವತಃ ಯಂತ್ರ ವಿಜ್ಞಾನದಲ್ಲಿ ವಿಶೇಷ ಪರಿಣತಿ ಹೊಂದಿರುವವರು, ಹಲವು ಯಂತ್ರ ಹತಾರಗಳ ವಿನ್ಯಾಸಕ್ಕೆ, ನಿರ್ಮಾಣಕ್ಕೆ ಕಾರಣ ಪುರುಷರು. ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಲೇಖಕರ ಈ ಕೃತಿ ವಿಜ್ಞಾನ ವಿಷಯಕ್ಕೆ ಸಾಹಿತ್ಯದ ಮೆರುಗನ್ನು ಪಡೆದಿದ್ದು, ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪ್ರಥಮ ಪ್ರಶಸ್ತಿ ಪಡೆದ ಪುಸ್ತಕವಾಗಿದೆ.
#
ವ್ಯಕ್ತಿಗತ ಬೆಳವಣಿಗೆಯ ಅತ್ಯಂತ ಪ್ರಮುಖ ಘಟ್ಟವಾದ 13-16ರ ವಯೋಮಾನದಲ್ಲಿರುವ ಪ್ರೌಢಶಾಲಾ ವಿದ್ಯಾರ್ಥಿಯ ವೈಯಕ್ತಿಕ ಆರೋಗ್ಯ, ಆಯ್ದುಕೊಳ್ಳುವ ಕೋರ್ಸ್, ಓದುವ ವಿಧಾನ, ಶಿಸ್ತುಬದ್ಧ ಅಧ್ಯಯನ, ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವ ಬಗೆ, ಮನೋಸ್ವಾಸ್ಥ್ಯ, ಮನೋವಿಶ್ವಾಸ ಹಾಗೂ ಪರೀಕ್ಷಾ ಸಿದ್ಧತೆ ಇತ್ಯಾದಿ ಅಂಶಗಳ ಕುರಿತಾಗಿ ಬೆಳಕು ಚೆಲ್ಲುವ ಇಂಥ ಮಹತ್ವದ ಪುಸ್ತಕವನ್ನು ರಚಿಸಿಕೊಟ್ಟಿರುವ ಡಾ| ಸಿ.ಆರ್. ಚಂದ್ರಶೇಖರ್ ಅವರಿಗೆ ಹಾರ್ದಿಕ ಅಭಿವಂದನೆಗಳು. ಪತ್ರ ರೂಪದಲ್ಲಿ ಓರ್ವ ಜವಾಬ್ದಾರಿಯುತ ತಂದೆ ಅಥವಾ ತಾಯಿ ಅಥವಾ ಭೋದಕ ಅತ್ಯಂತ ಆತ್ಮೀಯವಾಗಿ, ಆಪ್ತವಾಗಿ ತನ್ನ ಮಗ/ಮಗಳು/ ಶಿಷ್ಯನಿಗೆ ಓದಿನ ವಿಷಯವಾಗಿ ತಿಳಿ ಹೇಳುವ ರೀತಿಯಲ್ಲಿರುವ ಇಲ್ಲಿನ ಎಲ್ಲ ಚಿಂತನಗಳು ನಿಜಕ್ಕೂ ಸಕಾಲಿಕವೂ, ವೈಜ್ಞಾನಿಕವೂ, ಅರ್ಥಪೂರ್ಣವೂ ಆಗಿವೆ. – ಪ್ರಕಾಶಕ
ಭಾರತೀಯರಾದ ನಮ್ಮ ಪಾಲಿಗೆ ದೇವಾಲಯಗಳು ಜೀವನಮಾರ್ಗಕ್ಕೆ ಅವಶ್ಯಕವಾದ ಶ್ರದ್ಧಾಕೇಂದ್ರಗಳಾಗಿವೆ. ದೇವಾಲಯಗಳು ಸಮಾಜ-ಸಂಸ್ಕೃತಿ ಇತಿಹಾಸ-ಧರ್ಮ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆಯನ್ನು ನೀಡುತ್ತಾ ನಮ್ಮೊಟ್ಟಿಗೆ ಸಾಗಿ ಬಂದಿವೆ. ಇವುಗಳ ಆಳ-ವೈಶಾಲ್ಯಗಳ ಬಗೆಗೆ ಚಿಂತನ-ಮಂಥನಗಳೂ ನಡೆದುಕೊಂಡು ಬಂದಿವೆ. ಆಲಯಗಳ ಬಗೆಗಿನ ನಮ್ಮ ಶ್ರವಣಾತ್ಮಕ ಅರಿವಿಗಿಂತ ಮಿಗಿಲಾಗಿ ಅವುಗಳನ್ನು ಕಣ್ಣುಂಬ ಕಂಡು ಮಾನಸಿಕ ಸಂತೋಷ-ಸಮಾಧಾನ-ಶಾಂತಿಗಳನ್ನು ಪಡೆಯಬೇಕೆಂದು ನಾವು ಸದಾ ಹಂಬಲಿಸುತ್ತೇವೆ.
Showing 1 to 30 of 32 results